ಸಂಭ್ರಮದ ನಾಗರ ಪಂಚಮಿ
•ನಾಗಪ್ಪ ಮೂರ್ತಿಗೆ ಹಾಲೆರೆದ ಮಹಿಳೆಯರು •ಜೋಕಾಲಿ ಆಡಿ ಖುಷಿಪಟ್ಟ ಮಕ್ಕಳು
Team Udayavani, Aug 5, 2019, 9:26 AM IST
ಗದಗ: ನಾಗರ ಪಂಚಮಿ ಅಂಗವಾಗಿ ವಿವಿಧೆಡೆ ಮಹಿಳೆಯರು ನಾಗದೇವರಿಗೆ ಹಾಲೆರೆದರು.
ಗದಗ: ನಾಗರ ಪಂಚಮಿ ಮುನ್ನದಿನವಾದ ರವಿವಾರ ನಾಗ ಚತುರ್ಥಿ ನಿಮಿತ್ತ ಗದಗ- ಬೆಟಗೇರಿ ಸೇರಿದಂತೆ ಜಿಲ್ಲಾದ್ಯಂತ ಸಂಭ್ರಮದಿಂದ ಸಾರ್ವಜನಿಕರು ನಾಗದೇವತೆಗಳಿಗೆ ಹಾಲೆರೆದರು.
ಮಳೆ, ಬೆಳೆ, ಜೀವನ ಸಮೃದ್ಧಗೊಳಿಸುವಂತೆ ಪೂಜೆ ಸಲ್ಲಿಸಿದರು. ಹಬ್ಬದ ಅಂಗವಾಗಿ ಗೋಲ್ ಬೊಗರಿ, ಜೋಕಾಲಿಯಲ್ಲಿ ಜೀಕುವ ಮೂಲಕ ಮಹಿಳೆಯರು, ಮಕ್ಕಳು ಸಂಭ್ರಮದ ಅಲೆಯಲ್ಲಿ ತೇಲಿದರು.
ಬೆಳಗ್ಗೆಯಿಂದಲೇ ಅವಳಿ ನಗರದ ಜನರು ಮನೆಯಲ್ಲಿ ಹಾಗೂ ವಿವಿಧ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗಳ ಮೂರ್ತಿಗಳು, ಹಾವಿನ ಹುತ್ತಗಳು ಹಾಗೂ ಹಬ್ಬದ ನಿಮಿತ್ತ ಮನೆಯಲ್ಲಿಟ್ಟಿದ್ದ ಮಣ್ಣಿನ ನಾಗದೇವರಿಗೆ ಮನೆ ಮಂದಿ ಹಾಲರೆದು, ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಈ ವೇಳೆ ಕೆಲವರು ಇದು ನನ್ನ ಪಾಲು, ಇದು ತಂದೆ, ತಾಯಿ, ಅಜ್ಜ, ಅಜ್ಜಿ, ಅಕ್ಕ ಹಾಗೂ ಅಣ್ಣ ಹಾಗೂ ತಮ್ಮನ ಪಾಲು ಎಂದು ಹೇಳುವ ಮೂಲಕ ಹಾಲೆರೆದು ಧನ್ಯತೆ ಮೆರೆದರು.
ಇದೇ ವೇಳೆ ಮನೆಯಲ್ಲಿ ತಯಾರಿಸಿದ್ದ ಶೇಂಗಾ, ಪುಠಾಣಿ, ರವೆ, ದಾನಿ, ಅಳ್ಳಿಟ್ಟು, ಎಳ್ಳು ಸೇರಿದಂತೆ ಇನ್ನಿತರೆ ಉಂಡಿಗಳನ್ನು ನೈವೇದ್ಯ ವಾಗಿ ಅರ್ಪಿಸಿ, ಬಳಿಕ ಮನೆಯ ಮಂದಿಯೆಲ್ಲ ಒಟ್ಟಿಗೆ ಕುಳಿತು ಭೋಜನ ಸವಿದರು.
ಅಲ್ಲದೇ, ಶ್ರಾವಣ ಮಾಸದ ಅಂಗವಾಗಿ ಮನೆಯಂಗಳದ ಬೃಹತ್ ಮರಗಳಿಗೆ ಹಗ್ಗದಿಂದ ಜೋಕಾಲಿ ಕಟ್ಟಿದ್ದು ಅಲ್ಲಲ್ಲಿ ಕಂಡು ಬಂದಿತು. ಮಕ್ಕಳು, ಮಹಿಳೆಯರು, ವಯಸ್ಕರರು ಸರದಿಯಂತೆ ಜೋಕಾಲಿ ಜೀಕಿ ಸಂಭ್ರಮಿಸಿದರು. ಒಬ್ಬರು, ಇಬ್ಬರು ಜೋಕಾಲಿಯಲ್ಲಿ ಜೀಕಿದರೆ, ಇನ್ನುಳಿದವರು ಬದುಕಿನ ಸಾರ ಹೇಳುವ ಜಾನಪದ ಹಾಡುಗಳನ್ನು ಹಾಡಿದರು.
ನಗರದ ರಾಜೀವಗಾಂಧಿ ನಗರ, ಈಶ್ವರ ಬಡಾವಣೆ, ಡಿ.ಸಿ.ಮಿಲ್ ಕಾಂಪೌಂಡ್, ಒಕ್ಕಲಗೇರಿ ಓಣಿ ಸೇರಿದಂತೆ ಬೆಟಗೇರಿ ವಿವಿಧ ಭಾಗಗಳಲ್ಲಿ ದೊಡ್ಡ ದೊಡ್ಡ ಮರಗಳಲ್ಲಿ ಹಗ್ಗದ ಜೋಕಾಲಿಗಳು ತೂಗುತ್ತಿರುವ ದೃಶ್ಯ ನೋಡುಗರಿಗೆ ಮುದ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ