ಸರ್ಕಾರಿ ಅಧಿಕಾರಿಗಳಿಂದಲೇ ಮರಕ್ಕೆ ಕೊಡಲಿ
Team Udayavani, Feb 17, 2020, 11:25 AM IST
ಸಾಂಧರ್ಬಿಕ ಚಿತ್ರ
ಧಾರವಾಡ: ಕೆಸಿಡಿ ಸರ್ಕಲ್ ಬಳಿಯ ಪಿಡಿಬ್ಲ್ಯೂ ಡಿ ಕ್ವಾರ್ಟರ್ಸ್ನಲ್ಲಿ ಪರವಾನಗಿ ಇಲ್ಲದೇ 50 ವರ್ಷಗಳಷ್ಟು ಹಳೆಯದಾದ ಹುಣಸೆ ಮರವೊಂದನ್ನು ಅಧಿಕಾರಿಗಳು ಕಡಿದು ಹಾಕಿದ್ದಾರೆ. ಪಿಡಿಬ್ಲ್ಯೂಡಿ ಅಧಿಕಾರಿಯೊಬ್ಬರು ತಮ್ಮ ಮನೆ ಸೌಂದರ್ಯೀಕರಣಕ್ಕಾಗಿ ಇಲ್ಲಿನ ಎರಡು ಮರಗಳನ್ನು ಕಡಿಯಲು ಯೋಜಿಸಿದ್ದರು. ಒಂದು ಮರವನ್ನು ಈಗಾಗಲೇ ಕಡಿದು ಹಾಕಿದ್ದು ಇನ್ನೊಂದು ಮರಕ್ಕೂ ಈಗಾಗಲೇ ಕೊಡಲಿಯಿಂದ ಕತ್ತರಿಸುವ ಮಾರ್ಗಸೂಚಿ ಹಾಕಿದ್ದಾರೆ.
ಧಾರವಾಡದ ಹೃದಯ ಭಾಗದಲ್ಲಿ 50-100 ವರ್ಷಗಳಷ್ಟು ಹಳೆಯದಾದ ಕೆಲವೇ ಕೆಲವು ಮರಗಳು ಇವೆ. ಈ ಪೈಕಿ ಹುಣಸಿ ಮರಗಳು ಕೆಲವು ಮಾತ್ರ. ಈಗಾಗಲೇ ಬೇರೆ ಬೇರೆ ಕಾರಣಗಳಿಗಾಗಿ ಈ ಭಾಗದಲ್ಲಿ ನೂರಕ್ಕೂ ಹೆಚ್ಚು ಗಿಡಮರಗಳನ್ನು ಕಡಿದು ಹಾಕಲಾಗಿದೆ. ಅಳಿದುಳಿದ ಗಿಡಮರಗಳನ್ನು ಸರ್ಕಾರಿ ಅಧಿಕಾರಿಗಳೇ ಕಡಿದು ಹಾಕಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಕೆಸಿಡಿ ವೃತ್ತದಲ್ಲಿ ವಾಹನ ಕಂಪನಿಯೊಂದು ಸಣ್ಣ ಗಿಡವನ್ನು ಕಡಿದು ಹಾಕಿದಾಗ ಪರಿಸರ ಹೋರಾಟಗಾರರು ತೀವ್ರ ಹೋರಾಟ ನಡೆಸಿ ಕಂಪನಿಯಿಂದ ದಂಡ ಹಾಕಿಸಲಾಗಿತ್ತು. ಇದೀಗ ಸರ್ಕಾರಿ ಅಧಿಕಾರಿಗಳೇ ಸರ್ಕಾರದ ಜಾಗದಲ್ಲಿನ ದೈತ್ಯ ಮರವೊಂದನ್ನು ಕಡಿದು ಹಾಕಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್