ಶಿರಹಟ್ಟಿ: ದ್ಯಾಮವ್ವ ದೇವಿ ಅದ್ಧೂರಿ ಮೆರವಣಿಗೆ
Team Udayavani, Jan 29, 2021, 6:02 PM IST
ಶಿರಹಟ್ಟಿ: ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರಾ ಮಹೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ದ ವಿಯನ್ನು ತವರು ಮನೆಯಿಂದ ಗಂಡನ ಮನೆಗೆ ಕಳುಹಿಸಿಕೊಡುವ ಸಂಪ್ರದಾಯದಂತೆ ಪಟ್ಟಣದ ಬಡಿಗೇರಿ ಓಣಿಯಿಂದ ಶ್ರೀ ದೇವಿಯ ಅದ್ಧೂರಿ ಮೆರವಣಿಗೆ ನಡೆಸಲಾಯಿತು.
ಮೆರಣಿಗೆಯಲ್ಲಿ ಗಜರಾಜ, ವಾದ್ಯಮೇಳ ಮತ್ತು ನಂದಿಕೋಲು ಮತ್ತು ಪುರವಂತರಿಂದ ಒಡಪುಗಳು ಮೊಳಗಿದವು. ಮೆರವಣಿಗೆಯಲ್ಲಿ ಕಹಳೆ ನಿನಾದ ಕೇಳುವಂತಿತ್ತು. ಪಟ್ಟಣದ ಎಲ್.ವ್ಹಿ.ಕುಸಲಾಪೂರ ಪುರವಂತರು ದೇವಿ ಒಡಪುಗಳನ್ನು ಹೇಳುವ ಮೂಲಕ ಭಕ್ತಿ ಸಮರ್ಪಣೆ ಮಾಡಿ ಮೆರವಣಿಗೆಗೆ ಕಳೆ ತಂದರು.
ಇದನ್ನೂ ಓದಿ:ನ್ಯೂಜಿಲ್ಯಾಂಡ್ ದೇಶದ ಪರವಾಗಿ ಆಡಿದ ಭಾರತೀಯ ಮೂಲದ ಆಟಗಾರರಿವರು..!
ಪಟ್ಟಣದ ಸಮಸ್ತ ಜನತೆ ದೇವಿಯನ್ನು ಬಡಿಗೇರ ಓಣಿಯಿಂದ ಮಧ್ಯಾಹ್ನ 12 ಗಂಟೆಗೆ ಕೋಟೆ ಓಣಿಯಲ್ಲಿರುವ ದೇವಿಯ ದೇವಸ್ಥಾನಕ್ಕೆ ಕರೆತಂದು ಸಾಯಂಕಾಲದವರೆಗೆ ದೇವಿಯ ದರ್ಶನ ಪಡೆದರು. ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿ ಉಡಿ ತುಂಬಿ ಹರಕೆ ತೀರಿಸಿ ಧನ್ಯತಾ ಭಾವ ಮೆರದರು. ಅಲ್ಲದೇ, ದೇವಿ ಮಹಾಪ್ರಸಾದ ಸ್ವೀಕರಿಸಿ ಸಂಭ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
MUST WATCH
ಹೊಸ ಸೇರ್ಪಡೆ
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!