ಆಲೂರು: ದೇವಿಯ 6 ಅಡಿ ಎತ್ತರದ ನೂತನ ವಿಗ್ರಹ ಟ್ರ್ಯಾಕ್ಟರ್ ಗಳ ಮೂಲಕ ಬೆಟ್ಟಕ್ಕೆ
ನಿಧಿ ಆಸೆಗಾಗಿ ದೇವಿಯ ವಿಗ್ರಹವನ್ನು ವಿರೂಪಗೊಳಿಸಿದ್ದರು
Team Udayavani, Oct 24, 2022, 9:19 PM IST
ಆಲೂರು: ತಾಲೂಕಿನ ಕೆ. ಹೊಸಕೋಟೆ ಹೋಬಳಿಗೆ ಸೇರಿದ ಇತಿಹಾಸ ಪ್ರಸಿದ್ಧ ಪಾರ್ವತಮ್ಮ ದೇವಿಯ 6 ಅಡಿ ಎತ್ತರದ ನೂತನ ವಿಗ್ರಹ ಮೂರ್ತಿಯನ್ನು ಭಾನುವಾರ ಬೆಟ್ಟದ ಮೇಲಿರುವ ದೇವಾಲಯಕ್ಕೆ ಎರಡು ಟ್ರ್ಯಾಕ್ಟರ್ ಗಳ ಮೂಲಕ ಕೊಂಡೊಯ್ಯಲಾಯಿತು.
ಕಳೆದ ನಾಲ್ಕು ವರ್ಷಗಳ ಹಿಂದೆ ಕಿರಿಗೆಡಿಗಳು ನಿಧಿ ಆಸೆಗಾಗಿ ಪಾರ್ವತಮ್ಮ ಬೆಟ್ಟದ ಸುತ್ತಲೂ ಹೊಂಚುಹಾಕಿ ನಂತರ ತಡರಾತ್ರಿ ದೇವಾಲಯದ ಒಳಗಡೆ ನುಗ್ಗಿ ದೊಡ್ಡ ದೊಡ್ಡ ಗುಂಡಿಗಳನ್ನ ತೋಡಿ ನಿಧಿಗಾಗಿ ಹುಡುಕಾಟ ನಡೆಸಿದ್ದರು. ನಿಧಿ ಸಿಗದೇ ಇದ್ದಾಗ ದೇವಿಯ ವಿಗ್ರಹವನ್ನು ವಿರೂಪಗೊಳಿಸಿ ಅಲ್ಲಿಂದ ಪರಾರಿಯಾಗಿದ್ದರು.ನಂತರ ದೇವಾಲಯ ಸಮಿತಿಯವರು ಏನಾದರೂ ಮಾಡಿ ದೇವಿಯ ವಿಗ್ರಹವನ್ನು ಮಾಡಿಸಲೇಬೇಕೆಂದು ನಿರ್ಧರಿಸಿ ಮೈಸೂರುನಲ್ಲಿ ಸುಮಾರು ನಾಲ್ಕು ಲಕ್ಷ ರೂಗಳ ವೆಚ್ಚದಲ್ಲಿ ದೇವಿಯ ನೂತನ ವಿಗ್ರಹವನ್ನು
ಮಾಡಿಸಿ ಭಾನುವಾರ ಅದನ್ನ ಬೆಟ್ಟದ ಮೇಲಿರುವ ದೇವಾಲಯಕ್ಕೆ ಎರಡು ಟ್ರ್ಯಾಕ್ಟರ್ ಮೂಲಕ ಕೊಂಡೊಯ್ಯಲಾಯಿತು. ಫೆಬ್ರುವರಿ ತಿಂಗಳಲ್ಲಿ ದೇವಿಯ ಜಾತ್ರೆ ಇರುವುದರಿಂದ ಅಂದು ದೇವಿಯ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಿ ಪೂಜಿಸಲಾಗುವುದು ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ನಂಜಪ್ಪ ಗೌಡ, ಉಪಾಧ್ಯಕ್ಷ ಕಿರಣ್, ಗ್ರಾಮದ ಹಿರಿಯ ಮುಖಂಡರಾದ ಪೂವಯ್ಯ,ಚಂದ್ರಕಾಂತ್ ಅಬ್ಬನ, ಕುಮಾರ್ ಎ ಎಲ್, ಚಂದ್ರಶೇಖರ ಮಲಗಳಲೆ, ಪರಮೇಶ ಆನೆಗಳಲೆ ದೊಡ್ಡಪ್ಪಣ್ಣ, ಪೂವಯ್ಯ, ಅನೇಕ ಗ್ರಾಮಸ್ಥರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ