ಕುತ್ತಿಗೆ ಹಿಸುಕಿ ತಾಯಿ ಹತ್ಯೆಗೈದ ಪುತ್ರರು
ತಾಯಿಯ ಒಡವೆಗಳನ್ನು ಗಿರವಿ ಇಟ್ಟಿದ್ದರು ! ಬಿಡಿಸಿಕೊಡಲು ಕೇಳಿದಾಗ ಉಸಿರುಗಟ್ಟಿಸಿ ಹತ್ಯೆ
Team Udayavani, Mar 19, 2021, 8:12 PM IST
ಸಕಲೇಶಪುರ: ಗಿರಿವಿ ಇಟ್ಟಿದ್ದ ಚಿನ್ನಾಭರಣ ಬಿಡಿಸಿಕೊಡಲು ಕೇಳಿದ ವೃದ್ಧೆ ತಾಯಿಯನ್ನು ಮಕ್ಕಳಿಬ್ಬರು ಹತ್ಯೆ ಮಾಡಿರುವ ಪ್ರಕರಣ ಸಕಲೇಶಪುರ ತಾಲೂಕು ಕರಡಿಗಾಲದಲ್ಲಿ ನಡೆದಿದೆ.
ಕರಡಿಗಾಲದ ಪುಟ್ಟಸ್ವಾಮಿಗೌಡ ಮತ್ತು ತಂಗ್ಯಮ್ಮ ದಂಪತಿಗೆ ಹೇಮಂತ್, ಸುಬ್ರಹ್ಮಣ್ಯ ಮತ್ತು ರಾಜೇಗೌಡ ಎಂಬ ಮೂವರು ಗಂಡು ಮಕ್ಕಳಿದ್ದು, 5 ವರ್ಷಗಳ ಹಿಂದೆಯೇ ಜಮೀನು, ಮನೆ ವಿಭಾಗ ಮಾಡಿಕೊಂಡಿದ್ದರು. ಪತಿ ಪುಟ್ಟಸ್ವಾಮಿಗೌಡ ಮೃತಪಟ್ಟ ನಂತರ ತಂಗ್ಯಮ್ಮ ಮಗ ಹೇಮಂತ್ ಮನೆಯಲ್ಲಿ ವಾಸವಿದ್ದರು.
ಸುಬ್ರಮಣ್ಯ(47), ರಾಜೇಗೌಡ (50)ತಾಯಿಯ ಚಿನ್ನಾಭರಣ ಪಡೆದು ಗಿರಿವಿ ಇಟ್ಟಿದ್ದರು. ತನ್ನ ಚಿನ್ನಾಭರಣ ಬಿಡಿಸಿಕೊಡಬೇಕೆಂದು ತಂಗ್ಯಮ್ಮ ಒತ್ತಾಯ ಮಾಡುತ್ತಿದ್ದರು. ಮಂಗಳವಾರವೂ ಚಿನ್ನಾಭರಣಗಳನ್ನು ಗಿರವಿಯಿಂದ ಬಿಡಿಸಿಕೊಡಿ ಎಂದು ತನ್ನ ಮಕ್ಕಳಿಬ್ಬರನ್ನು ಒತ್ತಾಯ ಮಾಡಿದ್ದರಿಂದ ಸಿಟ್ಟಿಗೆದ್ದ ಸುಬ್ರಹ್ಮಣ್ಯ ಮತ್ತು ರಾಜೇಗೌಡ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಯ ಮೇಲೆ ಜಗಳ ತೆಗೆದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ.
ಈ ಸಂಬಂಧ ಹೇಮಂತ್ ಅವರು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು