ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ
Team Udayavani, Oct 16, 2021, 2:34 PM IST
ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿಯ ವನಗೂರು ಗ್ರಾಪಂ ವ್ಯಾಪ್ತಿಯ ಮಡ್ಡಿಕೇರಿ ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿತಾರಣ್ಯಕ್ಕೆ ಬಿಟ್ಟಿರುವ ಘಟನೆ ನಡೆದಿದೆ. ಗ್ರಾಮದ ದೇವರಾಜ್ ಎಂಬುವವರ ಮನೆಯ ಸಮೀಪ ಭಾರೀ ಗ್ರಾತದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಕೂಡಲೇ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;- ಹೀರೋ ಎಕ್ಸ್ಟ್ರೀಂ 160ಆರ್ ಸ್ಟೆಲ್ತ್ ಬೈಕ್ ಬಿಡುಗಡೆ
ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ಮೋಹನ್ ಕೊಡಗಿನ ಸೋಮವಾರಪೇಟೆ ತಾಲೂಕಿನ ಉರಗ ಪ್ರೇಮಿ ರಘು ಎಂಬುವವರನ್ನು ಕರೆಸಿ ಸುಮಾರು 1 ಘಂಟೆಗೂ ಹೆಚ್ಚು ಕಾರ್ಯಾಚರಣೆ ನೆಡೆಸಿ ಸುಮಾರು 13ಅಡಿ ಉದ್ದ ಹಾಗೂ 11 ಕೆ.ಜಿ. ತೂಕವಿದ್ದ ಕಾಳಿಂಗ ಸರ್ಪವನ್ನು ಹಿಡಿದು ಬಿಸಿಲೆ ರಕ್ಷಿತಾರಣ್ಯಕ್ಕೆ ಬಿಡಲಾ ಯಿತು.
ಉಪವಲಯ ಅಧಿಕಾರಿ ಸೋಮಶೇಖರ್, ಅರಣ್ಯ ರಕ್ಷಕ ಎಚ್ .ಬಿ,ಪ್ರದೀಪ್, ಸಿಬ್ಬಂದಿ, ಜೀವನ್, ಅಭಿಷೇಕ್, ಜೀವನ್ ಇತರರಿದ್ದರು.