ರೈತರ ಪಂಪ್ಸೆಟ್ಗಳಿಗೆ ಏಳು ತಾಸು ತ್ರಿಫೇಸ್ ವಿದ್ಯುತ್
ಸಿಂಗಲ್ಫೇಸ್ ವಿದ್ಯುತ್ ಪೂರೈಕೆ ವೇಳೆಯಲ್ಲಿ ಪಂಪ್ಸೆಟ್ ಚಾಲನೆಯಲ್ಲಿಡಬೇಡಿ
Team Udayavani, Jul 24, 2019, 3:58 PM IST
ಧಾರವಾಡ: ನಿಗದಿ ಗ್ರಾಮದ ಮಲೆನಾಡು ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯಲ್ಲಿ ಗ್ರಾಹಕ ಜಾಗೃತಿ ಸಭೆ ಜರುಗಿತು.
ಧಾರವಾಡ: ನೀರಾವರಿ ಪಂಪ್ಸೆಟ್ ಫೀಡರ್ಗಳಿಗೆ (ಮಾರ್ಗಗಳಿಗೆ) ಸರ್ಕಾರಿ ಆದೇಶದನ್ವಯ ತ್ರಿಫೇಸ್ ವಿದ್ಯುತ್ ಪೂರೈಕೆಯನ್ನು 7 ಗಂಟೆಗಳ ಕಾಲ ಎರಡು ಅಥವಾ ಒಂದೇ ಸರದಿಯಲ್ಲಿ ನೀಡಲಾಗುತ್ತಿದೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಧಾರವಾಡ ಗ್ರಾಮೀಣ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಟಿಂಗರೀಕರ ಹೇಳಿದರು.
ನಿಗದಿ ಗ್ರಾಮ ಹಾಗೂ ಅಳ್ನಾವರ ಪಟ್ಟಣದಲ್ಲಿ ಪ್ರತ್ಯೇಕವಾಗಿ ಜರುಗಿದ ವಿದ್ಯುತ್ ಬಳಕೆಯಲ್ಲಿ ಸುರಕ್ಷತೆ ಮತ್ತು ಉಳಿತಾಯದ ಕುರಿತ ಗ್ರಾಹಕ ಜಾಗೃತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾತ್ರಿ ಹೊಲದಲ್ಲಿರುವ ಮನೆಗಳಿಗಾಗಿ ಓಪನ್ಡೆಲಾr (ಸಿಂಗಲ್ ಫೇಸ್) ನೀಡಲಾಗುತ್ತಿದೆ. ಈಗಾಗಲೇ ಎಲ್ಲ ಉಪಕೇಂದ್ರಗಳಲ್ಲಿ ನೀರಾವರಿ ಪಂಪ್ಸೆಟ್ ಮಾರ್ಗಗಳಿಗೆ ನ್ಯೂಮರಿಕಲ್ರಿಲೆ ಅಳವಡಿಸಲಾಗಿದ್ದು, ಉಳಿದಂತಹ ಮಾರ್ಗಗಳಿಗೆ ಆ. 1ರೊಳಗಾಗಿ ನ್ಯೂಮರಿಕಲ್ರಿಲೆ ಅಳವಡಿಸಲಾಗುತ್ತಿದೆ ಎಂದರು.
ಹೆಸ್ಕಾಂ ಗ್ರಾಹಕರು ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಿ ತಮ್ಮ ಅಹವಾಲು ಸಲ್ಲಿಸಬಹುದು. ಪ್ರತಿ ತಿಂಗಳ 3ನೇ ಶನಿವಾರದಂದು ನಡೆಯುವ ವಿದ್ಯುತ್ ಅದಾಲತ್ ಹಾಗೂ ಗ್ರಾಹಕರ ಸಂವಾದ ಸಭೆಯಲ್ಲಿ ಭಾಗವಹಿಸಿ ತಮ್ಮ ದೂರುಗಳನ್ನು ನೀಡಬಹುದು. ಒಂದು ವೇಳೆ ರೈತರು ಓಪನ್ ಡೆಲಾr(ಸಿಂಗಲ್ ಫೇಸ್ ಪೂರೈಕೆ) ಸಮಯದಲ್ಲಿ ಕೆಪ್ಯಾಸಿಟರ್ ಅಳವಡಿಸಿ ತಮ್ಮ ಪಂಪ್ಸೆಟ್ಗಳನ್ನು ಚಾಲನೆ ಮಾಡಿದರೆ ಸಂಪೂರ್ಣ ಮಾರ್ಗ (ಫೀಡರ್) ಟ್ರಿಪ್ ಆಗಿ ಹೊಲದಲ್ಲಿರುವ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತವಾಗುತ್ತದೆ. ರೈತರು ತ್ರಿಫೇಸ್ ವಿದ್ಯುತ್ ಪೂರೈಕೆ ಸಮಯದಲ್ಲಿ ಮಾತ್ರ ತಮ್ಮ ಪಂಪ್ಸೆಟ್ಗಳನ್ನು ಚಾಲನೆಯಲ್ಲಿಟ್ಟು ಸಹಕರಿಸಬೇಕು ಎಂದ ಮನವಿ ಮಾಡಿದರು.
ಗ್ರಾಮೀಣ ಶಾಖೆ-2ರ ಶಾಖಾಧಿಕಾರಿ ಸಹದೇವ ಇಂಗಳಗಿ ಹಾಗೂ ಅಳ್ನಾವರ ಶಾಖೆಯ ರೋಹಿತ್ ಸಾಳುಂಕೆ ಮಾತನಾಡಿದರು.
ಪ್ರಾಂಶುಪಾಲ ಸಿ.ಎನ್. ಹೆಬ್ಟಾಳ, ಶಿವು ಬಸನಕೊಪ್ಪ, ನಿಗದಿಯ ಮಲೆನಾಡು ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ಅಧ್ಯಕ್ಷ ಮಲ್ಲನಗೌಡ ಎಸ್. ಪಾಟೀಲ್ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ