ಮನೆ ಬಾಗಿಲಿಗೇ ಬರುತ್ತೆ ತರಕಾರಿ-ದಿನಸಿ
ತಳ್ಳುಗಾಡಿ ವ್ಯಾಪಾರಕ್ಕೆ ಆದ್ಯತೆ! ಪರಿಣಾಮಕಾರಿ ಅನುಷ್ಠಾನಕ್ಕೆ ಪಾಲಿಕೆ ಸಿದ್ಧತೆ! ಬಾಧ್ಯತೆ ವಹಿಸಲಿ ಜನತೆ
Team Udayavani, May 11, 2021, 9:30 AM IST
ವರದಿ : ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೋವಿಡ್ ಸೋಂಕಿನ ಎರಡನೇ ಅಲೆ ರುದ್ರನರ್ತನದ ಸರಪಳಿ ಕತ್ತರಿಸಲು ಜನರ ಓಡಾಟಕ್ಕೆ ಬ್ರೇಕ್ ಹಾಕಬೇಕಾಗಿದ್ದು, ತರಕಾರಿ, ದಿನಸಿ ವಸ್ತುಗಳ ಖರೀದಿಗೆ ಅಂಗಡಿಗೆ ಹೋಗುವ ಬದಲು ಮನೆ ಬಾಗಿಲಿಗೆ ವಸ್ತುಗಳನ್ನು ದೊರಕಿಸುವತ್ತ ಮಹಾನಗರ ಪಾಲಿಕೆ ಮುಂದಾಗಿದೆ.
ಎರಡನೇ ಅಲೆಯ ತೀವ್ರತೆ ಹೆಚ್ಚಾಗುತ್ತಿದ್ದು, ಮುಂದೆ ಮೂರನೇ ಅಲೆಯ ಆಂತಕವೂ ಆವರಿಸಿದೆ. ದಿನ ಕಳೆದಂತೆಲ್ಲಾ ಸೋಂಕಿತರ ಸಾವಿನ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಈಗಾಗಲೇ ಸಮುದಾಯಕ್ಕೆ ಹಬ್ಬಿರುವ ಸೋಂಕಿನ ಸರಪಳಿ ಕತ್ತರಿಸಲು ಸರಕಾರ ಹಲವು ಪ್ರಯೋಗಗಳಿಗೆ ಮುಂದಾಗಿದೆ.
ಅಗತ್ಯ ವಸ್ತುಗಳ ಖರೀದಿ, ತುರ್ತು ಕಾರ್ಯಗಳು, ಒಂದಿಷ್ಟು ಇಲಾಖೆ, ಕೈಗಾರಿಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಅಗತ್ಯ ವಸ್ತುಗಳ ಖರೀದಿಗೆ ಜನರು ಹೊರ ಬರಬಾರದು. ಆದಷ್ಟು ಜನರು ಮನೆಯಲ್ಲಿದ್ದು ಸೋಂಕು ಹರಡದಂತೆ ತಡೆಯುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಹು-ಧಾ ಮಹಾನಗರ ಪಾಲಿಕೆ ಒಂದು ಹೆಜ್ಜೆ ಮುಂದೆ ಹೋಗಿ ತರಕಾರಿ ಆಯಾ ಪ್ರದೇಶಗಳಿಗೆ ಕಳುಹಿಸುವುದು. ದಿನಸಿ ವಸ್ತುಗಳನ್ನು ಡೋರ್ ಡೆಲಿವರಿ ಕೊಡಿಸುವ ಕಾರ್ಯಕ್ಕೆ ಚಿಂತೆನೆ ನಡೆಸಿದೆ.
ಪಾಸ್ ಅಗತ್ಯವಿಲ್ಲ: ತರಕಾರಿ ಸಂತೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ತಾತ್ಕಾಲಿಕ ಸಂತೆ ಮಾರುಕಟ್ಟೆಗಳಿಗೂ ಕೂಡ ಬ್ರೇಕ್ ಹಾಕಲಾಗಿದೆ. ಒಂದೇ ಕಡೆ ಕುಳಿತು ತರಕಾರಿ ಮಾರಾಟ ಮಾಡಲು ಪಾಲಿಕೆ ಹಾಗೂ ಪೊಲೀಸರು ಅವಕಾಶ ನೀಡುತ್ತಿಲ್ಲ. ಇದರಿಂದ ಜನರಿಗೆ ಸಕಾಲಕ್ಕೆ ತರಕಾರಿ ದೊರೆಯದಂತಾಗಿದೆ. ಅವಳಿನಗರದಲ್ಲಿ ಸುಮಾರು 4000ಕ್ಕೂ ಹೆಚ್ಚು ತರಕಾರಿ ಹಾಗೂ ಹಣ್ಣಿನ ವ್ಯಾಪಾರಿಗಳಿದ್ದು, ತಳ್ಳುವ ಗಾಡಿಗಳ ಮೂಲಕ ಮಾರಾಟ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಕಳೆದ ವರ್ಷ ಈ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. 930 ವ್ಯಾಪಾರಿಗಳಿಗೆ ಅವಕಾಶ ನೀಡಿ ಓಡಾಡಿಕೊಂಡು ಮಾರಾಟ ಮಾಡಲು ಪಾಸ್ ವಿತರಿಸಿ, ಪಾಲಿಕೆ ವೆಬ್ಸೈಟ್ನಲ್ಲಿ ವಾರ್ಡ್ ವಾಡು ವ್ಯಾಪಾರಿಗಳ ಮೊಬೈಲ್ ಸಂಖ್ಯೆ ಹಾಗೂ ಅವರ ಮಾಹಿತಿಯ ಪಟ್ಟಿ ಪ್ರಕಟಿಸಲಾಗಿತ್ತು. ಈಗಾಗಲೇ ಎಲ್ಲ ಸಿದ್ಧತೆಯಿದ್ದು, ಈ ಬಾರಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ. ಕಳೆದ ಬಾರಿಯಂತೆ ಈ ಸಲ ತಳ್ಳುವ ಗಾಡಿಗಳ ಮೂಲಕ ತರಕಾರಿ ವ್ಯಾಪಾರ ಮಾಡಲು ಯಾವುದೇ ಪಾಸ್ ಅಗತ್ಯವಿಲ್ಲ. ಈಗಾಗಲೇ ಕೆಲವರು ತಳ್ಳುವ ಗಾಡಿಗಳ ಮೂಲಕ ವ್ಯಾಪಾರ ಮಾಡುತ್ತಿದ್ದು, ಪೊಲೀಸರಾಗಲಿ, ಪಾಲಿಕೆ ಸಿಬ್ಬಂದಿಯಾಗಲಿ ಆಕ್ಷೇಪಿಸುತ್ತಿಲ್ಲ.
ಇನ್ನು ಈ ಬಾರಿ ಕರ್ಫ್ಯೂ ಆರಂಭದಿಂದಲೂ ಹೋಟೆಲ್ಗಳಿಂದ ತಿಂಡಿ, ಊಟ ಪಾರ್ಸಲ್ಗೆ ಅನುಮತಿಸಲಾಗಿದೆ. ಇದಕ್ಕಾಗಿ ಒಂದಿಷ್ಟು ಜನರು ಬಂದು ಹೋಗುವುದು ನಡೆಯುತ್ತಿದೆ. ಜೊಮ್ಯಾಟೋ, ಸ್ವಿಗ್ಗಿಯಂತಹ ಕಂಪನಿಗಳ ಮೂಲಕವೇ ಗ್ರಾಹಕರಿಗೆ ಪಾರ್ಸಲ್ ತಲುಪಿಸುವ ಕಾರ್ಯ ಮತ್ತಷ್ಟು ಪರಿಣಾಮಕಾರಿಯಾಗಿಸುವ ಕೆಲಸ ನಡೆಯುತ್ತಿದೆ. ಪಾಲಿಕೆಯ ಈ ಕಸರತ್ತಿಗೆ ವ್ಯಾಪಾರಿಗಳ ಹಾಗೂ ಜನರ ಸಹಕಾರ ದೊರೆತರೆ ಅಗತ್ಯ ವಸ್ತುಗಳ ಖರೀದಿಗಾಗಿ ಹೊರಬರುವುದಕ್ಕೆ ಒಂದಿಷ್ಟು ಕಡಿವಾಣ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು : ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ
ಪ್ರಧಾನಿ ಕಚೇರಿ ಅಧಿಕಾರಿ ಎಂದು ಡಿಸಿಗೆ ಕರೆ : ದೂರು ದಾಖಲು!
ನೇತ್ರಾವತಿ ನದಿಗೆ ಈಜಲು ಹೋದ ಐವರು ಯುವಕರು : ಓರ್ವ ನಿರುಪಾಲು, ನಾಲ್ವರ ರಕ್ಷಣೆ
ಮಂಗಳೂರು: ಗೋಮಾಂಸ ಮಾರಾಟ ದಂಧೆ ಭೇದಿಸಿದ ಪೊಲೀಸರು; ಆರೋಪಿ ಪರಾರಿ
ಹೆದ್ದಾರಿ ಅತಿಕ್ರಮಣಕ್ಕಿಲ್ಲಿ ರಹದಾರಿ ನೀಡಿದವರ್ಯಾರು : ಹೆದ್ದಾರಿ ಸವಾರಿ ಆಯೋಮಯ..