Sakleshpura; ಬಾಲಕನನ್ನು ಸರಪಳಿಯಿಂದ ಬಿಗಿದು ಬಂಧಿಸಿಟ್ಟಿದ್ದ ಪೋಷಕರು!
ಪದೇ ಪದೆ ಮನೆ ಬಿಟ್ಟು ಹೋಗುತ್ತಿದ್ದ ; 10 ದಿನದಿಂದ ಬಾಲಕ ಸರಪಳಿಯಲ್ಲಿ
Team Udayavani, Feb 22, 2024, 7:35 AM IST
ಸಕಲೇಶಪುರ: ಬಾಲಕನ ಪುಂಡಾಟ ತಾಳಲಾರದೆ ಪೋಷಕರೇ ಆತನನ್ನು ಕಬ್ಬಿಣದ ಸರಪಳಿಯಿಂದ ಬಂಧಿಸಿ ಮನೆಯಲ್ಲಿ ಕೂಡಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಕ್ಯಾನಹಳ್ಳಿಯ ಕಾಫಿತೋಟ ದಲ್ಲಿ ಕಾರ್ಮಿಕರಾಗಿರುವ ಅಸ್ಸಾಂ ಮೂಲದ ಹಸೀನಾಬಾನು-ಅಮೀರ್ ಹುಸೇನ್ ದಂಪತಿಗೆ 7 ಮಕ್ಕಳಿದ್ದು, 6ನೇ ಮಗನಾದ ಉಬೇದುಲ್ಲಾ (11) ಅತ್ಯಂತ ತುಂಟನಾಗಿದ್ದ. ಪೋಷಕರು ಕೆಲಸಕ್ಕೆ ತೆರಳಿದ ಬಳಿಕ ಮನೆಬಿಟ್ಟು ಹೋಗುತ್ತಿದ್ದ ಈತನನ್ನು 2-3 ದಿನಗಳ ಕಾಲ ಹುಡುಕಿ ಕರೆತಂದಿದ್ದರು.
10 ದಿನಗಳಿಂದ ಈತನನ್ನು ಸರಪಳಿಯಿಂದ ಬಂಧಿಸಿದ್ದರು. ಬುಧವಾರ ಅದ್ಹೇಗೋ ಮನೆಯಿಂದ ಹೊರಬಂದ ಬಾಲಕ ಸರಪಳಿ ಸಹಿತ ಸಮೀಪದ ರಸ್ತೆಯಲ್ಲಿ ಕುಳಿತಿದ್ದ. ಇದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ತಿಳಿಸಿದ್ದರು. ಪೋಲಿಸರು ಆಗಮಿಸಿ ಬಾಲಕನನ್ನು ರಕ್ಷಿಸಿದ್ದು, ಆತನನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್