ಜನಾಶೀರ್ವಾದಿಂದ ಸಚಿವನಾಗಿದ್ದೇನೆ: ಜೋಶಿ
ಕುಂದಗೋಳ ವಿಧಾನಸಭಾ ಬಿಜೆಪಿ ಘಟಕದಿಂದ ಸನ್ಮಾನ ಮತಕ್ಷೇತ್ರದ ಮತದಾರರಿಗೆ ಅಭಿನಂದನಾ ಸಮಾರಂಭ
Team Udayavani, Jul 8, 2019, 2:20 PM IST
ಕುಂದಗೋಳ: ಶಿವಾನಂದ ಮಠದ ಪ್ರೌಢಶಾಲಾ ಸಭಾಭವನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಕುಂದಗೋಳ ವಿಧಾನಸಭಾ ಬಿಜೆಪಿ ಘಟಕದಿಂದ ಗೌರವಿಸಲಾಯಿತು.
ಕುಂದಗೋಳ: 6ನೇ ತರಗತಿಯಲ್ಲಿದ್ದಾಗಲೇ ತಂದೆಯೊಂದಿಗೆ ವಿಧಾನಸೌಧದೊಳಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ನಿಮ್ಮೆಲ್ಲರ ಆಶೀರ್ವಾದದಿಂದ ಕೇಂದ್ರದಲ್ಲಿ ಸಚಿವನಾಗಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಪಟ್ಟಣದ ಶಿವಾನಂದ ಮಠದ ಪ್ರೌಢಶಾಲಾ ಸಭಾಭವನದಲ್ಲಿ ರವಿವಾರ ನಡೆದ ಕುಂದಗೋಳ ವಿಧಾನಸಭಾ ಬಿಜೆಪಿ ಘಟಕದಿಂದ ಸನ್ಮಾನ ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 27 ಕೋಟಿ ಮೊತ್ತದ ಬೃಹತ್ ಬಜೆಟ್ ಮಂಡನೆ ಮಾಡಿದ್ದು, ವಿಶ್ವದಲ್ಲಿಯೇ 6ನೇ ದೊಡ್ಡ ಬಜೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು 50 ಲಕ್ಷ ಕೋಟಿ ಬಜೆಟ್ ಮಾಡುವ ಮೋದಿ ಚಿಂತನೆ ನಡೆಸಿದ್ದು, ಇದುವರೆಗೂ ಆಡಳಿತ ಮಾಡಿದ ಪಕ್ಷಗಳು ಕೇವಲ 18 ಕೋಟಿ ಮೊತ್ತದ ಬಜೆಟ್ ಮಂಡಿಸುತ್ತಿದ್ದರು ಎಂದು ಹೇಳಿದರು.
ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಮಾತನಾಡಿ, ದಿ| ಅನಂತಕುಮಾರ ಅವರ ಸ್ಥಾನದಲ್ಲಿ ಜೋಶಿ ಅವರಿದ್ದು, 4ನೇ ಬಾರಿ ಸಂಸದರಾಗಿ ಈಗ ಕೇಂದ್ರದ ಸಚಿವರಾಗಿದ್ದಾರೆ. ಈ ಕ್ಷೇತ್ರದಲ್ಲಿ ಕ್ರೀಡಾಂಗಣ ಅವಶ್ಯವಾಗಿದ್ದು, ಸಂಸ್ಕಾರಣಾ ಘಟಕ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇಲ್ಸೇತುವೆಗಳು ಅವಶ್ಯವಾಗಿವೆ. ತಮ್ಮ ಅಧಿಕಾರಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಎಂ.ಆರ್. ಪಾಟೀಲ ಮಾತನಾಡಿ, ಪ್ರಹ್ಲಾದ ಜೋಶಿ ಅವರು ಕಳೆದ ಅವಧಿಯಲ್ಲಿ ತಮ್ಮ ಅನುದಾನ ಶೇ.40ರಷ್ಟು ಈ ಕ್ಷೇತ್ರಕ್ಕೆ ನೀಡಿದ್ದು, ಶಾಲಾ ಮಕ್ಕಳಿಗೆ ಡೆಸ್ಕ್ ಶೌಚಾಲಯ, ಡಿಜಿಟಲ್ ಕೊಠಡಿಗಳು, ಶುದ್ಧ ನೀರಿನ ಘಟಕಗಳು ಸಮುದಾಯ ಭವನವನ್ನು ಹೆಚ್ಚು ನೀಡಿದ್ದು, ಸಿಆರ್ಎಫ್ ಯೋಜನೆಯಲ್ಲಿ 74 ಕೋಟಿ ರಸ್ತೆ ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ತಾಲೂಕಾಧ್ಯಕ್ಷ ಮಾಂತೇಶ ಶ್ಯಾಗೋಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಭರಮಣ್ಣ ಮುಗಳಿ, ಎನ್.ಎನ್. ಪಾಟೀಲ, ರಮೇಶ ಕೊಪ್ಪದ, ಬಸಣ್ಣ ಬಾಳಿಕಾಯಿ, ರಾಕಾ ಮೈಸೂರ, ಬಸುರಾಜ ಕುಂದಗೋಳಮಠ, ರಾಮಚಂದ್ರ ಬಸಾಪುರ, ಮಲ್ಲಿಕಾರ್ಜುನ ಕಿರೇಸೂರ, ಮಂಜುನಾಥ ಕಂಬಳಿ, ಅಪ್ಪಣ್ಣ ನದಾಫ್, ಗುರು ಪಾಟೀಲ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ