ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿ
•ನೇಮಕಾತಿ-ಮುಂಬಡ್ತಿಯಲ್ಲಿ ಕೇಂದ್ರ ಮೀಸಲಾತಿಯಂತೆ ರಾಜ್ಯದಲ್ಲೂ ನೀಡಲು ಒತ್ತಾಯ
Team Udayavani, Jun 8, 2019, 10:09 AM IST
ಲಕ್ಷ್ಮೇಶ್ವರ: ತಾಲೂಕು ವಾಲ್ಮೀಕಿ ನಾಯಕ ಸಂಘದವರು ಮೀಸಲಾತಿ ಹೆಚ್ಚಿಸುವಂತೆ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ: ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿ ತಾಲೂಕು ವಾಲ್ಮೀಕಿ ನಾಯಕ ಸಂಘದವರು ತಹಶೀಲ್ದಾರ್ಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕೇಂದ್ರ ಈಗಾಗಲೇ ಎಸ್ಟಿ ಜನಾಂಗಕ್ಕೆ ಶೇ 7.5 ಮೀಸಲಾತಿ ನೀಡುತ್ತಿದೆ. ಆದರೆ ರಾಜ್ಯದಲ್ಲಿ ಸುಮಾರು 60-70 ಲಕ್ಷ ಎಸ್ಟಿ ಜನಾಂಗವಿದ್ದು, ಇವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈ ಜನಾಂಗದವರಿಗೆ ನೇಮಕಾತಿ, ಮುಂಬಡ್ತಿ ಸಮಯದಲ್ಲಿ ಕೇಂದ್ರ ಮೀಸಲಾತಿಯನ್ನೇ ರಾಜ್ಯದಲ್ಲೂ ನೀಡಬೇಕು.
ಎಸ್ಟಿ ಜನಾಂಗದ ಹೆಸರಿನಲ್ಲಿ ಬೇರೆ ಬೇರೆ ಜಾತಿಯವರು ಸರ್ಟಿಪಿಕೇಟ್ ಪಡೆದುಕೊಂಡು ಸರ್ಕಾರದ ಲಾಭ ಪಡೆಯುತ್ತಿದ್ದು, ನಿಜವಾದ ಎಸ್ಟಿ ಜನಾಂಗದವರಿಗೆ ಅನ್ಯಾಯವಾಗುತ್ತಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವಿವಿಧ ಹಂತಗಳಲ್ಲಿ ಲಾಭ ಪಡೆದಿರುವವರನ್ನು ಪತ್ತೆ ಹಚ್ಚಲು ಸತ್ಯ ಶೋಧನಾ ಸಮಿತಿ ರಚಿಸಬೇಕು. ಪ್ರತ್ಯೇಕ ಪ. ಪಂಗಡದ ಸಚಿವಾಲಯ ಮತ್ತು ಸಂವಿಧಾನಾತ್ಮಕವಾಗಿ ಎಲ್ಲ ಸೌಲಭ್ಯಗಳನ್ನು ಎಸ್ಟಿ ಜನಾಂಗಕ್ಕೆ ನೀಡಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟರ, ಜಿಲ್ಲಾಧಿಕಾರಿಗಳಿಗೆ ತಲುಪಿಸುವುದಾಗಿ ಹೇಳಿದರು. ತಾಲೂಕು ಅಧ್ಯಕ್ಷ ಚಂದ್ರಶೇಖರ ತಳವಾರ, ಪ್ರ. ಕಾರ್ಯದರ್ಶಿ ಎಚ್.ಟಿ. ಜಾಲಿಮರದ, ಎಂ.ಬಿ. ಕಗ್ಗಲಗೌಡರ, ರಾಜಶೇಖರ ಮೇಲ್ಮರಿ, ಕೆ.ಒ. ಹುಲಿಕಟ್ಟಿ, ಕೆ.ಎಚ್. ಗಂಗಣ್ಣವರ, ಮಂಜುನಾಥ ಶಿರಹಟ್ಟಿ, ಎನ್.ಕೆ. ಜಂತ್ಲಿ, ಯಲ್ಲಪ್ಪ ತಳವಾರ, ಭೀಮಪ್ಪ ಯಂಗಾಡಿ, ಆರ್.ಎಚ್. ತಳವಾರ, ಪಿ.ಎಸ್. ಕಗ್ಗಲಗೌಡರ, ಎಲ್.ಬಿ. ಕೋಳಿವಾಡ ಸೇರಿ ಅನೇಕರು ನಿಯೋಗದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ