ಗದಗ-ಬೆಟಗೇರಿ ನಗರಸಭೆ; 3.28 ಕೋಟಿ ರೂ. ಉಳಿತಾಯ ಬಜೆಟ್‌

ಕಾರ್ಮಿಕ ಸಿಬ್ಬಂದಿ ಸಂಬಳಕ್ಕಾಗಿ 5.10 ಕೋಟಿ ರೂ. ಮೀಸಲಿರಿಸಲಾಗಿದೆ.

Team Udayavani, Mar 30, 2022, 5:53 PM IST

ಗದಗ-ಬೆಟಗೇರಿ ನಗರಸಭೆ; 3.28 ಕೋಟಿ ರೂ. ಉಳಿತಾಯ ಬಜೆಟ್‌

ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ ಅವರು ಮಂಗಳವಾರ 2022-23ನೇ ಸಾಲಿನ 3.28 ಕೋಟಿ ರೂ. ಉಳಿತಾಯದ ಚೊಚ್ಚಲ ಬಜೆಟ್‌ ಮಂಡಿಸಿದರು. ಆರಂಭಿಕ ಶುಲ್ಕ 38.97 ಕೋಟಿ ರೂ. ಹಾಗೂ 192.12 ಕೋಟಿ ರೂ. ಸ್ವೀಕೃತಿ ಆದಾಯ ಸೇರಿದಂತೆ ಒಟ್ಟು 230.09 ಕೋಟಿ ರೂ. ಬಜೆಟ್‌ನಲ್ಲಿ 227.81 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಹೀಗಾಗಿ, 3.28 ಕೋಟಿ ರೂ. ಉಳಿತಾಯವಾಗಲಿದೆ. ಈ ಬಾರಿ ಬಜೆಟ್‌ನಲ್ಲಿ ಅವಳಿ ನಗರದಲ್ಲಿ ಮೂಲ ಸೌಕರ್ಯ ಹೆಚ್ಚಿಸುವುದು, ಹಸಿರೀಕರಣ ಮತ್ತು ಸೌಂದರ್ಯಿಕರಣ ಸೇರಿದೆ ಎಂದರು.

ನಿರೀಕ್ಷಿತ ಆದಾಯ: ರಾಜಸ್ವ ಖಾತೆಯಲ್ಲಿ 5,799.65 ಲಕ್ಷ ರೂ., ಬಂಡವಾಳ ಖಾತೆಯಲ್ಲಿ 1,922.80 ಲಕ್ಷ ರೂ., ಅಸಾಧಾರಣ ಖಾತೆಯಲ್ಲಿ 11,490.79 ಲಕ್ಷ ರೂ. ಸೇರಿ ಒಟ್ಟು 19,212.80 ಲಕ್ಷ ರೂ. ಸ್ವೀಕೃತಿ ನಿರೀಕ್ಷಿಸಲಾಗಿದೆ. ಇದರಲ್ಲಿ ರಾಜಸ್ವ ಖಾತೆಯಲ್ಲಿ 6,298.67 ಲಕ್ಷ ರೂ. ರಾಜಸ್ವ ವೆಚ್ಚವನ್ನು ನಿರೀಕ್ಷಿಸಿ, 499.02 ಲಕ್ಷ ರೂ. ಕೊರತೆ ನಿರೀಕ್ಷಿಸಲಾಗಿದೆ. ಬಂಡವಾಳ ಖಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ 3,534.79 ಲಕ್ಷ ರೂ. ವೆಚ್ಚಕ್ಕಾಗಿ ಮೀಸಲಿರಿಸಿ, 1,612.43 ಲಕ್ಷ ರೂ. ಕೊರತೆ ಅಂದಾಜಿಸಲಾಗಿದೆ.

ಸರ್ಕಾರದ ಮುಕ್ತ ನಿಧಿ ಅನುದಾನ 20.2 ಕೋಟಿ ರೂ., ವೇತನ ಅನುದಾನ 1318 ಕೋಟಿ ರೂ., ವಿಚ್ಯುಚ್ಛಕ್ತಿ ಅನುದಾನದಿಂದ 1727 ಕೋಟಿ ರೂ., ನೀರು ಸರಬರಾಜು ವ್ಯವಸ್ಥೆಗಾಗಿ ಪ್ರಕೃತಿ ವಿಕೋಪ ಪರಿಹಾರ ನಿ ಧಿಯಿಂದ 15 ಲಕ್ಷ ರೂ. ನಿರೀಕ್ಷಿಸಲಾಗಿದೆ. ತೆರಿಗೆ ಆದಾಯ ದಿಂದ 95.5 ಕೋಟಿ ರೂ. ಅಭಿವೃದ್ಧಿ ಶುಲ್ಕ 25 ಕೋಟಿ ರೂ., ಕಟ್ಟಡ ಅನುಮತಿ ಶುಲ್ಕ 1.23 ಕೋಟಿ ರೂ., ವಾಣಿಜ್ಯ ಮಳಿಗೆಗಳಿಂದ 55 ಲಕ್ಷ ರೂ., ಅಂಗಡಿಗಳ ಅನುಮತಿಯಿಂದ 75 ಲಕ್ಷ ರೂ., ಖಾತಾ ನಕಲು ಶುಲ್ಕದಿಂದ 7.85 ಲಕ್ಷ ರೂ., ಖಾತಾ ಬದಲಾವಣೆಯಿಂದ 95 ಲಕ್ಷ ರೂ., ಘನ ತ್ಯಾಜ್ಯ ನಿರ್ವಹಣೆಯಿಂದ 45.66 ಲಕ್ಷ ರೂ., ನೀರು ಪೂರೈಕೆಯಿಂದ 26.6 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದರು.

ಅಂದಾಜು ವೆಚ್ಚಗಳು: ಸಿಬ್ಬಂದಿ ವೇತನ, ಆಡಳಿತ ವೆಚ್ಚಕ್ಕಾಗಿ ಶೇ.16, ಆಡಳಿತ ವೆಚ್ಚಕ್ಕೆಕ್ಕೆ ಶೇ.4, ದುರಸ್ತಿ ಮತ್ತು ನಿರ್ವಹಣೆ ವೆಚ್ಚಕ್ಕಾಗಿ ಶೇ. 33.33, ಕಾರ್ಯಕ್ರಮ ವೆಚ್ಚಕ್ಕಾಗಿ ಶೇ.10.10, ನಗರದ ಬಡವರ ಏಳ್ಗೆಗಾಗಿ ಶೇ.2, ಬಂಡವಾಳ ಆಸ್ತಿ, ಸ್ವತ್ತುಗಳ ನಿರ್ಮಾಣಕ್ಕಾಗಿ ಶೇ.36ರಷ್ಟು ಖರ್ಚು ಮಾಡಲಾಗುವುದು. ರಸ್ತೆ ದುರಸ್ತಿಗೆ 43.57 ಲಕ್ಷ ರೂ., ಹೊಸ ರಸ್ತೆಗಳ ನಿರ್ಮಾಣಕ್ಕೆ 68 ಕೋಟಿ ರೂ., ಚರಂಡಿಗಳ ನಿರ್ವಹಣೆಗೆ 39 ಲಕ್ಷ ರೂ., ಹೊಸ ಚರಂಡಿಗಳ ನಿರ್ಮಾಣಕ್ಕೆ 32.96 ಕೋಟಿ ರೂ. ನೀಡಲಾಗುವುದು. ನಗರದ ಬೀದಿ ದೀಪಗಳ ನಿರ್ವಹಣೆಗೆ 1.49 ಕೋಟಿ ರೂ. ಮೀಸಲಿರಿಸಲಾಗಿದೆ.

ಹೊಸಬಡಾವಣೆಗಳಿಗೆ ಹೈಮಾಸ್ಟ್‌ ದೀಪ ಅಳವಡಿಕೆಗೆ 1.39 ಕೋಟಿ ರೂ. ತೆಗೆದಿರಿಸಲಾಗಿದೆ. ಹೊರಗುತ್ತಿಗೆ ಕಾರ್ಮಿಕರು, ಲೋಡರ್, ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕ ಸಿಬ್ಬಂದಿ ಸಂಬಳಕ್ಕಾಗಿ 5.10 ಕೋಟಿ ರೂ. ಮೀಸಲಿರಿಸಲಾಗಿದೆ. ಅವರ ಆರೋಗ್ಯ ಸುಧಾರಣೆಗಾಗಿ 5 ಲಕ್ಷ ರೂ., ಘನ ತ್ಯಾಜ್ಯ ನಿರ್ವಹಣೆಗೆ 1.08 ಕೋಟಿ ರೂ., ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ 2.16 ಕೋಟಿ ರೂ. ತೆಗೆದಿರಿಸಲಾಗಿದೆ. ಕುಡಿಯುವ ನೀರು ಒದಗಿಸುವ ಸಲುವಾಗಿ 34.1 ಕೋಟಿ. ರೂ., ಸ್ಥಾವರ ತಂತ್ರೋಪಕರಣ ವೆಚ್ಚಕ್ಕಾಗಿ 42.1 ಕೋಟಿ ರೂ., ಜತೆಗೆ 111.3 ಕೋಟಿ ರೂ. ವಿದ್ಯುತ್‌ ಬಿಲ್‌ ಪಾವತಿಗಾಗಿ ಮೀಸಲಿರಿಸಲಾಗಿದೆ.

ಮೂಲ ಸೌಕರ್ಯಕ್ಕೆ ಒತ್ತು: ಅವಳಿ ನಗರದ ಮುಖ್ಯ ಕೊಳವೆಬಾವಿ ಉನ್ನತಿಗಾಗಿ 34.8 ಕೋಟಿ. ರೂ., ಒಳಚರಂಡಿ ಯೋಜನೆ ನಿರ್ವಹಣೆಗೆ 75 ಲಕ್ಷ ರೂ., ಉದ್ಯಾನಗಳ ನಿರ್ವಹಣೆಗೆ 46.85 ಲಕ್ಷ ರೂ., ಹೊಸ ಉದ್ಯಾನವನಗಳ ನಿರ್ಮಾಣಕ್ಕಾಗಿ 99 ಲಕ್ಷ ರೂ., ಸಾಮಾಜಿಕ ಅರಣ್ಯೀಕರಣದಡಿ ಗಿಡ ನೆಡುವ ಕಾರ್ಯಕ್ಕೆ 8.06 ಕೋಟಿ ರೂ. ನೀಡಲಾಗಿದೆ. ನಗರಸಭೆ ವ್ಯಾಪ್ತಿಯ ರುದ್ರಭೂಮಿಗಳಲ್ಲಿ ಆದ್ಯತೆ ಮೇರೆಗೆ ಪರಿಸರ ಸ್ನೇಹಿ ವಿದ್ಯುತ್‌ ಚಿತಾಗಾರ ಅಳವಡಿಸಲು ಉದ್ದೇಶಿಸಿದೆ. ಸ್ಮಶಾನ ಮತ್ತು ಶವ ಸಂಸ್ಕಾರಗಳ ಸ್ಥಳಗಳ ನಿರ್ವಹಣೆಗೆ 12 ಲಕ್ಷ ರೂ., ಈಜುಕೊಳ ನಿರ್ವಹಣೆಗೆ 10 ಲಕ್ಷ ರೂ. ಬಿಡುಗಡೆಗೆ ಉದ್ದೇಶಿ ಸಲಾಗಿದೆ. ಅಪೂರ್ಣಗೊಂಡಿರುವ ಈಜುಕೋಳ ಕಾಮಗಾರಿಗೆ 68 ಲಕ್ಷ ರೂ. ಮೀಸಲಿರಿಸಲಾಗಿದೆ.

ಜಿಲ್ಲಾ ಕಸಾಪ ಹಮ್ಮಿಕೊಂಡಿರುವ ಸಾಂಸ್ಕೃತಿಕ ಉತ್ಸವಕ್ಕೆ 2.50 ಲಕ್ಷ ರೂ., ಮುನ್ಸಿಪಲ್‌ ಹೈಸ್ಕೂಲ್‌ ನಿರ್ವಹಣೆಗೆ 20 ಲಕ್ಷ ರೂ., ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಲು ತಲಾ 50 ಸಾವಿರ ರೂ. ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದವರ ಹಾಗೂ ವಿಕಲ ಚೇತನರ ಆರ್ಥಿಕ ಸ್ವಾವಲಂಬನೆಗಾಗಿ 171.83 ಲಕ್ಷ ರೂ. ಮೀಸಲಿಡಲಾಗಿದೆ. ಅಮೃತ ಯೋಜನೆಯಡಿ 9 ಕೋಟಿ ಅನುದಾನ ನಿರೀಕ್ಷಿಸ
ಲಾಗಿದೆ. ಭೀಷ್ಮ ಕೆರೆ, ಪಾರ್ಕ್‌, ಚರಂಡಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಅಮೃತ ನಿರ್ಮಲ ಯೋಜನೆಯಡಿ 1 ಕೋಟಿ ರೂ. ಬಿಡುಗಡೆಯಾಗಿದ್ದು, ಹೈಟೆಕ್‌ ಶೌಚಾಲಯ ನಿರ್ಮಾಣ, ಸ್ವಚ್ಛತೆ 66 ಲಕ್ಷ ರೂ. ವ್ಯಯಿಸಲು ಉದ್ದೇಶಿಸಲಾಗಿದೆ ಎಂದರು. ಉಪಾಧ್ಯಕ್ಷೆ ಸುನಂದಾ ಬಾಕಳೆ, ಪೌರಾಯುಕ್ತ ರಮೇಶ ಸುಣಗಾರ ಇತರರಿದ್ದರು.

ಟಾಪ್ ನ್ಯೂಸ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.