ಗುರುಪೂಜಾ ಉತ್ಸವ
Team Udayavani, Jul 7, 2017, 12:22 PM IST
ಧಾರವಾಡ: ಜಗತ್ತನ್ನು ಪ್ರೀತಿಸಿ, ನಾವೆಲ್ಲಾ ಒಂದೇ ಕುಟುಂಬದವರು ಎಂದು ಸಾರಿದವರು ಭಾರತೀಯರು. ಇಂತಹ ಪರಂಪರೆಯನ್ನು ಹೊಂದಿದ ಈ ದೇಶವಾಸಿಗಳೇ ಧನ್ಯರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧಾರವಾಡ ಗ್ರಾಮಾಂತರ ತಾಲೂಕು ಕಾಲೇಜು ವಿದ್ಯಾರ್ಥಿ ಒಕ್ಕೂಟದ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಗುರುಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಅವರು ಮಾತನಾಡಿದರು. ಸಹಿಷ್ಣುಗಳಾಗಿ, ನಂಬಿಕಾರ್ಹರಾಗಿ, ತೇಜಸ್ವಿಗಳಾಗಿ, ಧಿಧೀರರಾಗಿಯೂ ಕೂಡ ಬಾಳುತ್ತಿದ್ದೇವೆ. ಆ ಕಾರಣದಿಂದಲೇ ಭಾರತದೆಡೆಗೆ ವಿದೇಶಿಯರು ಮುಖ ಮಾಡಿ ನೋಡುತ್ತಿದ್ದಾರೆ.
ಭಾರತೀಯ ಸಂಸ್ಕೃತಿ, ತತ್ವಾದರ್ಶಗಳು ಜಗತ್ತಿಗೆ ಮಾರ್ಗದರ್ಶಕವಾಗಿದೆ ಎಂದರು. ನಮ್ಮ ಜೀವನದಲ್ಲಿ ನಿರಂತರವಾಗಿ ಗುರುವಿನ ತತ್ವಾದರ್ಶ, ಸಮರ್ಪಣಾ ಭಾವ ಅಳವಡಿಸಿಕೊಳ್ಳುತ್ತ ಬರಬೇಕು. ನಮ್ಮಲ್ಲಿ ಹೆಚ್ಚು-ಹೆಚ್ಚು ಸಮರ್ಪಣಾ ಭಾವ ಬೆಳೆಯಬೇಕು. ಗುರುಗಳಿಗೆ ಸಂಪೂರ್ಣ ಶರಣಾಗತರಾಗಬೇಕು.
ಸಂಘದಲ್ಲಿ ತತ್ವಾದರ್ಶಗಳನ್ನು ಸೂಚಿಸುವ, ಚೈತನ್ಯ ಸಂಕೇತವಾದ, ತ್ಯಾಗ-ಸೇವಾಭಾವದ ಪ್ರತೀಕವಾದ ಭಗವಾ ಧ್ವಜವನ್ನುಗುರುವೆಂದು ಅಂಗೀಕರಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಗುರುವಾದ ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಗುರುದಕ್ಷಿಣೆ ಸಲ್ಲಿಸಿದರು.
ವಿದ್ಯಾಕೇಂದ್ರದ ಕಾರ್ಯದರ್ಶಿ ಶ್ರೀನಿವಾಸ ನಾಡಗೀರ, ಪ್ರಾಚಾರ್ಯರಾದ ಅನಿತಾ ರೈ, ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ ಇದ್ದರು. ಪ್ರಜ್ವಲ ಪ್ರಾರ್ಥಿಸಿದರು. ಸಿದ್ದಾರ್ಥ ಎಚ್ ಸ್ವಾಗತಿಸಿ, ಪರಿಚಯಿಸಿದರು. ದಿಗ್ವಿಜಯ ಘೋರ್ಪಡೆ ನಿರೂಪಿಸಿದರು. ಪ್ರಮೋದ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ