ರಾಮಾಯಣದ ಪ್ರತಿ ಶ್ಲೋಕದಲ್ಲೂ ರಾಮನ ವೈಭವ
Team Udayavani, Apr 5, 2017, 2:37 PM IST
ಹುಬ್ಬಳ್ಳಿ: ರಾಮಾಯಣದ ಪ್ರತಿಯೊಂದು ಶ್ಲೋಕಗಳಲ್ಲಿಯೂ ರಾಮನ ವೈಭವ ಗೋಚರಿಸುತ್ತದೆ ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ಹೇಳಿದರು. ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಶ್ರೀರಾಮ ನವಮಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಮಾಯಣ ದರ್ಶನವೆಂದರೆ ರಾಮನ ದರ್ಶನವೇ ಆಗಿದೆ. ರಾಮಾಯಣದಲ್ಲಿ ಎಲ್ಲೇ ಸ್ಪರ್ಷ ಮಾಡಿದರೂ ಶ್ರೀರಾಮನ ಮಹಿಮೆ ನಮಗೆ ಕಾಣುತ್ತದೆ ಎಂದರು. ಎದುರಿಗೆ ಸ್ತುತಿಸಿ ಹಿಂದೆ ಬೈಯ್ಯುವುದು ಸ್ವಾಮಿ ನಿಷ್ಠೆಯಲ್ಲ, ಹನುಮನದು ನಿಜವಾದ ಸ್ವಾಮಿ ನಿಷ್ಠೆ. ರಾವಣನ ಆಸ್ಥಾನದಲ್ಲಿದ್ದ ಹನುಮಂತ ರಾಮನಿಲ್ಲದಿದ್ದರೂ ರಾಮನನ್ನು ಸ್ಮರಿಸಿಕೊಂಡು, ನಮಿಸಿ ರಾವಣನ ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರಿಸುತ್ತಾನೆ.
ರಾವಣನ ಹತ್ತು ತಲೆಗಳು ಕೇಳುವ ಪ್ರಶ್ನೆಗಳಿಗೆ ರಾಮನ ವಿರೋಧಿ ರಾವಣನ ಇಪ್ಪತ್ತೂ ಕಿವಿಗಳಿಗೂ ಕೇಳುವಂತೆ ಉತ್ತರ ನೀಡುತ್ತಾನೆ ಎಂದು ತಿಳಿಸಿದರು. ಪಂ| ಪ್ರದ್ಯುಮ್ನಾಚಾರ್ಯ ಜೋಶಿ ಮಾತನಾಡಿ, ಸಂಸ್ಕಾರ ಇಲ್ಲದೇ ಸಂಸಾರ ಮಾಡಿದರೆ ಅದು ಹೆಚ್ಚು ದಿನ ಬಾಳುವುದಿಲ್ಲ. ಸಂಸ್ಕಾರ ಇಲ್ಲದಿದ್ದರಿಂದ ಪ್ರಸ್ತುತ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ.
ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಹೆಚ್ಚುತ್ತಿವೆ. ಯಾವ ರೀತಿ ಅವಿಭಕ್ತ ಕುಟುಂಬ ವಿಭಕ್ತ ಕುಟುಂಬವಾಗುವುದನ್ನು ರಾಮಾಯಣ ತೋರಿಸುತ್ತದೆ ಎಂದರು. ಕೊರ್ಲಳ್ಳಿ ನರಸಿಂಹಾಚಾರ್ಯ ಮಾತನಾಡಿ, ಸಮಾಜದಲ್ಲಿ ವಿಚ್ಛೇದನ ಸಾಮಾನ್ಯ ಎಂಬಂತಾಗಿದೆ.
ಮದುವೆಯಾಗಿ 3-4 ವರ್ಷಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ತಲಾಕ್ ಎಂದು ಮೂರು ಬಾರಿ ಹೇಳಿ ವಿಚ್ಛೇದನ ಪಡೆಯುವುದರ ವಿರುದ್ಧ ಮುಸಲ್ಮಾನ ಮಹಿಳೆಯರು ಧ್ವನಿ ಎತ್ತುತ್ತಿರುವಾಗ, ಹಿಂದೂಗಳಲ್ಲಿ ಸಣ್ಣ ಪುಟ್ಟ ಕಾರಣಕ್ಕೆ ಹೆಣ್ಣು ಮಕ್ಕಳು ವಿಚ್ಛೇದನವೊಂದೇ ಮಾರ್ಗ ಎಂಬಂತೆ ವರ್ತಿಸುತ್ತಿರುವುದು ನೋವಿನ ಸಂಗತಿ ಎಂದು ತಿಳಿಸಿದರು.
ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ವತಿಯಿಂದ 7 ದಿನಗಳಲ್ಲಿ 14 ಲಕ್ಷ ರೂ. ಸಂಗ್ರಹಿಸಿ ಸ್ವಾಮಿಗಳಿಗೆ ಸಮರ್ಪಿಸಲಾಯಿತು. ಕೃಷ್ಣ ಕೆಮೂರ, ರಾಘವೇಂದ್ರ ಭಟ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ ಮಾವು ಮೇಳಕ್ಕೆ ಉತ್ತಮ ಸ್ಪಂದನೆ: 40 ಟನ್ ಮಾರಾಟ, ಮತ್ತೆ ಮೂರು ದಿನ ವಿಸ್ತರಣೆ
Dharwad: ಶರಣರ ತತ್ವ ಪ್ರಚಾರಕ್ಕೆ ವಚನ ವಿಶ್ವವಿದ್ಯಾಲಯ ಬೇಕು : ಬಾಲ್ಕಿ ಶ್ರೀ
Hubli: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಭೀಕರ ಹತ್ಯೆ!
Miyazaki: ಧಾರವಾಡ ಮಾವು ಮೇಳದಲ್ಲಿ ಗಮನ ಸೆಳೆದ 2.5 ಲಕ್ಷ ರೂ.ಬೆಲೆಯ ಮಿಯಾ ಜಾಕಿ ಮಾವು
Karnataka Rain ರಾಜ್ಯದ 5 ಜಿಲ್ಲೆಗಳಲ್ಲಿ ಕೃತ್ತಿಕಾ ಮಳೆ ಅಬ್ಬರ
MUST WATCH
ಹೊಸ ಸೇರ್ಪಡೆ
Sunil Chhetri: ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ ಸುನಿಲ್ ಚೇತ್ರಿ
Vijayanagara: ಚಲಿಸುತ್ತಿದ್ದಾಗಲೇ ಟಯರ್ ಬ್ಲಾಸ್ಟ್; ಹೊತ್ತಿ ಉರಿದ ಲಾರಿ
ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದ ಪಾಪಿಗಳು; ಪೊಲೀಸರಿಂದ ಶೋಧ
Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್ನಿಂದ ನಿಧನ
Lok Sabha Election: ರಾಹುಲ್ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ