ವೀರಶೈವ ಲಿಂಗಾಯತರಿಗಿಲ್ಲ ಸ್ಮಶಾನ
Team Udayavani, Jan 14, 2020, 3:13 PM IST
ಲಕ್ಷ್ಮೇಶ್ವರ: ಕಳೆದ ಎರಡು ದಶಕಗಳಿಂದಲೂ ಪಟ್ಟಣದಲ್ಲಿರುವ ಬಹುಸಂಖ್ಯಾತ ವೀರಶೈವ ಲಿಂಗಾಯತರು ಸ್ಮಶಾನಭೂಮಿಗಾಗಿ ಸೆಣಸಾಡುತ್ತಿದ್ದರೂ ಇದುವರೆಗೂ ಈಡೇರಿಲ್ಲ. ಪಟ್ಟಣದಲ್ಲಿ ಸುಮಾರು 50 ಸಾವಿರ ಜನಸಂಖ್ಯೆಯಿದ್ದು, ಅದರಲ್ಲಿ ಬಹುಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತರ ಒಳಪಂಗಡದವರು ನೂರಾರು ವರ್ಷಗಳಿಂದಲೂ ಶಿಗ್ಲಿ ರಸ್ತೆಯಲ್ಲಿರುವ ಜಮೀನಿನಲ್ಲಿ ಶವಸಂಸ್ಕಾರ ಮಾಡುತ್ತಾ ಬಂದಿದ್ದಾರೆ.
ಈ ಹಿಂದೆ ಪಟ್ಟಣದ ಹಿರಿಯರು ಈ ಪ್ರದೇಶದ 54 ಎಕರೆ ಜಮೀನನ್ನು ಕಲ್ಮಠ ಕುಟುಂಬದವರಿಗೆ ಉಳುಮೆಮಾಡಲು ನೀಡಿ ಇಲ್ಲಿನ ಕರಬಸಪ್ಪಜ್ಜನ ಮಠದ ನಿರ್ವಹಣೆ ಮಾಡಲು ಹೇಳಿದ್ದರಂತೆ. ಅಲ್ಲದೇ ಅದರಲ್ಲಿನ 10 ಎಕರೆ ಜಮೀನನ್ನು ರುದ್ರಭೂಮಿಗೆ ಮೀಸಲಿರಿಸುವಂತೆ ವೀರಶೈವ ಲಿಂಗಾಯತ ಸಮಾಜದವರು ಮೌಖೀಕವಾಗಿ ತಿಳಿಸಿದ್ದರು. ಮುಂದೆ ಊಳುವವನೇ ಭೂಮಿ ಒಡೆಯ ಕಾನೂನು ಜಾರಿಯಾದ ಸಂದರ್ಭದಲ್ಲಿ ಕಂದಾಯ ಇಲಾಖೆಯವರ ದಿಕ್ಕು ತಪ್ಪಿಸಿ ಎಲ್ಲ ಪ್ರದೇಶವನ್ನು ಕಲ್ಮಠ ಮನೆತನದವರು ರೈತ ಎಂಟ್ರಿ ಮಾಡಿಸಿಕೊಂಡಿದ್ದರು.
ಶವ ಸಂಸ್ಕಾರಕ್ಕಾಗಿ ಬಳಕೆಯಾಗುತ್ತಿದ್ದ ಈ ಜಮೀನನ್ನು ಆಗಾಗ್ಗೆ ಅಷ್ಟಷ್ಟೇ ಪರಭಾರೆ ಮಾಡಲಾಗಿದೆ. ಆದಾಗ್ಯೂ ಸಹಿತ ಶವ ಸಂಸ್ಕಾರಕ್ಕಾಗಿ ಒಟ್ಟು 7 ಎಕರೆ 31 ಗುಂಟೆ ಜಮೀನನ್ನು ಬಳಸುತ್ತಾ ಬರಲಾಗಿದೆ. ಇದರಲ್ಲಿ ಸರ್ವೇ ನಂ.14/1 ಎರಡು ಎಕರೆ 20 ಗುಂಟೆ, 11/6 21 ಗುಂಟೆ, 11/3 ಒಂದು ಎಕರೆ 20 ಇವು ಮಾಲ್ಕಿಯಲ್ಲಿವೆ. 11/5 ಮೂರು ಎಕರೆ ಆಶ್ರಯ ನಿವೇಶನಕ್ಕಾಗಿ ನೀಡಲಾಗಿದೆ. ಉಳಿದ 11/4ರ 11 ಗುಂಟೆ ಮಾತ್ರ ಸರ್ಕಾರ ಹೆಸರಿನಲ್ಲಿದೆ. ಆದರೆ ಇಲ್ಲಿನ ಜಮೀನುಗಳನ್ನು ಖರೀದಿಸಿರುವ ಕೆಲ ಮಾಲೀಕರು ಸಮಾಜದ ಹಿತಕ್ಕಾಗಿ ಬಿಟ್ಟುಕೊಡಲು ಸಿದ್ಧರಿದ್ದು ಈಗಾಗಲೇ ಸಂಬಂಧಪಟ್ಟ ದಾಖಲೆಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿವೆ ಎಂಬುದು ಕೊಂಚ ಸಮಾಧಾನದ ವಿಷಯ.
ಸರ್ಕಾರ ರುದ್ರಭೂಮಿ ಖರೀದಿಗೆ ಮುಂದಾಗಿದ್ದು ವೀರಶೈವ ಲಿಂಗಾಯತ ಸಮುದಾಯಕ್ಕೆ ರುದ್ರಭೂಮಿಗಾಗಿ ಜಮೀನು ಖರೀದಿ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಈ ಸಮಸ್ಯೆ ಇತ್ಯರ್ಥವಾಗಲಿದೆ.-ಭ್ರಮರಾಂಬ ಗುಬ್ಬಿಶೆಟ್ಟಿ, ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…