ಬೆಲೆ ಮೊದಲೇ ನಿಗದಿ ಮಾಡಿ
Team Udayavani, Feb 5, 2020, 2:03 PM IST
ಗದಗ: ರೈತರ ಬೆಳೆಗಳಿಗೆ ಮುಂಚಿತವಾಗಿ ಸೂಕ್ತ ಖರೀದಿ ಬೆಲೆ ನಿಗದಿಗೊಳಿಸುವುದು ಹಾಗೂ ಸಂಚಾರಿ ಖರೀದಿ ಕೇಂದ್ರ ವ್ಯವಸ್ಥೆಯನ್ನು ಜಾರಿಗೊಳಿಸಿದಲ್ಲಿ ರೈತರ ಬೆಳೆಗಳಿಗೆ ನ್ಯಾಯ ಸಮ್ಮತ ಬೆಲೆ ದೊರಕಲು ಸಾಧ್ಯವೆಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.
ಜಿ.ಪಂ., ಕೃಷಿ ಇಲಾಖೆ ಹಾಗೂ ಐಸಿಎಆರ್ ಕೆ.ಎಚ್. ಪಾಟೀಲ, ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಡೆದ ಪಡಿತರ ವ್ಯವಸ್ಥೆಯಲ್ಲಿ ಅವಶ್ಯವಿರುವ ಹಿಂಗಾರು ಜೋಳ ಉತ್ಪಾದಿಸಿ, ವ್ಯವಸ್ಥೆ ಸದೃಢಗೊಳಿಸುವ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸದ್ಯ 4 ಕೋಟಿ 60 ಲಕ್ಷ ಪಡಿತರ ಕಾರ್ಡ್ದಾರರಿದ್ದು, 2020- 21ನೇ ಸಾಲಿನ ಜನಗಣತಿ ಪ್ರಕಾರ ಸುಮಾರು 7 ಕೋಟಿ ಜನಸಂಖ್ಯೆ ನಿರೀಕ್ಷಿಸಲಾಗಿದೆ. ಹೀಗಾಗಿ ಭವಿಷ್ಯದಲ್ಲಿ 42 ಲಕ್ಷ ಟನ್ ಅಕ್ಕಿ, 10 ಲಕ್ಷ ಟನ್ ಜೋಳ ಹಾಗೂ 10 ಲಕ್ಷ ಟನ್ ರಾಗಿ ಪಡಿತರದಾರರಿಗೆ ಬೇಕಾಗುತ್ತದೆ. ಪಡಿತರದಾರರಿಗೆ ಕೇವಲ ಅಕ್ಕಿ ಮತ್ತು ಗೋಧಿ ನೀಡುತ್ತಿರುವುದರಿಂದ ಕೊಟ್ಟ ಅಕ್ಕಿಯನ್ನು ಮಾರಾಟ ಮಾಡಿ, ಜೋಳ ಖರೀದಿ ಮಾಡುತ್ತಿರುವ ಪ್ರಸಂಗಗಳು ಕಂಡುಬರುತ್ತಿದ್ದು, ಅಕ್ಕಿ ಮತ್ತು ಗೋಧಿಯ ಜೊತೆಗೆ ಜೋಳ ವಿತರಿಸಬೇಕು. ಇದರಿಂದ ಜೋಳದ ಉತ್ಪಾದನೆ ಹೆಚ್ಚುತ್ತಲ್ಲದೇ, ಪಡಿತರ ವ್ಯವಸ್ಥೆ ಸದೃಢಗೊಳಿಸಿದಂತಾಗುತ್ತದೆ. ಬೆಳೆಯ ಉತ್ಪಾದನೆಗಿಂತ ಮೊದಲೇ ಬೆಲೆ ನಿಗದಿಯಾದರೆ ಮಾರುಕಟ್ಟೆ ಹಾಗೂ ಉತ್ಪಾದನೆಗೆ ನಿರ್ದಿಷ್ಟತೆ ಬರುತ್ತದೆ. ಬೆಳೆ ವಿಮೆ ಯೋಜನೆ ನ್ಯೂನತೆಗಳಿರುವುದರಿಂದ ಯೋಜನೆಯ ಫಲ ಎಲ್ಲರಿಗೂ ದೊರಕುತ್ತಿಲ್ಲ ಎಂದು ಹನುಮನಗೌಡ ಬೆಳಗುರ್ಕಿ ಹೇಳಿದರು.
ತೋಟಗಾರಿಕಾ ಉತ್ಪಾದಕ ಸಂಘದ ಅಧ್ಯಕ್ಷ ಜೆ.ಆರ್. ಓದುಗೌಡರ ಮಾತನಾಡಿ, ಇಡೀ ವಿಶ್ವಕ್ಕೆ ಕೃಷಿಯ ಪಾಠ ಹೇಳಿದ ರಾಷ್ಟ್ರ ನಮ್ಮದು. ರೈತರಿಂದ ಖರೀದಿ ಮಾಡಿದ ಉತ್ಪಾದನೆ ರಪ್ತಾಗುವ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಬೇರೆ ದೇಶಗಳಿಗೆ ಅವಶ್ಯಕವಿರುವ ಬೆಳೆ ಬೆಳೆದು ರಫ್ತು ಮಾಡಿದರೆ ರೈತರ ಆದಾಯ ತನ್ನಿಂದ ತಾನೇ ದ್ವಿಗುಣಗೊಳ್ಳುತ್ತದೆ ಎಂದರು. ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪಟಿ.ಎಸ್. ಮಾತನಾಡಿ, ಪಡಿತರರಿಗೆ ಅಕ್ಕಿ, ಗೋಧಿ ವಿತರಿಸುತ್ತಿರುವುದರಿಂದ ಜೋಳದ ಉತ್ಪಾದನೆ 80 ಸಾವಿರ ಹೆಕ್ಟೇರ್ ನಿಂದ 60 ಸಾವಿರ ಹೆಕ್ಟೇರ್ಗೆ ಇಳುವರಿ ಕಡಿಮೆಯಾಗಿದೆ. ಹೀಗಾಗಿ 20-30 ವರ್ಷಗಳಿಂದಿರುವ ಜೋಳದ ಹಳೆ ತಳಿಯ ಬದಲಾಗಿ ಪರ್ಯಾಯ ಹೊಸ ತಳಿ ಬರಬೇಕಿದೆ ಎಂದು ಮಾಹಿತಿ ನೀಡಿದರು.
ಕೃಷಿ ಉಪ ನಿರ್ದೇಶಕ ವೀರೇಶ ಹುನಗುಂದ, ಹುಲಕೋಟಿ ಕೃಷಿ ವಿಜ್ಞಾನ ಮುಖ್ಯಸ್ಥ ಎಲ್.ಜಿ.ಹಿರೇಗೌಡರ, ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ