ತಲೆ ಎತ್ತದ ಕಿತ್ತೂರು ಚೆನ್ನಮ್ಮನ ಅರಮನೆ
Team Udayavani, Oct 22, 2022, 6:20 AM IST
ಧಾರವಾಡ: ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗಾಗಲೇ ಕಿತ್ತೂರು ಕಿಲ್ಲಾದ ಪಕ್ಕದ ಲ್ಲಿಯೇ ರಾಣಿ ಚನ್ನಮ್ಮ ತಾಯಿಗೆ ಒಂದು ಚೆಂದದ ಅರಮನೆ ನಿರ್ಮಾಣ ಕಾರ್ಯ ಶುರು ವಾಗಬೇಕಿತ್ತು. ಕಾಲಮಿತಿಯಲ್ಲಿಯೇ ಕಿತ್ತೂರು ಪ್ರವಾಸಿ ತಾಣವಾಗಬೇಕಿತ್ತು.
ಕೋಟೆ ಅಭಿವೃದ್ಧಿ ಯಾಗಬೇಕಿತ್ತು. ಚನ್ನಮ್ಮನ ಖಡ್ಗ ಮರಳಿ ಕಿತ್ತೂರು ವಸ್ತು ಸಂಗ್ರಹಾಲಯ ಸೇರಬೇಕಿತ್ತು. ಇಡೀ ಕಿತ್ತೂರು ದೇಶಗತಿಯ ಎಲ್ಲಾ ದಾಖಲೆಗಳು ಓದಲು, ನೋಡಲು ಸಿಗಬೇಕಿತ್ತು. ಆದರೆ ಎಲ್ಲವೂ ಬರೀ ಮಾತಾಗಿ ಬಿಟ್ಟಿದೆ ಅಷ್ಟೇ.
ಹೌದು. ದೇಶದಲ್ಲಿಯೇ ಮೊದಲು ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ರಾಣಿ ಚನ್ನಮ್ಮನಿಗೆ ಸರ್ಕಾರಗಳು ಕೊಡುತ್ತಿರುವ ಮರ್ಯಾದೆಗೆ ನಿಜಕ್ಕೂ ಚನ್ನಮ್ಮನ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಪ್ರತಿವರ್ಷ ಅ.23ಕ್ಕೆ ನಡೆಯುವ ಕಿತ್ತೂರು ಯುದ್ಧದ ವಿಜಯೋತ್ಸವದ ಕಿತ್ತೂರು ಉತ್ಸವ ಬಂದಾಗ ಮಾತ್ರ ಸರ್ಕಾರದ ಮುಖ್ಯಸ್ಥರು ಇತ್ತ ತಿರುಗಿ ನೋಡುತ್ತಾರೆ. ಇದು ಮುಗಿದ ಮೇಲೆ ಮತ್ತೆ ಕಿತ್ತೂರನ್ನು ಮರೆತು ಬಿಡುತ್ತಾರೆ. ಇದಕ್ಕೆ ಯಾವ ಸರ್ಕಾರಗಳೂ ಹೊರತಾಗಿಲ್ಲ. ಅಧಿಕಾರಿಗಳೂ ಹೊರತಾಗಿಲ್ಲ.
ನೂತನ ಅರಮನೆ ಎಲ್ಲಿ?: ಕಿತ್ತೂರು ಕೋಟೆಗೆ ಹೊಂದಿಕೊಂಡಂತೆ ಪೂರ್ವ ಭಾಗದ 15 ಎಕರೆ ಯಲ್ಲಿ ಮಾದರಿ ಅರಮನೆ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಪ್ರವಾಸಿಗರಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಕಿತ್ತೂರು ಕೋಟೆ ಮತ್ತು ಅರಮನೆಗೆ ಪ್ರತ್ಯೇಕ ಸುಂದರ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ. ಮಾಜಿ ಸಿಎಂ ಬಿಎಸ್ವೈ ಕಿತ್ತೂರು ಮಾದರಿ ಅರಮನೆ ನಿರ್ಮಾಣಕ್ಕೆ 200 ಕೋಟಿ ರೂ. ಕಾಯ್ದಿರಿಸಿದ್ದರು. ಸದ್ಯಕ್ಕೆ 50 ಕೋಟಿ ರೂ. ಬಿಡುಗಡೆ ಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಗತ್ಯ ಸಹ ಕಾರದ ಭರವಸೆ ನೀಡಿದ್ದಾರೆ.
ಕಿತ್ತೂರು ಮಾದರಿ ಅರಮನೆ ನಿರ್ಮಿಸುವಾಗ ಯಾವುದೇ ಕಾರಣಕ್ಕೂ ಈ ಭಾಗದ ಶಿಲ್ಪಕಲಾ ಸಂಸ್ಕೃತಿಗೆ ಧಕ್ಕೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಗುತ್ತಿಗೆ ನೀಡು ವಾಗಲೇ ಈ ಕಠಿಣ ಒಪ್ಪಂದಗಳನ್ನು ಗುತ್ತಿಗೆ ಕಂಪನಿಗೆ ವಿಧಿಸಬೇಕು.
-ಡಾ| ಷಡಕ್ಷರಯ್ಯ, ಇತಿಹಾಸ ತಜ್ಞ,
-ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ