ತಹಶೀಲ್ದಾರ್ ಕಚೇರಿಗೆ ಮುತ್ತಿಗೆ
Team Udayavani, Feb 7, 2020, 11:42 AM IST
ಕುಂದಗೋಳ: ಬೆಂಬಲ ಬೆಲೆಯಡಿ ಶೇಂಗಾ ಖರೀದಿಗೆ ರೈತರು ಹೆಸರು ನೋಂದಾಯಿಸುತ್ತಿರುವಾಗ ಜಿಪಿಎಸ್ ತಾಂತ್ರಿಕ ತೊಂದರೆಯಿಂದಾಗಿ ಬೆಳೆ ಕ್ಷೇತ್ರವೇ ಬದಲಾಗಿರುವುದರಿಂದ ಖರೀದಿಸಲು ಅಧಿಕಾರಿಗಳು ತಿರಸ್ಕರಿಸಿದ್ದರಿಂದ ರೈತರು ಗುರುವಾರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟಿಸಿದ ಘಟನೆ ಜರುಗಿತು.
ಮುಖಂಡ ಮುತ್ತು ಶಿವಳ್ಳಿ ಮಾತನಾಡಿ, ರೈತರು ಪ್ರಸಕ್ತ ವರ್ಷ ತಮ್ಮ ಹೊಲದಲ್ಲಿ ಶೇಂಗಾ ಬೆಳೆದಿದ್ದರೂ ಜಿಪಿಎಸ್ನಲ್ಲಿ ಮಾತ್ರ ಹತ್ತಿ ಬೆಳೆ ಎಂದು ನಮೂದಾಗಿರುವುದರಿಂದ ಬೆಂಬಲ ಬೆಲೆಯಿಂದ ರೈತರು ವಂಚಿತರಾಗುತ್ತಿದ್ದಾರೆ. ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಅಸಮರ್ಪಕವಾಗಿ ಜಿಪಿಎಸ್ ಮಾಡಿರುವುದರಿಂದ ಈ ಅಚಾತುರ್ಯ ಸಂಭವಿಸಿದೆ. ಇದರಿಂದ ಸಾವಿರಾರು ರೈತರು ಬೆಂಬಲ ಬೆಲೆಯಿಂದ ವಂಚಿತರಾಗುತ್ತಿದ್ದಾರೆ. ಈ ಕೂಡಲೇ ರೈತರಿಗೆನ್ಯಾಯ ನೀಡುವವರೆಗೂ ಬೀಗ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು.
ನಂತರ ತಹಶೀಲ್ದಾರ್ ರೈತರೊಂದಿಗೆ ಸಮಾಲೋಚಿಸಿ,ನಿಮಗೆ ತೊಂದರೆ ಆಗದ ರೀತಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಬೆಳೆ ದೃಢೀಕರಣ ಪತ್ರವನ್ನು ನಾವೇ ನೀಡುತ್ತೇವೆ. ಖರೀದಿ ಕೇಂದ್ರದಲ್ಲಿ ಇದನ್ನು ನೀಡಿ ನಿಮ್ಮ ಶೇಂಗಾ ಬೆಳೆಯನ್ನು ಮಾರಾಟ ಮಾಡಲು ಅನುವು ಮಾಡಿಕೊಡುವುದಾಗಿ ಹೇಳಿದ ಬಳಿಕ ಕಚೇರಿ ಬೀಗವನ್ನು ತೆರೆದರು. ಮುಖಂಡ ಶೇಖಣ್ಣ ಬಾಳಿಕಾಯಿ ಮಾತನಾಡಿ, ರೈತರ ಶೇಂಗಾ ಬೆಳೆಯನ್ನು ಇಲ್ಲೇ ಖರೀದಿಸಬೇಕು ಹಾಗೂ 10 ಕ್ವಿಂಟಲ್ ಬೆಳೆಯನ್ನು ಖರೀದಿಸುವಂತೆ ಸೂಚಿಸಬೇಕೆಂದು ಒತ್ತಾಯಿಸಿದರು.
ಪರಶುರಾಮ ಕಲಾಲ, ರವಿ ಕಿರೇಸೂರ, ಶಿವಾನಂದ ಕೊಪ್ಪದ, ಉಮೇಶಗೌಡ ಅಲ್ಲಾಪುರ, ಬಸವರಾಜ ಅಲ್ಲಾಪುರ, ಜಿ.ಎಸ್. ಸುಂಕದ, ಎಸ್.ಬಿ. ಗೌಡಪ್ಪನವರ, ಬಸವರಾಜ ಹೂಗಾರ, ಮಂಜುನಾಥ ರಂಗನಾಯ್ಕರ, ಯು.ವೈ. ಪಾಟೀಲ, ಬಸವರಾಜ ರೇವಡೆಣ್ಣವರ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು