ಕಾರ್ಮಿಕರ ಬದುಕು ಕಟ್ಟಿಕೊಟ್ಟ ಸಿಐಟಿಯು
Team Udayavani, Jun 1, 2020, 5:02 AM IST
ಗಜೇಂದ್ರಗಡ: ದೇಶದಲ್ಲಿ ಕಾರ್ಮಿಕರ ಮೇಲೆ ಬಂಡವಾಳಶಾಹಿಗಳು ನಡೆಸುತ್ತಿದ್ದ ಶೋಷಣೆಯ ವಿರುದ್ಧ ಹೋರಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಿ ಅವರ ಬದುಕು ಕಟ್ಟಿಕೊಟ್ಟ ಸಿಐಟಿಯು ಸಂಘಟನೆ ಅರ್ಧಶತಕ ಪೂರೈಸುವ ಮೂಲಕ ಬಂಡವಾಳಶಾಹಿಗಳ ವಿರುದ್ಧ ಹೋರಾಡಲು ಇನ್ನೂ ಹೆಚ್ಚು ಬಲ ಪಡೆದುಕೊಂಡಿದೆ ಎಂದು ಕೃಷಿ ಕೂಲಿ ಕಾರ್ಮಿಕ ಸಂಘಟನೆ ತಾಲೂಕಾಧ್ಯಕ್ಷ ಬಾಲು ರಾಠೊಡ ಹೇಳಿದರು.
ಪಟ್ಟಣದ ಸಿಐಟಿಯು ಕಚೇರಿಯಲ್ಲಿ ನಡೆದ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಸಂಘಟನೆಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 50 ವರ್ಷಗಳಲ್ಲಿ ದುಡಿಯುವ ವರ್ಗದ ಹಿತಾಸಕ್ತಿಗಾಗಿ ದೇಶದ ಸ್ವಾತಂತ್ರ್ಯ, ಏಕತೆ, ಸಮಗ್ರತೆ ಸಾರ್ವಭೌಮತ್ವಕ್ಕಾಗಿ ಇಡೀ ದೇಶದ ಕಾರ್ಮಿಕ ವರ್ಗವನ್ನು ಒಂದೇ ವೇದಿಕೆಯಡಿ ತರುವಲ್ಲಿ ಅವಿರತವಾಗಿ ಶ್ರಮಿಸಿ, ತ್ಯಾಗ ಬಲಿದಾನ ಮಾಡಿದ ಮುಂಚೂಣಿಯ ಸಂಘಟನೆ ಸಿಐಟಿಯು ಆಗಿದೆ. ಕಾರ್ಮಿಕರ ಪರವಾಗಿ ರಾಜಿರಹಿತ ಹೋರಾಟ ನಡೆಸಿದ ಕೀರ್ತಿ ನಮ್ಮ ಸಂಘಟನೆಗೆ ಸಲ್ಲುತ್ತದೆ ಎಂದರು.
ಕಾರ್ಮಿಕ ಸಂಘಟನೆ ಮುಖಂಡ ಪೀರು ರಾಠೊಡ ಮಾತನಾಡಿ, ದೇಶದ ಕಾರ್ಮಿಕರ ಹಿತಾಸಕ್ತಿಗಾಗಿ 1970 ಮೇ 27ರಿಂದ 30ರ ವರೆಗೆ ಕೋಲ್ಕತ್ತಾದಲ್ಲಿ ಜರುಗಿದ ಕಾರ್ಮಿಕರ ಐತಿಹಾಸಿಕ ಸಮ್ಮೇಳನದಲ್ಲಿ ಜನ್ಮ ತಾಳಿದ ಕೇಂದ್ರ ಕಾರ್ಮಿಕ ಸಂಘಟನೆಯೇ ಸಿಐಟಿಯು. ಪ್ರಸ್ತುತ ಸರ್ಕಾರಗಳು ಕಾರ್ಮಿಕ ವಿರೋಧಿ ಕಾನೂನಗಳ ಸುಗ್ರೀವಾಜ್ಞೆ ಜಾರಿಗೊಳಿಸುವ ಮೂಲಕ ಕಾರ್ಮಿಕರ ಜೀವನಕ್ಕೆ ಮರಣ ಶಾಸನ ಬರೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮ ಡಿವಾಳ ಸಮಾಜ ಅಧ್ಯಕ್ಷ ಮಹಾದೇವಪ್ಪ ಪವಾರ, ರುದ್ರಪ್ಪ ರಾಠೊಡ, ಅಲ್ಲಾಭಕ್ಷಿ ಮುಚ್ಚಾಲಿ, ಚೌಡಮ್ಮ ಯಲ್ಪು, ಕನಕಮ್ಮ ಮಾದರ, ರೇವಣಪ್ಪ ರಾಠೊಡ, ಶಾರದಮ್ಮ ರಾಠೊಡ, ಶಿವಾನಂದ ಬಡಿಗೇರ, ಸರಸ್ವತಿ ರಾಠೊಡ, ಅಶೋಕ ಪತ್ತಾರ, ಶಿವಾನಂದ ಮಡಿವಾಳರ, ಚಂದ್ರು ರಾಠೊಡ, ಗಣೇಶ ರಾಠೊಡ, ಶಿವಾನಂದ ಭೊಸಲೆ, ಕಳಕೇಶ ರಾಠೊಡ, ಈರವ್ವ ಮಾಳ್ಳೋತ್ತರ, ಶರಣಪ್ಪ ಬಡ್ಡಿ, ಗುರುಶಾಂತ ಹಿರೇಮಠ, ಮಲ್ಲಪ್ಪ ಮಾವಿನಗಿಡದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ