Gadag: ಗದಗ- ಬೆಟಗೇರಿಯಲ್ಲಿ ಥರ್ಡ್‌ ಐ ತಂತ್ರಜ್ಞಾನ ಬಳಕೆ

ವ್ಯಕ್ತಿಯನ್ನು ಜೂಮ್‌ ಮಾಡುವ ಮೂಲಕ ನೋಡಬಹುದಾಗಿದೆ.

Team Udayavani, Nov 22, 2023, 6:28 PM IST

Gadag: ಗದಗ- ಬೆಟಗೇರಿಯಲ್ಲಿ ಥರ್ಡ್‌ ಐ ತಂತ್ರಜ್ಞಾನ ಬಳಕೆ

ಗದಗ: ಗದಗ ಜಿಲ್ಲೆ ಹೊಸ ತಾಂತ್ರಿಕತೆಗೆ ತೆರೆದುಕೊಳ್ಳುತ್ತಿದೆ. ಮೊದಲನೆ ಭಾಗವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ “ಥರ್ಡ್‌ ಐ’ ಪ್ರೊಜೆಕ್ಟ್ ಕಾರ್ಯಾರಂಭ ಮಾಡಿದ್ದು, ಸಂಚಾರಿ ನಿಯಮಗಳ ಪಾಲನೆಗೆ ಹದ್ದಿನ ಕಣ್ಣಿಟ್ಟಿದೆ.

ಬೈಕ್‌ ಸವಾರರು ಹೆಲ್ಮೆಟ್‌ ಧರಿಸದೆ ಚಾಲನೆ ಮಾಡುವುದು, ತ್ರಿಬಲ್‌ ರೈಡಿಂಗ್‌, ಅಡ್ಡಾದಿಡ್ಡಿ ಚಲಿಸುವುದು, ರ್ಯಾಶ್‌ ಡ್ರೈವಿಂಗ್‌, ವಾಹನ ಸವಾರರು ಸೀಟ್‌ ಬೆಲ್ಟ್ ಧರಿಸದಿರುವುದು, ಆಟೋ ಚಾಲಕರು ಖಾಕಿ ಬಟ್ಟೆ ಧರಿಸದಿರುವುದು ಸೇರಿ ಸಂಚಾರಿ ನಿಯಮಗಳ ಉಲ್ಲಂಘನೆಗೆ ದಂಡದ ನೋಟಿಸ್‌ ನೇರವಾಗಿ ಮನೆಗೆ ಸೇರುತ್ತಿದೆ.

ಈಗಾಗಲೇ “ಥರ್ಡ್‌ ಐ’ ಮೂಲಕ ಅಕ್ಟೋಬರ್‌ ಆರಂಭದಿಂದ ನವೆಂಬರ್‌ 15ರವರೆಗೆ ಒಟ್ಟಾರೆ 4,100 ಪ್ರಕರಣಗಳು ದಾಖಲಾಗಿದ್ದು, 7 ಲಕ್ಷಕ್ಕೂ ಅ ಧಿಕ ದಂಡ ವಸೂಲು ಮಾಡಲಾಗಿದೆ. ಇದರಿಂದ ಎಚ್ಚೆತ್ತ ವಾಹನ ಸವಾರರು ಹೆಲ್ಮೆಟ್‌ ಧರಿಸುವುದು ಸೇರಿ ಸಂಚಾರಿ ನಿಯಮಗಳ ಪಾಲನೆಯಲ್ಲಿ ಆಸಕ್ತಿ ವಹಿಸಿರುವುದು ಗಮನಾರ್ಹ ಸಂಗತಿ.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ ಅವರು ವಿಶೇಷ ಆಸಕ್ತಿ ವಹಿಸಿ ಜಿಲ್ಲಾಡಳಿತ ಹಾಗೂ ಗದಗ-ಬೆಟಗೇರಿ ನಗರಸಭೆ ಸಹಯೋಗದಲ್ಲಿ ಅಮೃತ ಸಿಟಿ, ನಗರೋತ್ಥಾನ 4ನೇ ಹಂತದ ಯೋಜನೆಯಡಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಗದಗ-ಬೆಟಗೇರಿ ಅವಳಿ ನಗರಕ್ಕೆ ಪ್ರವೇಶಿಸುವ, ಹೊರ ಹೋಗುವ ಮಾರ್ಗಗಳಲ್ಲಿ, ಜನದಟ್ಟಣೆ ಪ್ರದೇಶಗಳಲ್ಲಿ, ಪ್ರಮುಖ ವೃತ್ತ ಹಾಗೂ ಸೂಕ್ಷ್ಮಪ್ರದೇಶಗಳಲ್ಲಿ ಮೂರು ವಿಧದ ವಿಶೇಷ ಕ್ಯಾಮೆರಾ ಅಳವಡಿಸಲಾಗಿದೆ. 15 ಎಎನ್‌ಪಿಆರ್‌, 6 ಪಿಟಿಜೆಡ್‌, 45 ಸಾಮಾನ್ಯ ಕ್ಯಾಮೆರಾ ಸೇರಿ ಒಟ್ಟು 114 ಕ್ಯಾಮೆರಾಗಳು ಗದಗ-ಬೆಟಗೇರಿ ಅವಳಿ ನಗರದ ಕಣ್ಗಾವಲಾಗಿವೆ. ಈ ಎಲ್ಲ ಕ್ಯಾಮೆರಾಗಳ ನಿರ್ವಹಣೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಕಚೇರಿಯಲ್ಲಿ ವಿಶೇಷ ಕಮಾಂಡಿಂಗ್‌ ಸೆಂಟರ್‌ ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲವೂ ಸಿಸಿ ಕ್ಯಾಮೆರಾಗಳ ಮಾನಿಟರಿಂಗ್‌ ಮಾಡಲಾಗುತ್ತಿದೆ.

ಎಎನ್‌ಪಿಆರ್‌ ಕ್ಯಾಮೆರಾ: ಗದಗ-ಬೆಟಗೇರಿ ಅವಳಿ ನಗರ ಪ್ರವೇಶಿಸುವ, ಹೊರಹೋಗುವ ಪ್ರಮುಖ ಸ್ಥಳಗಳಲ್ಲಿ 16 ಎಎನ್‌
ಪಿಆರ್‌(ಆಟೋಮ್ಯಾಟಿಕ್‌ ನಂಬರ್‌ ಪ್ಲೇಟ್‌ ರೆಕಗ್ನೆಜೇಶನ್‌) ಹೆಸರೇ ಸೂಚಿಸುವಂತೆ ವಾಹನಗಳ ನಂಬರ್‌ ಪ್ಲೇಟ್‌ ಗುರುತಿಸುವ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು 24 ಗಂಟೆಗಳು ಕಾರ್ಯ ನಿರ್ವಹಿಸಲಿದ್ದು, ನಗರಸಭೆ ಪ್ರವೇಶಿಸುವ, ಹೊರ ಹೋಗುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಿವೆ. ಈ ಕ್ಯಾಮೆರಾಗಳು ವಾಹನದ ನಂಬರ್‌ ಪ್ಲೇಟ್‌ ನ ಚಿತ್ರ ತೆಗೆದುಕೊಳ್ಳುತ್ತದೆ.

ಪಿಟಿಜೆಡ್‌ ಕ್ಯಾಮೆರಾ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನದಟ್ಟಣೆಯಾಗುವಂತಹ ಪ್ರದೇಶಗಳಲ್ಲಿ 6 ಪಿಟಿಜೆಡ್‌ (ಪಾನ್‌
ಟಿಲ್ಟ್ ಜೂಮ್‌) ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಪಿಟಿಜೆಡ್‌ ಕ್ಯಾಮೆರಾಗಳು ಜನದಟ್ಟಣೆ ಪ್ರದೇಶಗಳಲ್ಲಿ 100 ಮೀಟರ್‌ನಷ್ಟು ದೂರದ ದೃಶ್ಯಗಳನ್ನು ಇಲ್ಲವೇ ವ್ಯಕ್ತಿಯನ್ನು ಜೂಮ್‌ ಮಾಡುವ ಮೂಲಕ ನೋಡಬಹುದಾಗಿದೆ.

ಸಾಮಾನ್ಯ ಕ್ಯಾಮೆರಾಗಳು: ಗದಗ-ಬೆಟಗೇರಿ ಅವಳಿ ನಗರದ ಮುಳಗುಂದ ನಾಕಾ, ಭೂಮರಡ್ಡಿ ಸರ್ಕಲ್‌, ಮಹಾತ್ಮ ಗಾಂಧಿ ಸರ್ಕಲ್‌ ಸೇರಿ ವಿವಿಧೆಡೆ ಈಗಾಗಲೇ 48 ಸಿಸಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ಹೊಸದಾಗಿ ಬೆಟಗೇರಿ ಬಸ್‌ ನಿಲ್ದಾಣ, ಹುಯಿಲಗೋಳ ಕ್ರಾಸ್‌, ಜರ್ಮನ್‌ ಆಸ್ಪತ್ರೆ, ಅಂಭಾಭವಾನಿ ಸರ್ಕಲ್‌, ಹೆಲ್ತ್‌ಕ್ಯಾಂಪ್‌, ಕುಷ್ಟಗಿ ಚಾಳ, ಝಂಡಾ ಸರ್ಕಲ್‌, ಮಹೇಂದ್ರಕರ್‌ ಸರ್ಕಲ್‌, ಹಳೇ ಡಿಸಿ ಆಫೀಸ್‌ ಸರ್ಕಲ್‌, ಹುಡ್ಕೊ, ಹಾತಲಗೇರಿ ನಾಕಾ, ಡಂಬಳ ನಾಕಾ ಸೇರಿ ವಿವಿಧೆಡೆ ಹೆಚ್ಚುವರಿಯಾಗಿ 45 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಗದಗ-ಬೆಟಗೇರಿ ಅವಳಿ ನಗರದ ಸುರಕ್ಷತೆ ಹಾಗೂ ಭದ್ರತೆಗೆ ವಿಶೇಷ ಕ್ರಮ ಜರುಗಿಸಲಾಗಿದೆ. ಕಳ್ಳತನ, ಗಲಾಟೆ, ಅಪಘಾತ ಸೇರಿ ವಿವಿಧ ಪ್ರಕರಣಗಳ ಪತ್ತೆಗೆ ಥರ್ಡ್‌ ಐ ಸಹಕಾರಿಯಾಗಿದೆ. ಪಾರದರ್ಶಕ ಆಡಳಿತ ವ್ಯವಸ್ಥೆಗೆ ಥರ್ಡ್‌ ಐ ಉಪಯುಕ್ತ ಯೋಜನೆಯಾಗಿದ್ದು, ಆಡಳಿತ ವ್ಯವಸ್ಥೆ ಸುಧಾರಣೆಗೆ ಸಾರ್ವಜನಿಕರು ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಸಂಚಾರ
ನಿಯಮ ಪಾಲಿಸಬೇಕು ಎಂಬುದೇ ಥರ್ಡ್‌ ಐ ಉದ್ದೇಶ.
*ಬಿ.ಎಸ್‌. ನೇಮಗೌಡ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಗದಗ

ನಮ್ಮ ಜೀವನಶೈಲಿ ಸರಿ ದಾರಿಯಲ್ಲಿ ಹೋಗಲು ಮೊದಲನೇ ಪ್ರಯತ್ನವಾಗಿ ಥರ್ಡ್‌ ಐ ಕೆಲಸ ಮಾಡುತ್ತಿದೆ. ಈಗಾಗಲೇ
ಗದಗ-ಬೆಟಗೇರಿ ಅವಳಿ ನಗರದ ವಾಹನ ಸವಾರರು ಜಾಗೃತಗೊಂಡಿದ್ದು, ಸಂಚಾರಿ ನಿಯಮಗಳನ್ನು ಕಾನೂನಾತ್ಮಕವಾಗಿ
ಪಾಲಿಸುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಮುಂದೆಯೂ ಜಿಲ್ಲಾದ್ಯಂತ ಥರ್ಡ್‌ ಐ ವಿಸ್ತರಣೆಗೆ ಚಿಂತಿಸಲಾಗುತ್ತಿದೆ.
*ಎಚ್‌.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು, ಗದಗ

*ಅರುಣಕುಮಾರ ಹಿರೇಮಠ

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.