ಕೃಷಿ-ಪಶುಪಾಲನೆ ಮಿಶ್ರ ಬೇಸಾಯದ ಪ್ರಮುಖ ಅಂಗ


Team Udayavani, Jul 25, 2020, 8:54 AM IST

ಕೃಷಿ-ಪಶುಪಾಲನೆ ಮಿಶ್ರ ಬೇಸಾಯದ ಪ್ರಮುಖ ಅಂಗ

ರಾಣೆಬೆನ್ನೂರು: ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ತಾಲೂಕಿನ ಶ್ರೀ ಅಡವಿ ಆಂಜನೇಯ ಬಡಾವಣೆಯ ಪ್ರಗತಿಪರ ರೈತ ಹಾಗೂ ಪಶುಪಾಲಕ ಶ್ರೀಧರ ಅವರ ಕ್ಷೇತ್ರಕ್ಕೆ ಭೇಟಿ ನೀಡಿ ಪಶುಗಳ ಸಕಾಣಿಕೆ ಮತ್ತು ಹಸಿ ಮೇವು ಬೆಳೆಯುವ ಕುರಿತು ಮಾಹಿತಿ ನೀಡಿದರು.

ಪಶು ವಿಜ್ಞಾನಿ ಡಾ| ಮಹೇಶ ಕಡಗಿ ಮಾತನಾಡಿ, ಬೆಳೆಗಳ ಬೇಸಾಯ ಮತ್ತು ಪಶುಪಾಲನೆ ಇವು ಮಿಶ್ರ ಬೇಸಾಯ ಪದ್ಧತಿಯ ಎರಡು ಪ್ರಮುಖ ಅಂಗಗಳಾಗಿದ್ದು, ಕೃಷಿ ಆದಾಯದ ಮಟ್ಟವನ್ನು ನಿರ್ಧರಿಸುತ್ತವೆ. ಹೈನೋದ್ಯಮದಲ್ಲಿ ಮೇವಿನ ಬೆಳೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೈನುಗಾರಿಕೆಯಲ್ಲಿ ಬರುವ ಒಟ್ಟು ಖರ್ಚಿನಲ್ಲಿ ಶೇ. 70 ರಿಂದ 80 ರಷ್ಟು ಪಶುಗಳಿಗೆ ಪೂರೈಸುವ ಆಹಾರದ್ದಾಗಿರುತ್ತದೆ ಎಂದು ತಿಳಿಸಿದರು.

ಒಟ್ಟು ಮೇವಿನಲ್ಲಿ ಶೇ. 70 ರಿಂದ 75 ಭಾಗ ಉತ್ತಮ ದರ್ಜೆಯ ಏಕದಳ ಹಸಿರು ಮೇವು ಹಾಗೂ ಶೇ. 25 ರಿಂದ 30 ಭಾಗ ಒಳ್ಳೆಯ ದ್ವಿದಳ ಹಸಿರು ಮೇವಾಗಿರಬೇಕು. ಜಾನುವಾರುಗಳಿಗೆ ಸಮತೋಲನ ಆಹಾರ ಒದಗಿಸಿದಂತಾಗುತ್ತದೆ. ಇದರಿಂದ ಪ್ರತಿ ದಿನ 5-6 ಲೀ. ವರೆಗೆ ಹಾಲನ್ನು ದಾಣಿ ಮಿಶ್ರಣವಿಲ್ಲದೆ ಪಡೆಯಬಹುದು ಮತ್ತು ಖರ್ಚು ಕಡಿಮೆಯಾಗುತ್ತದೆ. ಆದ್ದರಿಂದ ಮೇವಿನ ಬೆಳೆಗಳ ಸಾಗುವಳಿ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ ಎಂದು ಹೇಳಿದರು.

ನೀರಾವರಿ ಅನುಕೂಲತೆ ಇಲ್ಲದ್ದಿರೂ ಮಳೆಯಾಶ್ರಿತ ಮೇವಿನ ಬೆಳೆ ಯೋಜನೆ ಹಾಕಿಕೊಂಡು ಒಂದು ಎಕರೆ ಪ್ರದೇಶದಲ್ಲಿ 3-5 ಹೈನು ದನಗಳನ್ನು ಸಾಕಬಹುದು. ಬಹು ವಾರ್ಷಿಕ ಮೇವಿನ ಜೋಳ ಒಂದು ಪೋಷಕಾಂಶಗಳುಳ್ಳ ಹಸಿರು ಮೇವಾಗಿದ್ದು, ಇದು ಮಳೆ ಆಶ್ರಿತ ಹೈನುಗಾರಿಕೆ ರೈತರಿಗೆ ವರದಾನವಾಗಿದೆ. ಈ ಬೆಳೆಯ ಕಾಂಡವು ಸಣ್ಣಗಾಗಿದ್ದು, ಕಟಾವು ಮಾಡಲು ಮತ್ತು ಪಶುಗಳಿಗೆ ಮೇಯಲು ಉತ್ತಮವಾಗಿರುತ್ತದೆ. ಈ ಬೆಳೆಯು ಹೆಚ್ಚು ಹಸಿರು ಎಲೆಗಳನ್ನು ಹೊಂದಿದ್ದು, ತುಂಬಾ ಎತ್ತರವಾಗಿ ಬೆಳೆಯುತ್ತದೆ ಎಂದು ತಿಳಿಸಿದರು.

ವಿಜ್ಞಾನಿ ಹಾಗೂ ಕೇಂದ್ರ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಅಧಿಕ ಇಳುವರಿ ಮತ್ತು ಸಮತೋಲನ ಪೌಷ್ಟಿಕ ಮೇವನ್ನು ಪಡೆಯಲು ಏಕ ಹಾಗೂ ಬಹು ವಾರ್ಷಿಕ ಮೇವಿನ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಹಾಲಿನ ಉತ್ಪನ್ನ ಪಡೆಯುವುದರ ಜೊತೆಗೆ ದಾಣಿ (ಹಿಂಡಿ) ಖರ್ಚನ್ನೂ ಸಹ ಕಡಿಮೆ ಮಾಡಬಹುದು. ಬಹು ವಾರ್ಷಿಕ ಮೇವಿನ ಬೆಳೆಗಳಲ್ಲಿ ಮುಖ್ಯವಾಗಿ ಬಹುವಾರ್ಷಿಕ ಮೇವಿನ ಜೋಳ ಸಿ.ಒ.ಎಫ್‌.ಎಸ್‌.-29 ಮತ್ತು ಸಿ.ಒ.ಎಫ್‌.ಎಸ್‌.-31 ತಳಿಗಳು ಮಳೆಯಾಧಾರಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಮೇವಿನ ಇಳುವರಿ ಕೊಡುವ ಬೆಳೆಗಳಿದ್ದು, ಈ ತಳಿಗಳು ಸುಮಾರು 4 ರಿಂದ 5 ವರ್ಷಗಳ ವರೆಗೆ ಉತ್ತಮ ಇಳುವರಿಯನ್ನು ನೀಡುತ್ತವೆ ಎಂದು ಹೇಳಿದರು.

ಒಂದು ಎಕರೆಗೆ ಸುಮಾರು 4 ಕೆ.ಜಿ. ಬೀಜ ಬೇಕಾಗುತ್ತದೆ. ಸಾಮಾನ್ಯ ಫಲವತ್ತಾದ ಭೂಮಿಯಲ್ಲಿ 30 ಸೆಂ.ಮೀ. ಸಾಲುಗಳಲ್ಲಿ ಬಿತ್ತುವುದು. ಬಿತ್ತನೆಯ ಆಳ 2-3 ಸೆಂ.ಮೀ. ಗಿಂತ ಹೆಚ್ಚಾಗಿರಬಾರದು. ಪೋಷಕಾಂಶಗಳ ನಿರ್ವಹಣೆಗಾಗಿ 50 ಕೆ.ಜಿ. ಯೂರಿಯಾ ಮತ್ತು 50 ಕೆ.ಜಿ. ಡಿ.ಎ.ಪಿ.ಮೂಲ ಗೊಬ್ಬರ ಮತ್ತು ಪ್ರತಿ ಕಟಾವಿನ ನಂತರ 50 ಕೆ.ಜಿ. ಯೂರಿಯಾ ಮೇಲು ಗೊಬ್ಬರ ನೀಡಬೇಕಾಗುತ್ತದೆ. ಮಳೆ ಬಾರದಿರುವ ಸಂದರ್ಭದಲ್ಲಿ 1-2 ಬಾರಿ ನೀರು ಹಾಯಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಬಿತ್ತಿದ 60-75 ದಿನಗಳಲ್ಲಿ ಮೊದಲ ಕಟಾವಿಗೆ ಬರುತ್ತದೆ. ತದನಂತರ ಉತ್ತಮ ಮಳೆಯಾದಲ್ಲಿ 45 ದಿನಗಳ ಅಂತರದಲ್ಲಿ ಕಟಾವು ಮಾಡಬಹುದು. ವರ್ಷದಲ್ಲಿ ಮಳೆಯಾಧಾರಿತ ಬೆಳೆಯಾಗಿ 4 ಕಟಾವುಗಳಿಂದ ಎಕರೆಗೆ ಸುಮಾರು 40 ರಿಂದ 60 ಟನ್‌ ವರೆಗೆ ಹಸಿರು ಮೇವು ಪಡೆಯಬಹುದು ಎಂದು ತಿಳಿಸಿದರು.

ಟಾಪ್ ನ್ಯೂಸ್

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.