ಬೀದಿ ಕಾಮಣ್ಣರ ಬಂಧನ
Team Udayavani, Jun 29, 2019, 11:38 AM IST
ಹುಬ್ಬಳ್ಳಿ: ಬಂಧಿತರಾದ ರೋಡ್ ರೋಮಿಯೋಗಳು.
ಹುಬ್ಬಳ್ಳಿ: ಯುವತಿಯರನ್ನು ಚುಡಾಯಿಸುತ್ತಿದ್ದ ಎಂಟು ಜನ ರೋಡ್ ರೋಮಿಯೋಗಳನ್ನು ಶುಕ್ರವಾರ ಬೆಂಡಿಗೇರಿ ಠಾಣೆ ವ್ಯಾಪ್ತಿಯ ‘ಚೆನ್ನಮ್ಮಾ ಪಡೆ’ ಮಫ್ತಿ ತಂಡದವರು ಬಂಧಿಸಿದ್ದಾರೆ.
ಹಳೇಹುಬ್ಬಳ್ಳಿ ಬಾಣಂತಿ ಕಟ್ಟೆಯ ತನ್ವಿರ್ ಜೆ. ಶಕೀನಾ, ಆರೀಫ್ ಎಸ್. ಮುಲ್ಲಾ, ಸದರಸೋಫಾದ ತೌಸೀಫ್ ಎಂ. ಕುಂದಗೋಳ, ಬುಲ್ಡೋಜರ್ ನಗರದ ಸಮೀರ್ ಎಚ್.ಅರಳಿಕಟ್ಟಿ, ಯಲ್ಲಾಪುರ ಓಣಿಯ ಉಮರಫಾರೂಕ್ ಎಂ. ಬೇಪಾರಿ, ಮಂಟೂರ ರಸ್ತೆಯ ಉಮರಫಾರೂಕ್ ಎಂ.ಕರಡಿ, ಮಿಲ್ಲತ್ ನಗರದ ಉಸ್ಮಾನ್ ಜಿ. ಕರಡಿ, ಉಮರಫಾರೂಕ್ ಎಂ. ಕರ್ಜಗಿ ಬಂಧಿತರಾಗಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಸಿಪಿ ರವಿ ನಾಯ್ಕ ನೇತೃತ್ವದಲ್ಲಿ ಬೆಂಡಿಗೇರಿ ಠಾಣೆ ಇನ್ಸ್ಪೆಕ್ಟರ್ ಡಿ. ಸಂತೋಷಕುಮಾರ, ಪಿಎಸ್ಐ ಎಸ್.ಆರ್. ಕಿತ್ತೂರ, ಸಿಬ್ಬಂದಿಗಳಾದ ಎಂ.ಡಿ. ಹುಲಕೋಟಿ, ಆರ್.ಎಸ್. ರಾಠೊಡ, ಸಿ.ಕೆ.ಲಮಾಣಿ ಅವರನ್ನೊಳಗೊಂಡ ತಂಡ ಇಲ್ಲಿನ ಘಂಟಿಕೇರಿಯ ನೆಹರು ಕಾಲೇಜ್, ಮಂಟೂರ ರಸ್ತೆ, ವೀರಾಪುರ ಓಣಿ, ಸೆಟ್ಲಮೆಂಟ್ ಬಳಿ ಪ್ರದೇಶಗಳಲ್ಲಿ ಯುವತಿಯರನ್ನು ಚುಡಾಯಿಸುತ್ತಿದ್ದಾಗ ಬಂಧಿಸಿದೆ.
ಪೊಲೀಸರ ಕಾರ್ಯಕ್ಕೆ ಆಯುಕ್ತ ಎಂ.ಎನ್. ನಾಗರಾಜ್ ಬಹುಮಾನ ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು