ಅಭಿಯಂತರರಿಂದ ಸಾಮೂಹಿಕ ರಜೆ!
Team Udayavani, Jun 28, 2019, 2:24 PM IST
ರೋಣ: ಲೋಕೋಪಯೋಗಿ ಇಲಾಖೆ ಸಿಬ್ಬಂದಿ ರಜೆ ಕೋರಿರುವ ಪತ್ರ.
ರೋಣ: ತಾಲೂಕಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ಗಳು, ಕೆಲ ಸಿಬ್ಬಂದಿ ವೈಯಕ್ತಿಕ ಕಾರಣ ನೀಡಿ ಸಾಮೂಹಿಕವಾಗಿ ಜೂ.28ರಿಂದ ಜುಲೈ 12ರವರೆಗೆ ರಜೆ ಕೋರಿದ್ದಾರೆ.
ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ಗಳಾದ ಪಿ.ಎಚ್. ಕೋತಬಾಳ, ಆರ್.ಡಿ. ಯಲಿಗಾರ, ಎಲ್.ಎ.ಬ್ಯಾಳಿ, ಕಿರಿಯ ಎಂಜಿನಿಯರ್ಗಳಾದ ಎಂ.ಬಿ. ಮುದಿಬಸನಗೌಡ್ರ, ಗುರುನಾಥ ಹಾಗೂ ಅನೇಕ ಸಿಬ್ಬಂದಿ ಜೂ.28ರಿಂದ ಜು.12ರವರೆಗೆ ಸಾಮೂಹಿಕವಾಗಿ ಕಚೇರಿ ಕೆಲಸಕ್ಕೆ ರಜೆ ಕೋರಿ ಮನವಿ ಸಲ್ಲಿಸಿದ್ದಾರೆ.
ಕಚೇರಿಯ ಎಲ್ಲ ಎಂಜಿನಿಯರ್ಗಳು ಒಮ್ಮೆಲೇ ಏಕಕಾಲದಲ್ಲಿ ರಜೆ ಹಾಕಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಸಹಾಯಕ ಮುಖ್ಯ ಎಂಜಿನಿಯರ್ ಕಿಶೋರ ಹದ್ಲಿಯವರ ವರ್ತನೆ ಎಂಜಿನಿಯರ್ಗಳಿಗೆ ಬೇಸರ ತರಿಸಿದೆ. ಹೀಗಾಗಿ ಎಲ್ಲ ಎಂಜಿನಿಯರ್ಗಳು ಸಾಮೂಹಿಕವಾಗಿ ರಜೆಗೆ ಮನವಿ ಸಲ್ಲಿಸಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ