ಉದ್ಯಾನಗಳಿಗೆ ಅನಾಥಪ್ರಜ್ಞೆ
Team Udayavani, May 1, 2020, 2:45 PM IST
ಹುಬ್ಬಳ್ಳಿ: ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಉದ್ಯಾನಗಳು ಲಾಕ್ಡೌನ್ ಹಿನ್ನೆಲೆಯಲ್ಲಿ ಲಾಕ್ ಆಗಿವೆ. ಕಳೆದ 40 ದಿನಗಳಿಂದ ಸಂಪೂರ್ಣ ಸ್ತಬ್ಧವಾಗಿದ್ದು, ಜನರಿಲ್ಲದೆ ಬಣಗುಡುತ್ತಿವೆ. ಬೆಳಗಿನ ಹಾಗೂ ಸಂಜೆಯ ವಾಯುವಿಹಾರ ದೂರದ ಮಾತಾಗಿದೆ. ಪ್ರೇಮಿಗಳ ಚಡಪಟಿಕೆ ಹೇಳತೀರದಾಗಿದ್ದು, ಕೆಲ ಪ್ರಮುಖ ಉದ್ಯಾನಗಳ ಚಿತ್ರಣ ಇಲ್ಲಿದೆ.
ಉಣಕಲ್ಲ ಉದ್ಯಾನ ; ಉಣಕಲ್ಲ ಕೆರೆ ಉದ್ಯಾನ ಹು-ಧಾ ಮಧ್ಯ ಸಂಚರಿಸುವವರನ್ನು ಕೈಬಿಸಿ ಕರೆಯುವ ಸ್ಥಳ. ಇದೀಗ ಯಾರೂ ಇಲ್ಲದೇ ಅನಾಥವಾಗಿದೆ. ಇಲ್ಲಿ ಸೂರ್ಯಾಸ್ತ ನೋಡಲು ಎರಡು ಕಣ್ಣುಗಳು ಸಾಲದು. ಇದಕ್ಕೀಗ ಕೋವಿಡ್ 19 ಬ್ರೇಕ್ ಹಾಕಿದೆ.
ಗಾಜಿನಮನೆ : ಹೃದಯಭಾಗದಲ್ಲಿನ ಇಂದಿರಾ ಗಾಜಿನಮನೆ ಉದ್ಯಾನ ಅನಾಥವಾಗಿ ನಿಂತಿದೆ. ಒಂದು ಕಡೆ ಸ್ಮಾರ್ಟ್ ಸಿಟಿ ಯೋಜನೆಯಡಿ ಉದ್ಯಾನ ನವೀಕರಣ ನಡೆಯುತ್ತಿದ್ದು, ಇದರ ಮಧ್ಯದಲ್ಲಿ ನೂರಾರು ಜನರು ಆಗಮಿಸುತ್ತಿದ್ದರು.
ನೃಪತುಂಗ ಬೆಟ್ಟ: ಬೆಳಗಿನ ಸಮಯದಲ್ಲಿ ನೃಪತುಂಗ ಬೆಟ್ಟಕ್ಕೆ ತೆರಳಲು ವಾಹನಗಳಿಗೆ ಅವಕಾಶ ಇಲ್ಲ. ಹೋಗುವುದಾದರೆ ಕಾಲ್ನಡಿಗೆಯಲ್ಲಿಯೇ ಹೋಗಬೇಕು. ಆದರೆ ಕಳೆದ ಒಂದೂವರೆ ತಿಂಗಳಿಂದ ನೃಪತುಂಗ ಬೆಟ್ಟವೂ ಕೂಡಾ ಕಾಲಿ ಹೊಡೆಯುತ್ತಿದೆ.
-ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ