ಹೋರಾಟದ ನಡುವೆಯೂ ಮರಗಳ ಮಾರಣಹೋಮ
Team Udayavani, Jun 1, 2018, 5:34 PM IST
ಧಾರವಾಡ: ಬಿಆರ್ಟಿಎಸ್ ಯೋಜನೆಯೊಂದಿಗೇ ನಗರದಲ್ಲಿ ಪ್ರಾರಂಭವಾದ ಮರಗಳ ಮಾರಣಹೋಮ ಇನ್ನೂ ಮುಂದುವರಿದಿದೆ. ಮರಗಳ ಉಳಿವಿಗಾಗಿ ಪರಿಸರವಾದಿಗಳು ನಿತ್ಯ ಹೋರಾಟ ನಡೆಸಿದ್ದರೂ ಅಧಿಕಾರಿಗಳು ಮಾತ್ರ ಅವರ ಮನವಿಗೆ ಪುರಸ್ಕಾರ ನೀಡುತ್ತಲೇ ಇಲ್ಲ.
ಇಲ್ಲಿನ ಬೆಳಗಾವಿ ರಸ್ತೆಯಲ್ಲಿನ ಮರಗಳನ್ನು ಉಳಿಸುವಂತೆ ಪರಿಸರವಾದಿಗಳು ಗುರುವಾರವೂ ಸಹ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಜ್ಯುಬಿಲಿ ವೃತ್ತದಿಂದ ನರೇಂದ್ರ ಕ್ರಾಸ್ವರೆಗೆ ರಸ್ತೆ ಅಗಲೀಕರಣಕ್ಕಾಗಿ ಸುಮಾರು 800 ಗಿಡಗಳನ್ನು ಕಡೆಯಲು ಅರಣ್ಯ ಇಲಾಖೆ ಮುಂದಾಗಿದ್ದು, ಗುರುವಾರ ಸುಮಾರು 80 ಮರಗಳನ್ನು ಧರೆಗುರುಳಿಸಿದ ಕಾರಣಕ್ಕೆ ಮರಗಿದ ಪರಿಸರವಾದಿಗಳು, ವಿವಿಧ ಬಗೆಯ ಬರಹಗಳನ್ನೊಳಗೊಂಡ ಫಲಕಗಳನ್ನು ಮರಗಳಿಗೆ ನೇತುಹಾಕಿ ಪ್ರತಿಭಟಿಸಿದರು.
ಪರಿಸರವಾದಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರಾರಂಭದಲ್ಲಿ ಮರಗಳನ್ನು ಕಡೆಯಲು ಪರವಾನಗಿ ನೀಡಿರಲಿಲ್ಲ. ಆದರೆ ರಾಜಕೀಯ ಒತ್ತಡಕ್ಕೆ ಮಣಿದ ಇಲಾಖೆ ಅಧಿಕಾರಿಗಳು, ಇದೀಗ ಎಲ್ಲ ಮರಗಳನ್ನು ಕಡೆಯಲು ಮುಂದಾಗಿದ್ದರಿಂದ ಕೆಲ ದಿನಗಳಲ್ಲೇ ಎಲ್ಲ ಮರಗಳಿಗೆ ಕೊಡಲಿ ಪೆಟ್ಟು ಬೀಳುವುದಂತೂ ನಿಶ್ಚಿತವಾಗಿದೆ.
ಮರಗಳಿಗೆ ಶ್ರದ್ಧಾಂಜಲಿ: ನಾವು ನಿನಗೆ ಬೈ ಬೈ ಹೇಳುತ್ತಿದ್ದೇವೆ.. ನನ್ನೊಂದಿಗೆ ನೀವು ಹೋಗುತ್ತಿದ್ದೀರಿ, ಹೋಗಿ ಬನ್ನಿ, ಕಲಿಗಾಲವಿದು ನಿಮಗಿದು ಕೊನೆಯ ಕಾಲ..ನನ್ನ ಹಾಗೂ ನನ್ನ ಬಂಧು-ಬಳಗ ಕೊಂದು, ಪ್ರತಿ ನಿಮಿಷವೂ ಸಾಯುತ್ತಿದ್ದೀರಿ, ನಿಮ್ಮ ಅಂಧಕಾರಕ್ಕೆ ನನ್ನದೊಂದು ಧಿಕ್ಕಾರ..ಬಿಸಿಲ ಬೇಗೆಗೆ ಬಾರದ ಮಳೆಗೆ ದೂರಬೇಡಿ ಇನ್ನು ಸುಮ್ಮ ಸುಮ್ಮನೆ ಕೊಂದು ನನನ್ನು..! ಹೀಗೆ ವಿವಿಧ ಬರಹಳನ್ನೊಳಗೊಂಡ ಫಲಕಗಳನ್ನು ನೇತು ಹಾಕುವ ಮೂಲಕ ಮರಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಪರಿಸರವಾದಿಗಳು ತಮ್ಮ ಹಸಿರು ಪ್ರೇಮ ಮೆರೆದರು.
ಪಿ.ವಿ. ಹಿರೇಮಠ ಮಾತನಾಡಿ, ಹಲವು ವರ್ಷಗಳಿಂದ ಜನರ, ಪ್ರಾಣಿ, ಪಕ್ಷಿಗಳ ಒಡನಾಡಿಯಾಗಿದ್ದ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಕಡಿಯುತ್ತಿದ್ದಾರೆ. ನನ್ನನ್ನು ಕೊಂದು ನೀವು ಹೇಗೆ ಬದುಕುತ್ತೀರಿ ಎಂಬ ಮರದ ಪ್ರಶ್ನೆಯೊಂದಿಗೆ ಪ್ರತಿಭಟನೆ ಮಾಡಲಾಗಿದೆ. ಇದೇ ರೀತಿ ಅನೇಕ ಕಡೆಗಳಲ್ಲಿ ರಸ್ತೆಗಳ ನಿರ್ಮಾಣ ಮಾಡಬೇಕಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಿಡಗಳನ್ನು ಉಳಿಸುವ ಮೂಲಕ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತಹ ಯೋಜನೆಗಳನ್ನು ರೂಪಿಸಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು. ಪರಿಸರವಾದಿ ಡಾ| ಪ್ರಕಾಶ ಭಟ್, ಪ್ರಕಾಶ ಗೌಡರ, ಪು.ತಿ. ಶರ್ಮಾ, ಓಟಿಲಿ ಅನಬನ್, ಕಿರಣ ಹಿರೇಮಠ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ