ಯೋಧ ಮಲ್ಲಪ್ಪಗೆ ಅಂತಿಮ ನಮನ
Team Udayavani, Apr 15, 2020, 12:33 PM IST
ಬ್ಯಾಡಗಿ: ತೀವ್ರ ಅನಾರೋಗ್ಯದಿಂದ ನಾಗಪುರ (ಮಹಾರಾಷ್ಟ್ರ) ಮಿಡಾಸ್ ಹಾಸ್ಪಿಟಲ್ನಲ್ಲಿ ನಿಧನರಾಗಿದ್ದ ಸಿಆರ್ ಪಿಎಫ್ ಯೋಧ ಮಲ್ಲಪ್ಪ ಸಂಗಪ್ಪ ಧನ್ನೂರ (52) ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಪಟ್ಟಣದ ವೀರಶೈವ ಮುಕ್ತಿಧಾಮದಲ್ಲಿ ಮಂಗಳವಾರ ನೆರವೇರಿಸಲಾಯಿತು.
ಯೋಧನ ಪಾರ್ಥಿವ ಶರೀರವು ಮಧ್ಯಾಹ್ಮ 4 ಗಂಟೆ ಸುಮಾರಿಗೆ ಪಟ್ಟಣವನ್ನು ಪ್ರವೇಶಿಸಿತು. ಯೋಧನ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರು ಅಂತಿಮ ನಮನ ಸಲ್ಲಿಸಿದರು. ಮಿಲಿಟರಿ ಪಡೆಗಳಿಂದ, ಪೊಲೀಸರಿಂದ ಗಾರ್ಡ್ ಆಫ್ ಆನರ್ ಸಲ್ಲಿಸಲಾಯಿತು. ಬಳಿಕ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ವರ್ತಕ ಎಸ್.ಆರ್. ಪಾಟೀಲ, ತಹಶೀಲ್ದಾರ್ ಶರಣಮ್ಮ, ಮುಖ್ಯಾಧಿಕಾರಿ ವಿ.ಎಂ. ಪೂಜಾರ, ಸಿಪಿಐ ಭಾಗ್ಯವತಿ ಮೊದಲಾದವರು ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು