ಟಿಕೆಟ್ ಮಾಯೆಯೋಳ್ ಅದಲು-ಬದಲಿನ ಆಟ
ಕಲಘಟಗಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಥೆಗೊಂದಲ, ಅಸಮಾಧಾನ, ಗುಂಪುಗಾರಿಕೆಯ ವ್ಯಥೆ
Team Udayavani, Jun 27, 2021, 3:29 PM IST
ಹುಬ್ಬಳ್ಳಿ: ರಾಜಕೀಯ ಅಂದರೇನೇ ಹಾಗೆ. ಒಂದೇ ಪಕ್ಷದಲ್ಲಿರುತ್ತಾರೆ, ಇಬ್ಬರೂ ಸ್ನೇಹಿತರಂತೆಯೇ ಗೋಚರಿಸುತ್ತಾರೆ. ಆದರೆ, ಯಾರು, ಯಾವಾಗ, ಎಲ್ಲಿ ತಿವಿಯುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ವಿಧಾನಸಭೆ ಚುನಾವಣೆ ಇನ್ನೂ ಎರಡು ವರ್ಷ ಇರುವಾಗಲೇ ಇಂತಹ ವಿದ್ಯಮಾನಕ್ಕೆ ಕಲಘಟಗಿ ಕ್ಷೇತ್ರ ಸಾಕ್ಷಿಯಾಗತೊಡಗಿದೆ. ಕಾಂಗ್ರೆಸ್ನಲ್ಲಿನ ಟಿಕೆಟ್ ಮಾಯೆ ಹಲವು ಆಯಾಮಗಳನ್ನು ಸೃಷ್ಟಿಸತೊಡಗಿದೆ.
ಕಲಘಟಗಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಬ್ಬರ ನಡುವಿನ ತಿಕ್ಕಾಟ ವಿವಿಧ ಮಗ್ಗಲುಗಳು ಗೋಚರಿಸುವಂತೆ ಮಾಡತೊಡಗಿದೆ. ಏನೇ ಆಗಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನನ್ನದೇ ಎಂದು ಎರಡೂ ಕಡೆಯವರು ಹೇಳಿಕೊಳ್ಳುತ್ತಿದ್ದಾರೆ. ಮುಂದಿನ ಡಿಸಿಎಂ ಇವರೇ ಎಂದು ಜಾನುವಾರುಗಳ ಮೇಲೆ ಬರೆಯುವಂತಹ ಯತ್ನಗಳು ನಡೆಯತೊಡಗಿವೆ. ರಾಜ್ಯಮಟ್ಟದಲ್ಲಿ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ತಿಕ್ಕಾಟ ನಡೆದಿದ್ದರೆ, ಕಲಘಟಗಿಯಲ್ಲಿ ಶಾಸಕ ಸ್ಥಾನದ ಟಿಕೆಟ್ ಕಾದಾಟ ಶುರುವಿಟ್ಟುಕೊಂಡಿದೆ.
ಒಬ್ಬರು ಒಂದು ದಾಳ ಉರುಳಿಸಿದರೆ ಇನ್ನೊಬ್ಬರು ಮತ್ತೂಂದು ದಾಳದ ಮೂಲಕ ಎದುರು ಮೋಡಿ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ನ ಸ್ಥಿತಿ ನೋಡಿದರೆ ಮುಂದಿನ ಚುನಾವಣೆಯಲ್ಲಿ ರಾಜಕೀಯ ಎದುರಾಳಿಗಳ ಹೊಡೆತಕ್ಕಿಂತ, ಸ್ವಪಕ್ಷೀಯರ ಹೊಡೆತ-ಒಳ ಹೊಡೆತವೇ ದೊಡ್ಡ ಪೆಟ್ಟು ಕೊಡಲಿದೆಯೇ ಎಂಬ ಅನುಮಾನ ಮೂಡಿಸಿವಂತೆ ಮಾಡಿದೆ.
ಕಲಘಟಗಿ ಕ್ಷೇತ್ರದ ಕಾಂಗ್ರೆಸ್ನಲ್ಲಿ ಎರಡು ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ಕ್ಷೇತ್ರದ ಜತೆ ನಂಟು ಹೊಂದಿರುವ ವಿಧಾನಪರಿಷತ್ತು ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರ ನಡುವೆ ಟಿಕೆಟ್ ಸಮರ ಶುರುವಾಗಿದೆ. ನಾನಾ ನೀನಾ ಎಂಬಷ್ಟರ ಮಟ್ಟಿಗೆ ಪೈಪೋಟಿ ಹೆಚ್ಚತೊಡಗಿದೆ.
ಪಕ್ಷ ಸಂಘಟನೆ ಜತೆಗೆ ಕಳೆದುಕೊಂಡಿರುವ ಕ್ಷೇತ್ರ ಮರು ವಶಕ್ಕೆ ಶ್ರಮಿಸಬೇಕಾದ ಮುಖಂಡರೇ ರಾಜಕೀಯ ವಿರೋಧಿಗಳ ರೀತಿಯಲ್ಲಿ ಸಮರಕ್ಕಿಳಿದಿರುವುದು, ಏಟಿಗೆ ಎದುರೇಟು ನೀಡಲು ಮುಂದಾಗಿರುವುದು ಸಹಜವಾಗಿಯೇ ಕಾರ್ಯಕರ್ತರಲ್ಲಿ ಗೊಂದಲ ತರಿಸಿದೆ. ಯಾರ ಕಡೆ ಮಾತನಾಡಿದರೂ, ಮುಂದೆ ಯಾರಿಗೆ ಟಿಕೆಟ್ ಸಿಗುತ್ತದೆಯೋ ಯಾರಿಗೆ ಗೊತ್ತು, ಮಾತನಾಡಿ ಯಾಕೆ ನಿಷ್ಠುರವಾಗುವುದೆಂದು ಅನೇಕರು ಮೌನದಿಂದಲೇ ನಾಟಕ ನೋಡತೊಡಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…