ಪರ್ಯಾಯ ಸಂತೆ ವ್ಯವಸ್ಥೆಗೆ ಹೊಂದಿಕೊಂಡ ಜನ

ರಸ್ತೆ ಬದಿ ವ್ಯಾಪಾರಕ್ಕೆ ಒತು

Team Udayavani, Jun 6, 2020, 7:41 AM IST

ಪರ್ಯಾಯ ಸಂತೆ ವ್ಯವಸ್ಥೆಗೆ ಹೊಂದಿಕೊಂಡ ಜನ

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಕೋವಿಡ್ ಲಾಕ್‌ಡೌನ್‌ ತೀವ್ರ ಸಂಕಷ್ಟದ ನಡುವೆಯೂ ಒಂದಿಷ್ಟು ಹೊಸ ಜೀವನ ಶೈಲಿ ರೂಪಿಸಿರುವುದು ಸುಳ್ಳಲ್ಲ. ಸಾಮಾಜಿಕ ಅಂತರಕ್ಕೆ ತೊಡಕಾಗಿದ್ದ ವಾರದ ಸಂತೆ ನೆಚ್ಚಿಕೊಂಡಿದ್ದ ವ್ಯಾಪಾರಸ್ಥರು ಈಗ ಬೀದಿಬದಿ ವ್ಯಾಪಾರ ವ್ಯವಸ್ಥೆಗೆ ಅವಲಂಬಿತರಾಗುತ್ತಿದ್ದಾರೆ. ವಾರದ ಸಂತೆಗಾಗಿಯೇ ಕಾಯಬೇಕು ಎನ್ನುವ ಅನಿವಾರ್ಯತೆಯಿಂದ ಮುಕ್ತಗೊಳಿಸಿ ಯಾವಾಗ ಬೇಕಾದರೂ ಹತ್ತಿರದಲ್ಲೇ ತಾಜಾ ತರಕಾರಿ, ಹಣ್ಣು ಸಿಗಲಿದೆ ಎನ್ನುವ ವಿಶ್ವಾಸ ಬೆಳೆಸಿದೆ. ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಇದೊಂದು ಉತ್ತಮ ಬೆಳವಣಿಗೆಯಾಗಿದೆ.

ಅಂತರ ಕಷ್ಟಸಾಧ್ಯ: ಕೋವಿಡ್ ಸೋಂಕು ತಡೆ ನಿಟ್ಟಿನಲ್ಲಿ ಜಿಲ್ಲಾಡಳಿತ ವಾರದ ಸಂತೆಗಳನ್ನು ರದ್ದು ಪಡಿಸಿತ್ತು. ಆದರೂ ಜನರಿಗೆ ನಿತ್ಯ ಅಗತ್ಯ ವಸ್ತುಗಳಲ್ಲಿ ಯಾವುದೇ ಕೊರತೆಯುಂಟಾಗಿಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ತರಕಾರಿ-ಹಣ್ಣು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವ್ಯವಸ್ಥಿತ ಯೋಜನೆ ರೂಪಿಸಿತ್ತು. ವಾರದ ಸಂತೆ ಮಾದರಿಯಲ್ಲೇ ಕೆಲವೊಂದು ಸ್ಥಳ ಗುರುತಿಸಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದಾಗ್ಯೂ ಸಾಮಾಜಿಕ ಅಂತರ ಕಾಣಲಿಲ್ಲ. ಆದರೆ ಲಾಕ್‌ಡೌನ್‌ ಸಡಿಲಿಕೆ ಪರಿಣಾಮ ಸಂಚಾರ ವ್ಯವಸ್ಥೆಯಿಂದ ಇದೀಗ ಆಯಾ ಪ್ರದೇಶಗಳಲ್ಲಿ ಒಂದೆಡೆ ಕುಳಿತು ವ್ಯಾಪಾರಕ್ಕೆ ತಲುಪಿದೆ.

ವಿವಿಧೆಡೆ ತರಕಾರಿ ಲಭ್ಯ: ಮಹಾನಗರ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಇದೀಗ ತರಕಾರಿ, ಹಣ್ಣಿನ ವ್ಯಾಪಾರಿಗಳ ವಹಿವಾಟು ನಡೆಯುತ್ತಿದೆ. ಪ್ರಮುಖ ರಸ್ತೆ, ಹೆಚ್ಚು ಜನ ಓಡಾಡುವ ರಸ್ತೆಗಳಲ್ಲಿ ದೊರೆಯುತ್ತಿದ್ದು, ವ್ಯಾಪಾರಕ್ಕೇನು ಕೊರತೆಯಿಲ್ಲ. ಗೋಕುಲ ರಸ್ತೆ ಪ್ರಮುಖ ಬಡಾವಣೆ ರಸ್ತೆ, ಅಶೋಕ ನಗರ ರಸ್ತೆ, ಕೇಶ್ವಾಪುರ ರಸ್ತೆ, ಲಿಂಗರಾಜ ನಗರ, ಶಿರೂರ ಪಾರ್ಕ್‌, ಘಂಟಿಕೇರಿ, ಬೆಂಡಿಗೇರಿ, ಭವಾನಿ ನಗರ, ಹಳೇ ಹುಬ್ಬಳ್ಳಿ ಹೀಗೆ ಪ್ರಮುಖ ರಸ್ತೆಗಳು ಸೇರಿದಂತೆ ಜನವಸತಿ ಪ್ರದೇಶಗಳಲ್ಲಿ ತರಕಾರಿ ಹಾಗೂ ಹಣ್ಣಿನ ಅಂಗಡಿಗಳು ಸಾಮಾನ್ಯವಾಗಿಬಿಟ್ಟಿವೆ. ಇನ್ನೂ ಕೆಲ ಪ್ರದೇಶಗಳಿಗೆ ಅಕ್ಕಪಕ್ಕದ ಗ್ರಾಮದ ರೈತರು ಬಂದು ನೇರವಾಗಿ ಜನರಿಗೆ ಮಾರಾಟ ಮಾಡುತ್ತಿದ್ದಾರೆ.

ವಾರ ಕಾಯುವ ಅಗತ್ಯವಿಲ್ಲ: ತರಕಾರಿಗಾಗಿಯೇ ಒಂದು ವಾರ ಕಾಯುವ ಮನಸ್ಥಿತಿಯಿಂದ ಜನರು ದೂರವಾಗುತ್ತಿದ್ದಾರೆ. ತಮ್ಮ ಮನೆ ಮುಂಭಾಗ ಅಥವಾ ಹತ್ತಿರದಲ್ಲೇ ತಾಜಾ ತರಕಾರಿ ದೊರೆಯುತ್ತಿರುವುದರಿಂದ ವಾರಗಟ್ಟಲೆ ಕೆಲ ತರಕಾರಿ, ಹಣ್ಣು, ಸೊಪ್ಪನ್ನು ಫ್ರಿಡ್ಜ್ನಲ್ಲಿ ಇರಿಸಿ ಬಳಸುವುದು ಮರೆಯಾಗುತ್ತಿದೆ. ಒಂದು ಅಥವಾ ಎರಡು ದಿನಕ್ಕೆ ಬೇಕಾಗುವಷ್ಟು ಖರೀದಿ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಧಾರವಾಡಕ್ಕೆ ಹೋಲಿಸಿದರೆ ಹುಬ್ಬಳ್ಳಿಯಲ್ಲೇ ವಾರದ ಸಂತೆಗಳು ಹೆಚ್ಚು. ಅವಳಿನಗರ ಸೇರಿ ಸುಮಾರು 13 ಕಡೆ ಅಧಿಕೃತವಾಗಿ ವಾರದ ಸಂತೆಗಳು ನಡೆಯುತ್ತಿದ್ದು, ಈ ಎಲ್ಲಾ ಸಂತೆಗಳ ಮೇಲೆ ಅವಲಂಬನೆಯಾಗಿದ್ದ ಜನರು ಇದೀಗ ಬೀದಿ ಬದಿಯ ವ್ಯಾಪಾರಿಗಳ ಮೇಲೆ ಆಶ್ರಯಿಸಿದ್ದಾರೆ. ಇನ್ನೂ ಕೆಲ ಪ್ರದೇಶಗಳಲ್ಲಿ ವಾಹನ, ತಳ್ಳುವ ಗಾಡಿಗಳ ಮೂಲಕ ಮಾರಾಟವಿದೆ. ಸೋಂಕು ದೂರವಾಗುವವರೆಗೂ ಇದೇ ವ್ಯವಸ್ಥೆ ಸೂಕ್ತ ಎನ್ನುವ ಅಭಿಪ್ರಾಯ ಜನರಲ್ಲಿದೆ.

ಪಾಲಿಕೆಯಿಂದ ತಾತ್ಕಾಲಿಕ ವ್ಯವಸ್ಥೆಯ ನಿರೀಕ್ಷೆ :  ಸಾಮಾಜಿಕ ಆಂತರ ಕಾಯ್ದುಕೊಂಡು ಸೋಂಕು ಹರಡದಂತೆ ತಡೆಗಟ್ಟಲು ವಾರದ ಸಂತೆ ಶೀಘ್ರದಲ್ಲಿ ಆರಂಭಿಸುವುದು ಅಷ್ಟೊಂದು ಸೂಕ್ತವಲ್ಲ. ಎಷ್ಟೇ ನಿರ್ಬಂಧ ಹಾಕಿದರೂ ನಿಯಮ ಪಾಲನೆ ಅಸಾಧ್ಯ. ಹೀಗಾಗಿ ಇದೀಗ ಚಾಲ್ತಿಯಲ್ಲಿರುವ ವ್ಯಾಪಾರದ ವ್ಯವಸ್ಥೆ

ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಸಹಕಾರಿಯಾಗಿರುವುದರಿಂದ ಪಾಲಿಕೆ ಕೈ ಜೋಡಿಸಿದರೆ ಅನುಕೂಲವಾಗುತ್ತದೆ. ಕೆಲವೆಡೆ ಅಗಲವಾದ ರಸ್ತೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವುದು (ಶಾಶ್ವತ ನೆಲೆಗೆ ಅವಕಾಶ ನೀಡದಂತೆ), ತರಕಾರಿ-ಹಣ್ಣುಗಳ ಮಾರಾಟದಿಂದ ಸೃಷ್ಟಿಯಾಗುವ ತ್ಯಾಜ್ಯ ವಿಲೇವಾರಿ ಸೇರಿದಂತೆ ಕೆಲ ಕ್ರಮಗಳ ಬಗ್ಗೆ ಪಾಲಿಕೆ ಸೂಚನೆಗಳನ್ನು ನೀಡಬಹುದಾಗಿದೆ. ಒಮ್ಮೆ ವಾರದ ಸಂತೆ ಆರಂಭಿಸಿ ಆಪ್ರದೇಶದಲ್ಲಿ ಕೋವಿಡ್ ಸೋಂಕು ಪತ್ತೆಯಾದರೆ ಸಂತೆ ರದ್ದು ಮಾಡುವುದು ಕಷ್ಟ. ಹಿಂದೆ ಇಂತಹ ಸಮಸ್ಯೆಯನ್ನು ಪಾಲಿಕೆ ಹಾಗೂ ಪೊಲೀಸರು ಅನುಭವಿಸಿದ್ದಾರೆ.

ವಾರದ ಸಂತೆ ನಿಲ್ಲಿಸಿದ್ದರಿಂದ  ವಾಹನ ಮಾಡಿಕೊಂಡು ವ್ಯಾಪಾರ ಮಾಡೋದು ಖರ್ಚು ಬರುತ್ತಿತ್ತು. ಈಗ ಖಾಲಿ ಜಾಗದಲ್ಲಿ ಕುಳಿತು ಸಂಜೆಯವರೆಗೆ ವ್ಯಾಪಾರ  ಮಾಡುತ್ತಿದ್ದೇವೆ. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ವಾರದ ಸಂತೆ ಆರಂಭವಾಗುವವರೆಗೂ ಪಾಲಿಕೆ, ಪೊಲೀಸರು ಕಿರಿಕಿರಿ ಮಾಡದಂತಾದರೆ ಉತ್ತಮ. -ಲಕ್ಷ್ಮಣ ಬಿಜಾಪುರ, ತರಕಾರಿ ವ್ಯಾಪಾರಿ

 

-ಹೇಮರಡ್ಡಿ ಸೈದಾಪುರ

 

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.