ಹೊಸೂರು ನಿಲ್ದಾಣದಿಂದ ಉಪ ನಗರ ಸಾರಿಗೆ ಬಸ್ ಸಂಚಾರ
Team Udayavani, Jun 23, 2021, 4:47 PM IST
ಹುಬ್ಬಳ್ಳಿ: ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ನಿಲ್ದಾಣ ಕಟ್ಟಡ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಉಪ ನಗರ ಸಾರಿಗೆ ಬಸ್ ಗಳನ್ನು ಹೊಸೂರು ಪ್ರಾದೇಶಿಕ ಟರ್ಮಿನಲ್ ಗೆ ಸ್ಥಳಾಂತರಗೊಳಿಸಿದ್ದು, ಜೂ.23ರಿಂದ ಎಲ್ಲಾ ಉಪನಗರ ಬಸ್ಗಳು ಹೊಸೂರು ಬಸ್ ನಿಲ್ದಾಣದಿಂದ ಸಂಚಾರ ಮಾಡಲಿವೆ.
ಹೊಸೂರು ಬಸ್ ನಿಲ್ದಾಣದಲ್ಲಿ ವಿದ್ಯಾನಗರ ಭಾಗದಲ್ಲಿ ಫೀಡರ್ ಬಸ್ಗಳ ಸಂಚಾರಕ್ಕೆ ಪ್ರತ್ಯೇಕ ನಿಲ್ದಾಣ ನಿರ್ಮಿಸಲಾಗಿತ್ತು. ಇದೀಗ ಹಳೇ ಬಸ್ ನಿಲ್ದಾಣದಲ್ಲಿ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಸ್ಥಳದಿಂದ ಉಪನಗರ ಸಾರಿಗೆ ಬಸ್ಗಳು ಸಂಚರಿಸಲಿವೆ.
ಹಳೇ ಬಸ್ ನಿಲ್ದಾಣದಿಂದ ಕೋವಿಡ್ ಪೂರ್ವದಲ್ಲಿ 45 ಅನುಸೂಚಿಗಳಲ್ಲಿ ಸುಮಾರು 378 ಟ್ರಿಪ್ಗ್ಳಲ್ಲಿ ಬಸ್ಗಳು ಸಂಚರಿಸುತ್ತಿದ್ದವು. ಈ ಎಲ್ಲಾ ಮಾರ್ಗದ ಬಸ್ಗಳು ಹೊಸೂರು ಬಸ್ ಟರ್ಮಿನಲ್ನಿಂದ ಸಂಚರಿಸಲಿವೆ.
ಯಾವ್ಯಾವ ಬಸ್ಗಳು ಸ್ಥಳಾಂತರ:
ಉಪ ನಗರ ಸಾರಿಗೆಗಳಾದ ಬ್ಯಾಹಟ್ಟಿ, ಸುಳ್ಳ, ಕುಸಗಲ್ಲ, ಮಿಶ್ರಿಕೋಟಿ, ಚವರಗುಡ್ಡ, ರಾಮಾಪುರ, ಕುರವಿನಕೊಪ್ಪ, ದೇವರಗುಡಿಹಾಳ, ಗಿರಿಯಾಲ, ಶಿರಗುಪ್ಪಿ, ತಾರಿಹಾಳ, ಚಾಲನಾ ತರಬೇತಿ ಕೇಂದ್ರ, ಇಟಗಟ್ಟಿ, ದುಮ್ಮವಾಡ, ಜಿ.ಬಸವನಕೊಪ್ಪ, ರಾಮನಗರ, ಮಂಟೂರು, ಛಬ್ಬಿ, ಬೊಮ್ಮಸಮುದ್ರ, ಬೆಟದೂರು, ಕರಡಿಕೊಪ್ಪ, ಅಲ್ಲಾಪುರ ಗ್ರಾಮಗಳಿಗೆ ಸಂಚರಿಸುವ ಬಸ್ಗಳು ಹೊಸೂರು ಬಸ್ ನಿಲ್ದಾಣದಿಂದ ಸಂಚರಿಸಲಿವೆ.
ಸಂಪರ್ಕ ಬಸ್ಗಳು: ವಿವಿಧ ಗ್ರಾಮಗಳಿಂದ ಬರುವ ಜನರು ಹಳೇ ಬಸ್ನಿಲ್ದಾಣದ ಸುತ್ತಲಿನ ಮಾರುಕಟ್ಟೆ ಪ್ರದೇಶಕ್ಕೆ ಹೋಗಲು ಬಿಆರ್ಟಿಎಸ್ ಚಿಗರಿ ಬಸ್ಗಳ ಮೂಲಕ ಸಂಚರಿಸಬಹುದು. ಇಲ್ಲವೆ ಕಿಮ್ಸ್, ನವನಗರ, ಗಾಮನಗಟ್ಟಿ ಸೇರಿದಂತೆ ಕೆಲ ನಗರ ಸಾರಿಗೆ ಬಸ್ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿವೆ. ಈ ಬಸ್ಗಳು ನಿಲ್ದಾಣದೊಳಗೆ ಬಂದು ಹೋಗುವುದರಿಂದ ಈ ಬಸ್ಗಳ ಮೂಲಕ ಸಂಚರಿಸಬಹುದಾಗಿದೆ. ಹಳೇ ಬಸ್ ನಿಲ್ದಾಣದಿಂದ ಹುಬ್ಬಳ್ಳಿ-ಧಾರವಾಡ ವಾಯವ್ಯ ಸಾರಿಗೆ ಬಸ್ಗಳು ಹಾಗೂ ಹು-ಧಾ (100 ಸಂಖ್ಯೆಯ) ಚಿಗರಿ ಬಸ್ಗಳ ಸ್ಥಳಾಂತರ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.
ಪ್ರಯಾಣಿಕರ ಬೇಡಿಕೆ ನೋಡಿಕೊಂಡು ಹಳೇ ಬಸ್ ನಿಲ್ದಾಣದಿಂದ ಹೊಸೂರು ಬಸ್ ನಿಲ್ದಾಣಕ್ಕೆ ವಿಶೇಷ ಬಸ್ ಗಳ ವ್ಯವಸ್ಥೆ ಬಗ್ಗೆ ನಿರ್ಧರಿಸಲಾಗುವುದು ಎಂದು ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ