ನೀರು ಬಳಕೆದಾರರ ಸಹಕಾರಿ ಸಂಘಗಳ ಪುನಶ್ಚೇತನಕ್ಕಿಲ್ಲ  ಕ್ರಮ


Team Udayavani, May 11, 2017, 10:26 AM IST

water-750-120.jpg

ಹುಬ್ಬಳ್ಳಿ: ನೀರಿನ ಕೊರತೆ ನೀಗಿಸಲು ಪಾತಾಳಗಂಗೆ ಬಳಕೆ ಬಗ್ಗೆ ಬಿಸಿಯೇರಿದ ಚರ್ಚೆ ನಡೆಯುತ್ತಿದೆ. ಆದರೆ, ಇದ್ದ ನೀರಿನ ಸಂಗ್ರಹ, ಮಿತ ಹಾಗೂ ಸದ್ಬಳಕೆಗೆ ಪೂರಕವಾಗುವ ನೀರು ಬಳಕೆದಾರರ ಸಹಕಾರಿ ಸಂಘಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಸಂಘಗಳ ಪುನಾರಚನೆ ಹಾಗೂ ಪುನಶ್ಚೇತನ ಕುರಿತ ತಜ್ಞರ ವರದಿ ಕಳೆದ ಎರಡೂವರೆ ವರ್ಷಗಳಿಂದ ಧೂಳು ತಿನ್ನುತ್ತಿದೆ.

ವಿಶ್ವಬ್ಯಾಂಕ್‌ ಆಕ್ಷೇಪ-ಒತ್ತಡದ ಹಿನ್ನೆಲೆಯಲ್ಲಿ ಎಸ್‌.ಎಂ. ಕೃಷ್ಣ  ನೇತೃತ್ವದ ಸರ್ಕಾರ ಕೃಷಿಗೆ ನೀರಿನ ಸದ್ಬಳಕೆಗೆ ರಾಜ್ಯಾದ್ಯಂತ ನೀರು ಬಳಕೆದಾರರ ಸಂಘಗಳನ್ನು ರಚಿಸಿತ್ತು. ಸಂಘಗಳಿಗೆ ರಾಜಕೀಯ ಸೋಂಕು ತಗುಲಿ ಹಾಗೂ ಆರ್ಥಿಕ ನೆರವು ಕೊರತೆಯಿಂದ ಬಹುತೇಕ ಸಂಘಗಳು ಕಣ್ಣು ಮುಚ್ಚಿದವು. ಅಳಿದುಳಿದ ಸಂಘಗಳು ಇದ್ದೂ ಇಲ್ಲದ ಸ್ಥಿತಿಯಲ್ಲಿವೆ. ಸಂಘಗಳ ಪುನಾರಚನೆ, ಪುನಶ್ಚೇತನ ಕೂಗು ಹೆಚ್ಚುತ್ತಿದೆ.

ದೇಶದಲ್ಲಿ ಸುಮಾರು 1,123 ಬಿಲಿಯನ್‌ ಘನ ಮೀಟರ್‌ನಷ್ಟು ನೀರು ಲಭ್ಯವಿದೆ. ಲಭ್ಯತೆ ನೀರಿನಲ್ಲಿ ಶೇ.70-80ರಷ್ಟು ನೀರು ಕೃಷಿಗೆ ಬಳಕೆಯಾದರೆ, ಶೇ.20ರಷ್ಟು ನೀರು ಮನೆಬಳಕೆ, ವಿದ್ಯುತ್‌, ಉದ್ಯಮ, ಸಾರಿಗೆ ಇತ್ಯಾದಿಗೆ ಬಳಕೆ ಆಗುತ್ತಿದೆ. ಕೃಷಿ ಬಳಕೆ ನೀರಿನಲ್ಲಿ  ಕೇವಲ ಶೇ.30-35ರಷ್ಟು ಮಾತ್ರ ಬೆಳೆಗಳಿಗೆ ತಲುಪುತ್ತಿದ್ದು,  ಶೇ. 70ರಷ್ಟು ನೀರು ಪೋಲಾಗುತ್ತಿದೆ ಎಂಬುದು ಜಲತಜ್ಞರ ಅಭಿಮತ.

ಬೇಕಿದೆ ಸಹಭಾಗಿತ್ವದ ಜಾಗೃತಿ: ರೈತರ ಪಾಲುದಾರಿಕೆ ನೀರಾವರಿ ನಿರ್ವಹಣೆ ಪದ್ಧತಿಯನ್ನು ಮೆಕ್ಸಿಕೋ, ಫಿಲಿಪೈನ್ಸ್‌, ಅಮೆರಿಕ ಇನ್ನಿತರ ಕಡೆಗಳಲ್ಲಿ ಅನುಸರಿಸಲಾಗುತ್ತಿದೆ. 1980ರಿಂದೀಚೆಗೆ ದೇಶದಲ್ಲಿ ರೈತರ ಪಾಲುದಾರಿಕೆ ನೀರಾವರಿ ನಿರ್ವಹಣೆ ಪದ್ಧತಿ ಹೆಚ್ಚು ಪ್ರಚಾರ ಪಡೆದುಕೊಳ್ಳತೊಡಗಿತ್ತು. 1985ರಲ್ಲಿ ರಾಜ್ಯದಲ್ಲೂ ಸಂಘ ಆರಂಭಗೊಂಡಿತ್ತು.

ನೀರಾವರಿ ಯೋಜನೆಗಳಿಗಾಗಿ ಸಾವಿರಾರು ಕೋಟಿ ರೂ.ಗಳ ನೆರವು ನೀಡಲಾಗುತ್ತದೆ. ಆದರೆ ನೀರಿನ ನಿರ್ವಹಣೆ, ಸದ್ಬಳಕೆಗೆ ರೈತರ ಪಾಲುದಾರಿಕೆಗೆ ಇಲ್ಲವಾಗುತ್ತಿದೆ ಎಂಬ ವಿಶ್ವಬ್ಯಾಂಕ್‌ನ ಆಕ್ಷೇಪದಿಂದಾಗಿ ಎಸ್‌.ಎಂ.ಕೃಷ್ಣ  ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಚ್‌.ಕೆ.ಪಾಟೀಲರು, ಕರ್ನಾಟಕ ನೀರಾವರಿ ಕಾಯ್ದೆ 2003ರ ಅಡಿಯಲ್ಲಿ ನೀರು ಬಳಕೆದಾರರ ಸಹಕಾರಿ ಸಂಘಗಳನ್ನು ಸ್ಥಾಪನೆಗೆ ಕ್ರಮ ಕೈಗೊಂಡು, 1960ರ ಕರ್ನಾಟಕ ಸಂಘಗಳ ಸಹಕಾರಿ ಕಾಯ್ದೆಯಡಿ ಸಂಘಗಳನ್ನು ನೋಂದಾಯಿಸಲಾಗಿತ್ತು.

ನೀರು ಬಳಕೆದಾರರ ಸಂಘ, ಆಯಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ), ಕೆಬಿಜೆಎನ್‌ಎಲ್‌ ಉಸ್ತುವಾರಿ ಜವಾಬ್ದಾರಿ ಇತ್ತು. ನೀರು ಬಳಕೆದಾರ ಸಂಘಕ್ಕೆ ನೀಡುವ ನೀರಿಗೆ ಇಂತಿಷ್ಟು ಹಣ ನಿಗದಿ ಪಡಿಸಲಾಗುತ್ತಿತ್ತು. ರೈತರಿಂದ ಹಣ ಸಂಗ್ರಹಣೆ ಮಾಡಬೇಕಾಗಿತ್ತು. ನೀರು ಸಂಗ್ರಹ, ಸರಬರಾಜು, ವಾರಾಬಂದಿ ಇನ್ನಿತರ ರೀತಿಯಲ್ಲಿ ನೀರು ಹಂಚಿಕೆ, ಕಾಲುವೆಗಳ ಸುಸ್ಥಿತಿ ಇನ್ನಿತರ ಕಾರಣಕ್ಕೆ 11 ಸದಸ್ಯರನ್ನೊಳಗೊಂಡ ಸಂಘದ ನಿರ್ದೇಶಕ ಮಂಡಳಿಗಳನ್ನು ರಚಿಸಲು ಅದರಲ್ಲಿ ಕಡ್ಡಾಯವಾಗಿ ಒಬ್ಬರು ಕಾಲುವೆ ಕೊನೆಯ ಭಾಗದ ರೈತರು, ಪರಿಶಿಷ್ಟ ಜಾತಿ/ಪಂಗಡದ ಒಬ್ಬರು, ಇತರೇ ಹಿಂದುಳಿದ ವರ್ಗ ಹಾಗೂ ಮಹಿಳೆಯರು ತಲಾ ಇಬ್ಬರು ಇರಬೇಕಾಗಿದೆ. ಒಂದು ಸಂಘದಲ್ಲಿ ಸಾಮಾನ್ಯವಾಗಿ 500ರಿಂದ 1,000 ಹೆಕ್ಟೇರ್‌ ನೀರಾವರಿ ಪ್ರದೇಶ ಹೊಂದಿರಬೇಕೆಂದು ಯೋಜಿಸಲಾಗಿತ್ತು.

ಕಾಲುವೆ ದುರಸ್ತಿಗಾಗಿ ಒಂದು ಬಾರಿ ಅನುದಾನ ಅಡಿಯಲ್ಲಿ ಸರ್ಕಾರ ಒಂದು ಸಂಘಕ್ಕೆ 5ಲಕ್ಷ ರೂ.ಗಳನ್ನು ನೀಡಲು ನಿರ್ಧರಿಸಿತ್ತು. ಸಂಘಗಳೇ ದುರಸ್ತಿ ಕಾರ್ಯ ಕೈಗೊಳ್ಳಬಹುದಾಗಿತ್ತು. ಕಾಲುವೆ ಸ್ಥಿತಿಗತಿ ಕುರಿತಾಗಿ ಸಂಘ ಹಾಗೂ ಅಧಿಕಾರಿಗಳ ಜಂಟಿ ಸಮೀಕ್ಷೆ ಕೈಗೊಳ್ಳಬೇಕಾಗಿತ್ತು. ರಾಜ್ಯದಲ್ಲಿ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನಲ್ಲಿ ಜಂಟಿ ಸಮೀಕ್ಷೆ ಆಗಿದ್ದು ಬಿಟ್ಟರೆ ಬೇರೆ ಕಡೆ ಆಗಿರಲಿಲ್ಲ. ಇತ್ತೀಚೆಗೆ ಧಾರವಾಡ ಕೃವಿವಿಯ ಡಾ| ಆರ್‌.ಎಸ್‌.ಪೋದ್ದಾರ ಅವರ ಇಚ್ಚಾಶಕ್ತಿಯ ಫ‌ಲವಾಗಿ ಆಲಮಟ್ಟಿ ಎಡದಂಡೆ ನಾಲೆಯಲ್ಲಿ ಜಂಟಿ ಸಮೀಕ್ಷೆ ಆಗಿದೆ.

ಧೂಳು ತಿನ್ನುತ್ತಿದೆ ವರದಿ
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರು ನೀರಿನ ಸದ್ಬಳಕೆ, ನಿರ್ವಹಣೆ ಹಾಗೂ ಸವಳು-ಜವಳು ತಡೆ ನಿಟ್ಟಿನಲ್ಲಿ ಅಧ್ಯಯನ ನಡೆಸಿ ವರದಿ ನೀಡುವಂತೆ ಎಂ.ಶಿವಸ್ವಾಮಿ ನೇತೃತ್ವದಲ್ಲಿ ಏಳು ಸದಸ್ಯರಿದ್ದ ತಜ್ಞರ ಸಮಿತಿ ರಚನೆ ಮಾಡಿದ್ದರು. ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದ ತಂಡ ನೀರು ಸಂಗ್ರಹ, ನಿರ್ವಹಣೆ, ಹಂಚಿಕೆ ಕುರಿತಾಗಿ ಅಧ್ಯಯನ ನಡೆಸಿ 2014ರ ಸೆಪ್ಟಂಬರ್‌ನಲ್ಲಿ ವರದಿ ಸಲ್ಲಿಸಿತ್ತು. ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಆದಷ್ಟು ಶೀಘ್ರ ಕ್ರಮದ ಭರವಸೆ ನೀಡಿದ್ದರೂ ಇಂದಿಗೂ ಯಾವುದೇ ಕ್ರಮ ಆಗಿಲ್ಲ.

– ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Will Dhoni play IPL next year too..?; What did Rayudu say?

IPL ಮುಂದಿನ ವರ್ಷವೂ ಧೋನಿ ಆಡುತ್ತಾರಾ..?; ರಾಯುಡು ಹೇಳಿದ್ದೇನು?

A person who voted for a BJP candidate eight times; The video went viral

Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್

Iranian President Ebrahim Raisi passed away in a helicopter crash

Ebrahim Raisi; ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಇರಾನ್ ಅಧ್ಯಕ್ಷ ರೈಸಿ

To India’s youth get jobs, Modi should retire: Rahul Gandhi

Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ

ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್‌ ಆರೋಪ

State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್‌ ಆರೋಪ

Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ

Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ

ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

Govt ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Will Dhoni play IPL next year too..?; What did Rayudu say?

IPL ಮುಂದಿನ ವರ್ಷವೂ ಧೋನಿ ಆಡುತ್ತಾರಾ..?; ರಾಯುಡು ಹೇಳಿದ್ದೇನು?

A person who voted for a BJP candidate eight times; The video went viral

Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್

Iranian President Ebrahim Raisi passed away in a helicopter crash

Ebrahim Raisi; ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಇರಾನ್ ಅಧ್ಯಕ್ಷ ರೈಸಿ

To India’s youth get jobs, Modi should retire: Rahul Gandhi

Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.