ನಕಲಿ ಹಕ್ಕುಪತ್ರ ನೀಡಿ ವಂಚನೆ: ಪುರಸಭೆಯಲ್ಲಿ ಕೋಲಾಹಲ


Team Udayavani, Jul 14, 2018, 4:59 PM IST

14-july-19.jpg

ಅಣ್ಣಿಗೇರಿ: ಪಟ್ಟಣದ 5ನೇ ವಾರ್ಡ್‌ನಲ್ಲಿ ವಾಸವಾಗಿರುವ 22 ಬಡ ಕುಟುಂಬಗಳಿಗೆ ನಕಲಿ ಹಕ್ಕುಪತ್ರ ನೀಡಿ ವಂಚಿಸಲಾಗಿದೆ. ಈ ವಿಷಯ ಇತ್ಯರ್ಥವಾಗುವ ವರೆಗೆ ಸಾಮಾನ್ಯ ಸಭೆಯ ಕಲಾಪಗಳನ್ನು ನಡೆಸುವಂತಿಲ್ಲ ಎಂದು ಕೆಲ ಸದಸ್ಯರು ಪಟ್ಟು ಹಿಡಿದ ಘಟನೆ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ನ ಮಂಜುನಾಥ ಮಾಯಣ್ಣವರ, ಭೀಮಪ್ಪ ದ್ಯಾವನೂರು, ಬುಡ್ಡೇಶರೀಫ ನದೀಮುಲ್ಲಾ, ಡಿ.ಎಲ್‌. ಅಡಕಾವು, ಪುರಸಭೆ ಉಪಾಧ್ಯಕ್ಷೆ ಬಿಜೆಪಿಯ ಸುಧಾ ಜಂತ್ಲಿ, ಈಶ್ವರಪ್ಪ ಹೊಂಬಳ, ನಾಗರತ್ನ ಅಕ್ಕಿ, ಬಿಎಸ್‌ಆರ್‌ ಕಾಂಗ್ರೆಸ್‌ನ ವೀರೇಶ ಹೊಂಬಳಮಠ, ಜೆಡಿಎಸ್‌ನ ಹೇಮಚಂದ್ರ ಕಡೇಮನಿ ಕಲಾಪ ಆರಂಭಿಸಲು ಅವಕಾಶ ಕೊಡಲಿಲ್ಲ. ನಕಲಿ ಹಕ್ಕುಪತ್ರದ ಆರೋಪ ಮಾಡಿ ಕೋಲಾಹಲ ಸೃಷ್ಟಿಸಿದರು. ಸಭಾ ಮಧ್ಯದಲ್ಲಿ ನೆಲದ ಮೇಲೆ ಕುಳಿತು ಪ್ರತಿಭಟನೆಗೆ ಇಳಿದರು. ಬೇಕೆಂದರಲ್ಲಿ ಸಹಿ ಮಾಡ್ತೀರಾ?: ಪುರಸಭೆ ಅಧ್ಯಕ್ಷೆ ರೂಪಾ ಕಲ್ಲೂರ ಮಾತನಾಡಿ, ಈ ಹಕ್ಕುಪತ್ರಗಳನ್ನು ಆಗಿನ ಶಾಸಕ ಎನ್‌.ಎಚ್‌. ಕೋನರಡ್ಡಿ ನೀಡಿದ್ದಾರೆ. ಅವರಿಗೆ ಗೌರವ ನೀಡಿ ತಾವು ಆ ಹಕ್ಕುಪತ್ರಗಳಿಗೆ ಸಹಿ ಹಾಕಿರುವುದಾಗಿ ತಿಳಿಸಿದರು.

ಹಾಗಾದರೆ ಅವರು ಹೇಳಿದರೆಂದು ಯಾವುದಕ್ಕೆ ಬೇಕಾದರೂ ಸಹಿ ಹಾಕುತ್ತೀರಾ ಎಂದು ಮರು ಪ್ರಶ್ನೆ ಎಸೆದ ಮಾಯಣ್ಣವರ, ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕಿಸುವ ಸಲುವಾಗಿ ಈ ನಕಲಿ ಹಕ್ಕುಪತ್ರಗಳನ್ನು ಸೃಷ್ಟಿಸಿ ನೀಡಿದ್ದು ಗಂಭೀರ ಅಪರಾಧ ಎಂದು ಆರೋಪಿಸಿದರು. ಮೇಲ್ನೋಟಕ್ಕೆ ಖೊಟ್ಟಿ: ನಕಲಿ ಹಕ್ಕುಪತ್ರ ವಿಷಯಕ್ಕೆ ಸಂಬಂಧಿಸಿ ಪುರಸಭೆ ಮುಖ್ಯಾಧಿಕಾರಿ ಬಿ.ಎಫ್‌. ಜಿಡ್ಡಿ ಮಾತನಾಡಿ, ಈ ಹಕ್ಕುಪತ್ರಗಳು ಖೊಟ್ಟಿ ಎಂದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಇದನ್ನು ಪುರಸಭೆಯ ದಾಖಲೆಗಳಲ್ಲಿ ನಮೂದು ಮಾಡಿಲ್ಲ. ವಾಸ್ತವವಾಗಿ ರಾಜೀವ ವಸತಿ ನಿಗಮದ ಕಚೇರಿಯಿಂದ ನೀಡುವ ಹಕ್ಕುಪತ್ರಗಳು ಅಧಿಕೃತವಾಗಿದ್ದು, ಈಗ ನೀಡಲಾಗಿರುವ ಹಕ್ಕುಪತ್ರಗಳಿಗೂ ಪುರಸಭೆಗೂ ಯಾವುದೇ ಸಂಬಂಧ ಇಲ್ಲ. ಅವುಗಳಿಗೆ ಯಾವುದೇ ಮಾನ್ಯತೆ ಇಲ್ಲ. ಅವು ಎಲ್ಲಿಂದ ಬಂದವೋ, ಹೇಗೆ ಬಂದವೋ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನೀವು ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ಏಕೆ ತರಲಿಲ್ಲ, ದೂರನ್ನು ಏಕೆ ನೀಡಲಿಲ್ಲ ಎಂದು ಸದಸ್ಯರು ಮುಗಿಬಿದ್ದರು. ಈ ಕುರಿತು ಮುಖ್ಯಾಧಿಕಾರಿ ಗೊಂದಲಮಯ ಹೇಳಿಕೆ ನೀಡಿದರು. ಪುರಸಭೆ ಕಾಂಗ್ರೆಸ್‌ನ ನಾಮ ನಿರ್ದೇಶಿತ ಸದಸ್ಯರಾದ ಪ್ರಹ್ಲಾದ ಬೆಳಗಲಿ ಹಾಗೂ ಬಸವರಾಜ ಕುಬಸದ ನಕಲಿ ಹಕ್ಕುಪತ್ರ ವಿಷಯ ತನಿಖೆಯಾಗಲೇ ಬೇಕು ಎಂದು ಹಠಕ್ಕೆ ಬಿದ್ದರು.

ಈ ವೇಳೆ ಕಾಂಗ್ರೆಸ್‌ನ ಮತ್ತೊಂದು  ಬಣದ ಸದಸ್ಯರು ಅಧ್ಯಕ್ಷೆ ರೂಪಾ ಅವರ ನೆರವಿಗೆ ಧಾವಿಸಿ ಅವರ ಪರವಾಗಿ ಪ್ರತಿಪಾದಿಸಿದರು. ಇದಾವುದನ್ನು ವಿರೋಧಿ  ಬಣ ಗಣನೆಗೆ ತೆಗೆದುಕೊಳ್ಳಲಿಲ್ಲ. ಗೊಂದಲಮಯ ವಾತಾವರಣದಿಂದಾಗಿ ಅಧ್ಯಕ್ಷರು ಸಭೆ ಮುಂದೂಡಿದರು. ಪುನಃ ಆರಂಭಗೊಂಡ ಸಭೆಗೆ ಮುಖ್ಯಾಧಿಕಾರಿ ಒಳಹೋಗಲು ವಿರೋಧಿ ಸದಸ್ಯರು ಅಡ್ಡಿಪಡಿಸಿ ಅವರು ಒಳಹೋಗದಂತೆ ಬಾಗಿಲ ಮುಂದೆ ಕುಳಿತುಕೊಂಡರು. ಸಭೆ ನಡೆಸಲು ಅನುವು ಮಾಡಿಕೊಡಬೇಕೆಂದು ಅಧ್ಯಕ್ಷೆ ಮನವಿ ಮಾಡಿದರೂ ಕೇಳಲಿಲ್ಲ. ಬಳಿಕ ಸಭೆ ನಡೆಸಲು ಒಳಹೋದ ಅಧ್ಯಕ್ಷೆ ರೂಪಾ ಅವರು, ಭರ್ತಿಯಾದ ಕೋರಂನಲ್ಲಿ ಈಗ ನೀಡಲಾಗಿರುವ ಹಕ್ಕುಪತ್ರಗಳೇ ಅಸಲಿಯಾಗಿದ್ದು ವಿರೋಧಿ ಸದಸ್ಯರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ವಿಷಯ ಪಟ್ಟಿಯಲ್ಲಿದ್ದ ಎಲ್ಲ ವಿಷಯಗಳನ್ನು ಓದಿ ಅಂಗೀಕಾರವಾಗಿವೆ ಎಂದು ಘೋಷಿಸಿದರು. ಸಭೆಯ ಕೊನೆಗೆ ಮುಖ್ಯಾಧಿಕಾರಿಗಳು ಹಾಜರಾದರು.

ನೂತನ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರ ಉಪಸ್ಥಿತಿಯಲ್ಲಿ ಸಾಮಾನ್ಯ ಸಭೆ ನಡೆದು ನಕಲಿ ಹಕ್ಕುಪತ್ರದ ವಿಷಯ ಇತ್ಯರ್ಥವಾಗುವ ವರೆಗೆ ನಾವು ಬಿಡುವುದಿಲ್ಲ.
ಮಂಜುನಾಥ ಮಾಯಣ್ಣವರ,
ಪುರಸಭೆ ಸದಸ್ಯ 

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.