Dharwad; ಮತ ಗಳಿಕೆಗಾಗಿ ಕಾಂಗ್ರೆಸ್ ನಿಂದ ದೇಶ ವಿಭಜನೆಯ ಮಾತು: ಅರವಿಂದ ಬೆಲ್ಲದ್
Team Udayavani, Feb 2, 2024, 5:59 PM IST
ಧಾರವಾಡ: ಬರೀ ಮತಗಳಿಕೆಗಾಗಿ ದೇಶವನ್ನೇ ಮಾರಾಟ ಮಾಡಲು ಹಿಂದೆ-ಮುಂದೆ ನೋಡದ ಕಾಂಗ್ರೆಸ್ ನವರು, ಮತಗಳ ಆಸೆಗೆ ಯಾವ ಮಟ್ಟಕ್ಕಾದರೂ ಇಳಿಯಲು ಹಿಂಜರಿಯಲ್ಲ ಎಂಬುವುದು ಸಂಸದ ಡಿ.ಕೆ. ಸುರೇಶ್ ಹೇಳಿಕೆಯಿಂದ ಸಾಬೀತಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಚುನಾವಣೆಯಲ್ಲಿ ಮತಗಳು ಬರಬೇಕು ಎಂಬ ಆಸೆಯಿಂದ ದಕ್ಷಿಣ ಭಾರತವನ್ನು ಉತ್ತರ ಭಾರತದಿಂದ ದೂರ ಮಾಡಬೇಕು ಎಂಬ ಹೇಳಿಕೆಯನ್ನು ಡಿ.ಕೆ. ಸುರೇಶ್ ತಪ್ಪು ಒಪ್ಪಿಕೊಂಡು ಹಿಂಪಡೆಯಬೇಕು. ದೇಶದ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ ಎಂದರು.
ಒಂದು ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಇಂಥ ಹೇಳಿಕೆ ನೀಡಬಾರದು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ. ಸುರೇಶ ವಿರುದ್ಧ ಕ್ರಮಕೈಗೊಳ್ಳಬೇಕು. ಕಾಂಗ್ರೆಸ್ ನವರಿಗೆ ತಾವು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದಿಲ್ಲ ಎಂಬುದು ಗ್ಯಾರಂಟಿಯಾಗಿದೆ. ಹೀಗಾಗಿ ರಾಜ್ಯದಲ್ಲಿನ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ವಿಚಾರ ಅವರಲ್ಲಿವಿದೆ ಎಂದರು.
ಜನರ ದಾರಿ ತಪ್ಪಿಸುವ ಉದ್ದೇಶದಿಂದ ಡಿ.ಕೆ. ಸುರೇಶ್ ಇಂತಹ ಹೇಳಿಕೆ ನೀಡಿದ್ದಾರೆ. ಇದೇ ರೀತಿ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಈ ಹಿಂದೆಯೇ ಮಾಡಿದ್ದಾರೆ. ಮೆಟ್ರೊದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ನಲ್ಲಿ ಬೋರ್ಡ್ ಇರುತ್ತದೆ. ಅಲ್ಲಿ ಹಿಂದಿ ಬೋರ್ಡ್ ಹಾಕಿ ಉತ್ತರ ಭಾರತದ ಹಿಂದಿ ಭಾಷೆ ಹೇರುತ್ತಿದ್ದಾರೆ ಎಂಬುದಾಗಿ ಸುಳ್ಳು ಗದ್ದಲ ಎಬ್ಬಿಸಿದ್ದರು. ಇನ್ನೂ ಚುನಾವಣೆ ಸಂದರ್ಭದಲ್ಲಿ ನಂದಿನಿ ಹಾಗೂ ಅಮೂಲ್ ಹಾಲು ಎಂದು ಕ್ಯಾತೆ ತೆಗೆದಿದ್ದರು ಎಂದು ದೂರಿದರು.
ಪ್ರಾಚೀನ ಕಾಲದಿಂದಲೂ ಭಾರತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇದೆ. ಇದನ್ನು ವಿಭಜಿಸುವ ಮಾತು ಸರಿಯಲ್ಲ. ಹೆಚ್ಚು ಜಿಎಸ್ಟಿ ತುಂಬುವ ಪಟ್ಟಿಯಲ್ಲಿ ಕರ್ನಾಟಕ, ತಮಿಳುನಾಡು ಇದ್ದರೆ, ಕೇರಳ ಮುಂದುವರೆದ ರಾಜ್ಯ. ತೆಲಂಗಾಣ ಪ್ರಗತಿಶೀಲ ರಾಜ್ಯ, ಹೀಗಾಗಿ ದಕ್ಷಿಣಗಳು ಉತ್ತರ ರಾಜ್ಯಗಳಿಗಿಂತ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳಾಗಿರುವುದು ಸತ್ಯ ಎಂದು ಅರವಿಂದ ಬೆಲ್ಲದ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ
ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು