ಇಬ್ರಾಹಿಂ ಸುತಾರ-ಲತಾ ಮಂಗೇಶ್ಕರ್ಗೆ ನುಡಿನಮನ
ದಾರ್ಶನಿಕರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಹೆಗ್ಗಳಿಕೆ ಅವರದ್ದಾಗಿತ್ತು
Team Udayavani, Feb 8, 2022, 6:26 PM IST
ಗದಗ: ಗಾನಕೋಗಿಲೆಯಾಗಿ ಲತಾ ಮಂಗೇಶ್ಕರ್ ಸಂಗೀತ ಲೋಕದಲ್ಲೇ ತಮ್ಮ ಬದುಕು ಸವೆಸಿದರು. ತಮ್ಮ ಅಸಾಧಾರಣ ಕಂಠ ಮಾಧುರ್ಯದಿಂದ ಸಂಗೀತ ಪ್ರಿಯರ ಮನ ಗೆದ್ದಿದ್ದರು. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾಗದ ನಷ್ಟವಾಗಿದೆ ಎಂದು ಲೇಖಕಿ ಕವಿತಾ ದಂಡಿನ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದಿಂದ ನಗರದಲ್ಲಿ ಆಯೋಜಿಸಿದ್ದ ಆಧ್ಯಾತ್ಮ ಲೋಕದ ದಿಗ್ಗಜ ಇಬ್ರಾಹಿಂ ಸುತಾರ ಹಾಗೂ ಸಂಗೀತ ಕ್ಷೇತ್ರದ ದೃವತಾರೆ ಲತಾ ಮಂಗೇಶ್ಕರ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.
36 ಭಾಷೆಗಳಲ್ಲಿ ತಮ್ಮ ಗಾನ ಸುಧೆಯಿಂದ ಕೇಳುಗರನ್ನು ಮಂತ್ರಮುಗ್ಧಗೊಳಿಸಿ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ. ಸುಮಾರು ಏಳುವರೆ ದಶಕಗಳ ಕಾಲ ಸಂಗೀತ ಕ್ಷೇತ್ರದ ಅನಭಿಷಕ್ತ ದೊರೆಯಂತೆ ಆಳಿದ ಲತಾ ಮಂಗೇಶ್ಕರ್ ಅವರಿಗೆ ಭಾರತ ಸರಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಅವಿಸ್ಮರಣೀಯ. ಖ್ಯಾತ ಪ್ರವಚನಕಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಘ.ಸಮಾಜದಲ್ಲಿ ಏಕತೆಯ ನಾದದ ತಂತಿ ಮೀಟಿದ ಭಾವೈಕ್ಯ ಭಕ್ತಿಯ ಸಂಗಮ ಅವರಾಗಿದ್ದರು.
ಶರಣರ, ಸೂಫಿ ಸಂತರ, ದಾರ್ಶನಿಕರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಹೆಗ್ಗಳಿಕೆ ಅವರದ್ದಾಗಿತ್ತು. ಇವರಿಬ್ಬರ ಅಗಲುವಿಕೆ ಸಾಹಿತ್ಯ-ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ವಿವಿಧ ಮಹಿಳಾ ಮಂಡಳಗಳ ಪದಾಧಿಕಾರಿಗಳಾದ ಗೀತಾ ಹೆಬಸೂರ, ಶ್ರೀದೇವಿ ಬೆಟದೂರ, ಸುಧಾ ರೊದ್ದಂ, ವೇದಾ ಕಾಲವಾಡ, ಸುಜಾತಾ ಶೆಟ್ಟರ, ಶಕುಂತಲಾ ಬೇಲೇರಿ, ಲತಾ ಮುತ್ತಿನಪೆಂಡಿಮಠ ಮುಂತಾದವರು ಸಾಧಕರ ಬದುಕಿನ ವಿವಿಧ ಹಂತಗಳ ಸಾಧನೆಯ ಮೆಟ್ಟಿಲುಗಳನ್ನು ಮೆಲುಕು ಹಾಕಿದರು.
ನುಡಿನಮನದಲ್ಲಿ ಸುವರ್ಣ ವಸ್ತ್ರದ, ಉಮಾ ಗುರಿಕಾರ, ಅಶ್ವಿನಿ ಹೇರೂರ, ಪೂರ್ಣಿಮಾ ಹಿರೇಗೌಡರ, ರತ್ನಾ ಬೇಲೂರ, ಶಾಂತಾ ದುಂದೂರ, ಮಹೇಶ್ವರಿ ನಿಲೂಗಲ್ಲ, ಗೀತಾ ಕರಿಬಿಷ್ಠಿ, ಅನ್ನಪೂರ್ಣ ಪಲ್ಲೇದ, ಸೌಮ್ಯ ಗೌಡ್ರ, ಶಶಿಕಲಾ ಲಕ್ಕನಗೌಡ್ರ, ಪಲ್ಲವಿ ಕುಂಬಾರ, ರೇಣುಕಾ ತಂಟ್ರಿ, ಶಾರದಾ ಗಡಾದ, ಬಸಮ್ಮ ಆನಂದಿ, ಸಂಗಮ್ಮ ಹಿರೇಮಠ, ಮಹಾನಂದ ಜಗಲಿ, ಲಲಿತಾ ಸಂಗನಾಳ, ಸೃಷ್ಟಿ ಲಕ್ಕನಗೌಡ್ರ, ಅನ್ನಪೂರ್ಣ ಗಡಾದ, ಮಮತಾ ಜಗಳೂರ, ಅನುಶ್ರೀ ಕುಂದಾಪುರ, ನೇಮಿತಾ ವಜ್ರಬಂಡಿ, ಅನುರಾಧಾ ಕುಲಕರ್ಣಿ ಇದ್ದರು. ಸುಮಾ ಪಾಟೀಲ ಸ್ವಾಗತಿಸಿದರು. ಸುಧಾ ಬಂಡಾ ನಿರೂಪಿಸಿದರು. ವಿಜಯಲಕ್ಷ್ಮೀ
ಹೊಳ್ಳಿಯವರ ಪರಿಚಯಿಸಿದರು. ಗೀತಾ ದೇಸಾಯಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ