ರಾಯಣ್ಣಗೆ ಇಲ್ಲಿ ನಿತ್ಯ ಪೂಜೆ


Team Udayavani, Aug 15, 2018, 4:28 PM IST

15-agust-19.jpg

ಬೈಲಹೊಂಗಲ: ದೇಶಕ್ಕಾಗಿ ಬಲಿದಾನ ಮಾಡಿದ ವ್ಯಕ್ತಿ ದೇವರಿಗೆ ಸಮಾನ ಎಂದು ಪೂಜಿಸುವ ಪರಿಪಾಠ ನಮ್ಮಲ್ಲಿದೆ. ಅದರಂತೆ ಅಪ್ರತಿಮ ವೀರ, ಸ್ವಾತಂತ್ರ್ಯ  ಸೇನಾನಿ, ಹುತಾತ್ಮ, ಸ್ವಾಭಿಮಾನಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಪ್ರತಿನಿತ್ಯ ಪೂಜೆ ನಡೆದುಕೊಂಡು ಬರುತ್ತಿದೆ.

ಸಂಗೊಳ್ಳಿಯ ಡೊಳ್ಳಿನ ಮನೆತನದವರು ನಾಲ್ಕು ತಲೆಮಾರಿನಿಂದ ಪೂಜೆ ನಡೆಸಿಕೊಂಡು ಬಂದಿರುವುದು ಇತಿಹಾಸದಲ್ಲಿ ಅಪರೂಪವಾಗಿದೆ. ಕ್ರಿ.ಶ 1829 ರಲ್ಲಿ ಬ್ರಿಟಿಷ ಸರಕಾರ ಕಿತ್ತೂರ ನಾಡಿನ ಇನಾಂ ಭೂಮಿಗಳ ಮೇಲೆ ಕಂದಾಯ ವಿಧಿಸಿತು. ಇದನ್ನು ವಿರೋ ಧಿಸಿ ವೀರ ರಾಯಣ್ಣ ಹಾಗೂ ತಾಯಿ ಕೆಂಚವ್ವ ಕಾಯ್ದೆಗೆ ವಿರೋಧ ವ್ಯಕ್ತ ಪಡಿಸುತ್ತಾರೆ. ರಾಯಣ್ಣ ಗೆಳೆಯ ಚನಬಸ್ಸು, ಮತ್ತಿತರ ಸಂಗಡಿಗರು ಗುಂಪು ಕಟ್ಟಿಕೊಂಡು ಬ್ರಿಟಿಷರನ್ನು ಸದೆ ಬಡಿಯಲು ಅಣಿಯಾಗುತ್ತಾರೆ. ಸಂಪಗಾವ, ಬೀಡಿ, ನಂದಗಡ, ಖಾನಾಪುರ ಸೇನಾ ಠಾಣೆ, ಸರಕಾರಿ ಕಚೇರಿ ಸುಡುತ್ತಾರೆ. ನೇರವಾಗಿ ರಾಯಣ್ಣನನ್ನು ಎದುರಿಸಲಾಗದ ಬ್ರಿಟಿಷರು ಆತನನ್ನು ಮೋಸದಿಂದ ಬಂಧಿಸುತ್ತಾರೆ. 1831 ರಲ್ಲಿ ಜನೇವರಿ 26 ರಂದು ಗಲ್ಲಿಗೇರಿಸುತ್ತಾರೆ.

ಸಂಗೊಳ್ಳಿಯಲ್ಲಿ ವೀರ ಪ್ರತಿಜ್ಞೆ ಮಾಡಿದ ರಾಯಣ್ಣ ಕಟ್ಟೆ ಎಂದು ಕರೆಯಲಾಗುವ ಸ್ಥಳ ಇಂದಿಗೂ ಇದೆ. ಇಲ್ಲಿ ತಾಲೀಮಿನ ಶಕ್ತಿಗಲ್ಲು, ಲೋಡು ಇಡಲಾಗಿದೆ. ಅವುಗಳನ್ನು ರಕ್ಷಿಸಿ ಪೂಜಿಸಲಾಗುತ್ತಿದೆ. ರಾತ್ರಿಯೆಲ್ಲ ಡೊಳ್ಳು ಬಾರಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಗುತ್ತದೆ. ಸರಕಾರದಿಂದ ದೇವಸ್ಥಾನ ನಿರ್ಮಿಸಲಾಗಿದೆ.

ರಾಯಪ್ಪನ ಮಗನಾದ ಲಕ್ಷ್ಮಣ ಡೊಳ್ಳಿನ ಇಂದು ಪೂಜೆ ಕಾರ್ಯ ನೆರವೇರಿಸುತ್ತಾರೆ. ವೀರನಿಗೆ ಊರಲ್ಲಿ ಯಾವುದೇ ಕಾರ್ಯ ನಡೆದರೂ ಅಗ್ರ ಪೂಜೆ ಮಾಡಲಾಗುತ್ತದೆ. ಹೊಸದಾಗಿ ಮದುವೆಯಾದ ದಂಪತಿ ದೇವಸ್ಥಾನಕ್ಕೆ ತೊಟ್ಟಿಲು ಕಟ್ಟಿ ಗಂಡು ಮಗುವಿಗೆ ಹರಕೆ ಸಲ್ಲಿಸುತ್ತಾರೆ. ಪ್ರತಿವರ್ಷ ಜನೆವರಿ 12,13 ರಂದು ಸಂಗೊಳ್ಳಿ ಉತ್ಸವ ನಡೆಯುತ್ತದೆ. ಮಲಪ್ರಭಾ ಪವಿತ್ರ ಜಲದಿಂದ ಅಭಿಷೇಕ, ಉತ್ತತ್ತಿ, ಕುಂಕುಮ, ಭಂಡಾರ ಪೂಜೆ ನಡೆಸಲಾಗುತ್ತದೆ. ಅ. 15 ರಂದು ರಾಯಣ್ಣ ಜಯಂತಿ, ಜ.26 ರಂದು ಹುತಾತ್ಮ ಸ್ಮರಣೆ ಕಾರ್ಯಕ್ರಮ ನಡೆಯುತ್ತದೆ. ಸಂಗೊಳ್ಳಿ ಗ್ರಾಮಸ್ಥರು ರಾಯಣ್ಣನ ಜಾತ್ರೆಯನ್ನು ದವನದ ಹುಣ್ಣಿಮೆಯಂದು 3 ದಿನ ಜಾತ್ರೆ ಕಾರ್ಯಕ್ರಮ ನಡೆಸಿ ರಾಯಣ್ಣನನ್ನು ಸ್ಮರಿಸಲಾಗುತ್ತದೆ.

ಸಂಗೊಳ್ಳಿ ಗ್ರಾಮದ ಹತ್ತಿರದ ಮಲಪ್ರಭಾ ನದಿ ದಡದ ಮೇಲೆ ದೊರೆ ಮಲ್ಲಸರ್ಜನ ಮೊದಲ ಪತ್ನಿ ರಾಣಿ ರುದ್ರಮ್ಮಾಜಿ ಸಮಾಧಿ ಅವಸಾನದ ಅಂಚು ತಲುಪಿದೆ ಅದನ್ನು ರಾಜ್ಯ ಪುರಾತತ್ವ ಇಲಾಖೆ ಸುರಕ್ಷಿತ ಸ್ಮಾರಕವೆಂದು ಘೋಷಿಸುವ ಅಗತ್ಯತೆಯಿದೆ.

ರುದ್ರಮ್ಮಾಜಿ ಸಮಾಧಿ ನಿರ್ಲಕ್ಷ್ಯ 
ಕಿತ್ತೂರ ಚೆನ್ನಮ್ಮನ ಸಂಸ್ಥಾನ ಉಳಿವಿಗೆ ಹೋರಾಡಿದ ರುದ್ರಮ್ಮಾಜಿ ಸ್ಮರಣೆಗೆ ದೊರೆ ಮಲ್ಲಸರ್ಜ ಕಟ್ಟಿದ ಸಮಾಧಿ 1947 ರಲ್ಲಿ ನಯಾನಗರ ಹತ್ತಿರ ಮಲಪ್ರಭಾ ದಂಡೆ ಮೇಲೆ ಆಣೆಕಟ್ಟೆ ಕಟ್ಟಿದ ಬಳಿಕ ನದಿಯಲ್ಲಿ ಮುಳುಗಿತು. ಈಗಲೂ ಬೇಸಿಗೆಯಲ್ಲಿ ಈ ಸಮಾಧಿ ಕಂಡು ಬರುತ್ತದೆ. ಸದ್ಯ ಇದರ ಕಲ್ಲು ಕಳಚಿ ಬೀಳುತ್ತಿವೆ. ಅವುಗಳನ್ನು ಇತಿಹಾಸದ ಕುರುಹಾಗಿ ರಕ್ಷಣೆ ಮಾಡುವ ಅಗತ್ಯವಿದೆ. ಸಮಾಧಿ  ಸ್ಥಳದ ರಕ್ಷಣೆಗೆ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇನ್ನೂ ಸಂರಕ್ಷಣೆ ಕಾರ್ಯ ನಡೆದಿಲ್ಲ. ರಾಯಣ್ಣ ಪ್ರಾ ಧಿಕಾರದಿಂದ ಸಂಗೊಳ್ಳಿಯಲ್ಲಿರುವ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಬೇಕಿದೆ. 
 ಬಸವರಾಜ ಕಮತ, ಸಂಗೊಳ್ಳಿ
ಪ್ರಾಧಿಕಾರದ ತಜ್ಞ ಸಮಿತಿ ಸದಸ್ಯ, ಸಂಶೋಧಕ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.