ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿಯನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದ ಸಿ ಟಿ ರವಿ
Team Udayavani, Aug 3, 2020, 4:23 PM IST
ಹಾಸನ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿಯನ್ನು ತಮ್ಮ ವಾಹನದಲ್ಲಿ ಕರೆತಂದು ಅಸ್ಪತ್ರೆ ಗೆ ದಾಖಲಿಸಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮಾನವೀಯತೆ ಮೆರೆದಿದ್ದಾರೆ.
ಹಾಸನ ಹೊರ ವಲಯದಲ್ಲಿ ಸಚಿವರು ಸಾಗುತ್ತಿದ್ದಾಗ, ಹಾಸನದ ಉದ್ದೂರು ಹರಳಳ್ಳಿ ಬಳಿ ದ್ವಿ ಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡು ಪ್ರಜ್ಞಾ ಹೀನರಾಗಿದ್ದ ಯುವತಿಯನ್ನು ಕಂಡು ತಮ್ಮ ವಾಹನದಲ್ಲಿ ಕರೆತಂದು ಹಾಸನದ ಹಿಮ್ಸ್ ಅಸ್ಪತ್ರೆಯ ನಾನ್ ಕೋವಿಡ್ ವಿಭಾಗಕ್ಕೆ ದಾಖಲಿಸಿದರು.
ನಂತರ ಸ್ವಲ್ಪ ಸಮಯ ಇದ್ದು, ಆರೋಗ್ಯ ವಿಚಾರಿಸಿ ಅರೈಕೆ ಮಾಡುವಂತೆ ಸಚಿವರಾದ ಸಿ.ಟಿ ರವಿಯವರು ತಿಳಿಸಿ, ಕೆಲ ಹೊತ್ತು ಅಲ್ಲೇ ಇದ್ದು ಬೆಂಗಳೂರಿಗೆ ತೆರಳಿದರು .