ವಚನ ಸಾಹಿತ್ಯ ನಾಡಿನ ಅದುತ ಕೊಡುಗೆ
Team Udayavani, Feb 17, 2020, 3:35 PM IST
ಹಾನಗಲ್ಲ: ಜೀವನದ ಪ್ರತಿಬಿಂಬ ಸ್ಥಿತಿಬಿಂಬವಾಗಿರುವ ಸಾಹಿತ್ಯಕ್ಕೆ ಮೆದುಳಿನ ಪ್ರಖರತೆ ಹೆಚ್ಚಿಸುವ ಶಕ್ತಿ ಇದ್ದು, ಜನಮುಖೀಯಾದ ಸಾಹಿತ್ಯವನ್ನು ಅರಿಯುವ ಅಭಿರುಚಿ ಸಮಾಜದ್ದಾಗಬೇಕಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರು ಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಹೇಳಿದರು.
ಹಾನಗಲ್ಲ ಬಳಿಯ ಮಲ್ಲಿಗಾರ ಶ್ರೀ ಸಿದ್ಧರಾಮೇಶ್ವರ ಮಂದಿರದ ಸಭಾಭವನದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ತಾಲೂಕು ಶರಣ ಸಾಹಿತ್ಯ ಸಮ್ಮೇಳನವನದ ಸಾನಿಧ್ಯವಹಿಸಿ ಮಾತನಾಡಿದ ಅವರು, ಶರಣ ಬದುಕು ಆದರ್ಶಪ್ರಾಯವಾದುದು. ಅವರ ಚಿಂತನೆಗಳು ಸದಾಕಾಲಕ್ಕೂ ಮಾರ್ಗದರ್ಶನ ನೀಡುವಂತಹವುಗಳು. ವಚನ ಸಾಹಿತ್ಯ ಈ ನಾಡಿದ ಅದ್ಭುತ ಕೊಡುಗೆಯಾಗಿದೆ. ಶರಣರು ದಾಸರು ಸಂತರ ಅನುಭವದ ನುಡಿಗಳು ನಮಗೆ ಪ್ರೇರಣಾದಾಯಕವಾಗಿವೆ. ಶರಣ ಸಾಹಿತ್ಯ ಪರಿಷತ್ತು ಅಭಿನಂದನೀಯ ಕಾರ್ಯ ಮಾಡುತ್ತಿದ್ದು ನಮ್ಮೆಲ್ಲರ ಬೆಂಬಲ ನಿರಂತರವಾಗಿದೆ ಎಂದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಬಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ಬಸವ ಯುಗ ಎಂದರೆ ಅದು ಜಗಜ್ಯೋತಿ ಯುಗ. ಮೌಲ್ಯಗಳ ಬುತ್ತಿ ವಚನ ಸಾಹಿತ್ಯ. 12 ನೇ ಶತಮಾನ ಸದಾಚಾರಗಳನ್ನು ಬಿತ್ತಿದ ಕಾಲ. ವರ್ಗ ವರ್ಣ ಭೇದವನ್ನು ಮರೆತು, ಸಮಾನತೆ ಬಿತ್ತಿದ ವಚನಕಾರರ ಚಿಂತನೆಗಳನ್ನು ಪರಿಚಯಿಸುವಲ್ಲಿ ನಮ್ಮ ಶ್ರಮ ಸಾರ್ಥಕವಾಗಿ ಮುನ್ನಡೆಯಬೇಕು. ಬಮ್ಮನಹಳ್ಳಿಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ನಡೆಸಲು ನೇತೃತ್ವ ವಹಿಸಲು ಸಿದ್ಧ ಎಂದರು.
ಸಮ್ಮೇಳನದ ಸವಾಧ್ಯಕ್ಷರಾದ ಲಲಿತಾದೇವಿ ಮುತ್ತಿನಕಂತಿಮಠ ಮಾತನಾಡಿ, ವಿಭೂತಿ ರುದ್ರಾಕ್ಷಿ ಧಾರಣೆ. ಲಿಂಗ ಪೂಜೆ ಪಾಲನೆ ನಮ್ಮ ಬದುಕಿಗೆ ಶಕ್ತಿ ತುಂಬುವಂತಹವುಗಳು. ಶರಣರ ಚಿಂತನೆಗಳು ನಮ್ಮ ಮನೆ ಮನಗಳಿಗೆ ಶಕ್ತಿದಾಯಕವಾದವುಗಳು. ಶರಣರ ಚಿಂತನೆಗಳನ್ನು ಅನುಸರಿಸುವ ಮನಸ್ಸು ನಮ್ಮದಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಸಿದ್ಧರಾಮೇಶ್ವರ ಟ್ರಸ್ಟ್ ಅಧ್ಯಕ್ಷ ನಾಗಪ್ಪ ಸವದತ್ತಿ, ಧರ್ಮ ಸಂಸ್ಕಾರದ ಕಾರ್ಯಗಳಲ್ಲಿ ಕೈಗೂಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಮ್ಮ ಮನೆ ಬಸವಾದಿ ಪ್ರಮಥರ ಚಿಂತನೆಗಳ ಅಚರಣೆ ಮನೆಗಳಾಗಬೇಕು ಎಂದರು.
ಅಕ್ಕಿಆಲೂರು ಚನ್ನವೀರೇಶ್ವರಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂಥಿಮಠದ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಎಂ.ಪಾಟೀಲ, ಗಣ್ಯರಾದ ಎಚ್.ಡಬ್ಲೂ. ರವಿಕುಮಾರ, ಶಂಕ್ರಣ್ಣ ಹಾದಿಮನಿ, ಇಷ್ಟಲಿಂಗ ಸಾಲವಟಗಿ, ಬಿ.ಶಿವಬಸಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ, ಕಾರ್ಯದರ್ಶಿ ನಿರಂಜನ ಗುಡಿ, ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಅಧ್ಯಕ್ಷ ಸಿ.ಮಂಜುನಾಥ, ಕದಳಿ ವೇದಿಕೆ ಗೌರವಾಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಅಧ್ಯಕ್ಷೆ ಅಕ್ಕಮ್ಮ ಕುಂಬಾರಿ, ಉಪಾಧ್ಯಕ್ಷ ಮಧುಮತಿ ಪೂಜಾರ ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…