ಶಿಕ್ಷಕನಿಂದ ನಿತ್ಯ ಯೋಗ ಯಾಗ

•ನಾಲ್ಕು ದಶಕಗಳಿಂದ ಯೋಗ ಪ್ರಚಾರ•50,000ಕ್ಕೂ ಹೆಚ್ಚು ಜನರಿಗೆ ಯೋಗ ತರಬೇತಿ

Team Udayavani, Jun 21, 2019, 8:47 AM IST

haveri-tdy-1..

ಹಾವೇರಿ: ‘ಸರ್ವರೋಗಗಳಿಗೂ ಯೋಗವೇ ಮದ್ದು. ನೀವೆಲ್ಲ ಯೋಗವನ್ನು ಮುದ್ದು ಮಾಡಿ ಕಲಿಯಿರಿ. ಯೋಗ ನಿಮ್ಮ ಆರೋಗ್ಯಕ್ಕೆ ತರಲಿದೆ ಸುಯೋಗ. ಯೋಗ ಮಾಡಿ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ.’ -ಹೀಗೆ ಹತ್ತು ಹಲವು ರೀತಿಯಲ್ಲಿ ಯೋಗದ ಮಹತ್ವವನ್ನು ನಾಲ್ಕು ದಶಕಗಳಿಂದ ನಿರಂತರವಾಗಿ ಜನರಿಗೆ ತಿಳಿಸುತ್ತ ಯೋಗವನ್ನೇ ತಮ್ಮ ಜೀವನದ ಸಂಗಾತಿಯನ್ನಾಗಿಸಿಕೊಂಡ ಈ ಅಪರೂಪದ ಯೋಗಪಟುವಿನ ಹೆಸರು ರಾಮನಗೌಡ ಶಿವನಗೌಡ ಪಾಟೀಲ.

ಇವರು ಯೋಗ ಶಿಬಿರಗಳ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಆಶಾ ಕಾರ್ಯಕರ್ತರಿಗೆ, ಪೊಲೀಸರಿಗೆ, ಕುಸ್ತಿಪಟುಗಳಿಗೆ, ಎನ್‌ಸಿಸಿ ಕೆಡೆಟ್‌ಗಳಗೆ, ಸರ್ಕಾರಿ ನೌಕರರಿಗೆ ಅಷ್ಟೇ ಅಲ್ಲ ಸಹಜ ಹೆರಿಗೆಗಾಗಿ ಗರ್ಭಿಣಿಯರಿಗೂ ವಿಶೇಷ ಯೋಗ ತರಬೇತಿ ನೀಡಿದ್ದಾರೆ. 40ವರ್ಷಗಳಿಂದ ಯೋಗ ತರಬೇತಿ ನೀಡುತ್ತ, ಯೋಗದ ಬಗ್ಗೆ ಜನರಲ್ಲಿ ಜಾಗೃತಿ, ಮಹತ್ವ ತಿಳಿಸುತ್ತ ಬಂದ ಪಾಟೀಲರು, ಈ ವರೆಗೆ 50,000ಕ್ಕೂ ಅಧಿಕ ಜನರಿಗೆ ಯೋಗ ತರಬೇತಿ ನೀಡಿದ್ದಾರೆ.

ಬೆಳಗಾವಿ, ಉತ್ತರಕನ್ನಡ, ಗದಗ, ಹುಬ್ಬಳ್ಳಿ, ಧಾರವಾಡ ಹೀಗೆ ಉತ್ತರ ಕರ್ನಾಟಕದಾದ್ಯಂತ ಅತಿಹೆಚ್ಚು ಶಿಬಿರಗಳಲ್ಲಿ ನಡೆಸಿ ತರಬೇತಿ ನೀಡಿದ್ದಾರೆ. ಬೆಳಗಾವಿ ವಿಭಾಗ ಮಟ್ಟದ ಶಿಬಿರದಲ್ಲಿ ಇವರು ಶಿಕ್ಷಕರಿಗೆ ಯೋಗಾಭ್ಯಾಸ ಮಾಡಿಸಿ ಶಿಕ್ಷಕರಿಗೇ ‘ಯೋಗಗುರು’ ಎನಿಸಿದ್ದಾರೆ.

ಸೇವಾದಳದಲ್ಲಿ ಯೋಗದ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ರಾಜ್ಯದಾದ್ಯಂತ ನೂರಾರು ಶಿಬಿರಗಳನ್ನು ಮಾಡಿ ಯೋಗದ ಕುರಿತು ಜಾಗೃತಿ ಮೂಡಿಸಿ ತರಬೇತಿ ನೀಡಿದ್ದಾರೆ. ಅಷ್ಟೇಅಲ್ಲದೆ ನಿಯತಕಾಲಿಕೆಗಳು, ಪುಸ್ತಕಗಳ ಮೂಲಕವೂ ಯೋಗದ ಮಹತ್ವದ ಬಗ್ಗೆ ತಿಳಿಸುವ ಸಾಮಾಜಿಕ ಕಾರ್ಯ ಮಾಡಿದ್ದಾರೆ. ಪ್ರತಿ ತರಬೇತಿಯಲ್ಲಿ ದೇಹದ ಯಾವ ತೊಂದರೆ ನಿವಾರಣೆಗೆ ಯಾವ ಯೋಗ ಸೂಕ್ತ ಎಂಬ ಮಾಹಿತಿಯನ್ನೂ ನೀಡುವುದು ಇವರ ವಿಶೇಷತೆಗಳಲ್ಲೊಂದಾಗಿದೆ.

ಎಲ್ಲ ಆಸನಗಳೂ ಕರಗತ: ಆರ್‌.ಎಸ್‌. ಪಾಟೀಲ ಅವರು 70ಕ್ಕೂ ಹೆಚ್ಚು ಆಸನಗಳನ್ನು ಸುಲಲಿತವಾಗಿ ಮಾಡಬಲ್ಲವರಾಗಿದ್ದಾರೆ. ಸೂತ್ರನೀತಿ, ಜಲನೀತಿ, ವಮನದಾತುನಂಥ ನಿಸರ್ಗ ಚಿಕಿತ್ಸೆಯ ಮಾಹಿತಿ ಇವರಲ್ಲಿದೆ. ಕಠಿಣ ಎನಿಸುವಂಥ ತ್ರಿವಿಕ್ರಮಾಸಾನ, ದೂರ್ವಾಸಾನ, ಮಯೂರಾಸನ, ನಟರಾಜಾಸನಗಳು ಸಹ ಇವರಿಗೆ ಬಾಳೆಹಣ್ಣು ಸುಲಿದಷ್ಟೇ ಸುಲಭ.

ದೇಹದ ಯಾವ ತೊಂದರೆ ನಿವಾರಣೆಗೆ ಯಾವ ಆಸನ ಸೂಕ್ತ ಎಂಬ ಮಾಹಿತಿ ಇವರ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ಉಳಿದಿದೆ. ಇವರ ಬಳಿ ಏನಾದರೂ ತೊಂದರೆ ಎಂದು ಹೋದರೆ, ದೇಹದ ಸಮಸ್ಯೆ ಕೇಳುತ್ತಿದ್ದಂತೆ ಇಂಥ ಆಸನ ಮಾಡಿ ಎಂದು ಇದ್ದ ಸ್ಥಳದಲ್ಲಿಯೇ ಮಾಡಿ ತೋರಿಸುವ ಚಾಕಚಕ್ಯತೆ ಇವತ್ತಿನ 68ರ ಇಳಿ ವಯಸ್ಸಿನಲ್ಲಿಯೂ ಮಾಸಿಲ್ಲ.

ಯೋಗ ಕಲಿಸಿ ಹಣ ಮಾಡುವ ಹಂಬಲ ಇವರಲಿಲ್ಲ. ಯಾರು ಕರೆದರೂ ಸಮಯ ಹೊಂದಿಸಿಕೊಂಡು ತರಬೇತಿ ನೀಡುತ್ತಾರೆ. ಮನೆಗೆ ಬಂದು ದೈಹಿಕ ತೊಂದರೆ ಹೇಳಿಕೊಂಡವರಿಗೆ ಉಚಿತವಾಗಿ ಮಾರ್ಗದರ್ಶನ ಮಾಡುತ್ತಾರೆ. ವೃತ್ತಿಯಿಂದ ಸಹಶಿಕ್ಷಕರಾಗಿದ್ದು ಪ್ರವೃತ್ತಿಯಲ್ಲಿ ಇವರು ಉತ್ತಮ ಯೋಗಪಟು. ಯೋಗವೇ ಇವರ ಹವ್ಯಾಸವಾಗಿದೆ.

ಸ್ವಚಿಕಿತ್ಸೆಗಾಗಿ ಕಲಿತ ಯೋಗ: ರಾಣಿಬೆನ್ನೂರು ತಾಲೂಕು ಉಕ್ಕುಂದದಲ್ಲಿ ಜನಿಸಿದ ಆರ್‌.ಎಸ್‌. ಪಾಟೀಲರು, ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡು ಅವರಿವರ ಆಶ್ರಯದಲ್ಲಿ ಬೆಳೆದರು. ಈ ಸಂದರ್ಭದಲ್ಲಿ ಅವರಿಗೆ ಅಸ್ತಮಾ ರೋಗ ಅಂಟಿಕೊಂಡು ಉಸಿರಾಟ ಸಮಸ್ಯೆ ಉಂಟಾಯಿತು. ಬಡವರಾದ ಪಾಟೀಲರು, ತಮ್ಮ ಕೈಲಾದಷ್ಟು ಖರ್ಚು ಮಾಡಿ ವೈದ್ಯರಿಗೆ ತೋರಿಸಿದರೂ ಅದಕ್ಕೆ ಶಾಶ್ವತ ಪರಿಹಾರ ಸಿಗಲ್ಲಿಲ್ಲ.

ಆಗ ಪಾಟೀಲರು ತಾವು ಕೇಳಿ ತಿಳಿದ ಯೋಗದ ಬಗ್ಗೆ ಹೆಚ್ಚು ಆಸಕ್ತಿ ತೋರಿ ಪುಸ್ತಕಗಳ ಹುಡುಕಾಟ ನಡೆಸಿ ಅದರಲ್ಲಿನ ಅಂಶಗಳನ್ನು ಸ್ವತಃ ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಂಡರು. ಮುಂದೆ ಇವರಿಗೆ ಪುಸ್ತಕಗಳೇ ಯೋಗ ಗುರುವಾದವು. ಸ್ವತಃ ತಮಗೆ ತಗುಲಿದ ಕಾಯಿಲೆಗೆ ಯೋಗದ ಮೂಲಕ ಮದ್ದು ಹುಡುಕಿಕೊಂಡ ಪಾಟೀಲರಿಗೆ, ಯೋಗ ಅವರ ಆರೋಗ್ಯಕರ ದೇಹಕ್ಕೆ, ಜೀವನಕ್ಕೂ ಸ್ಫೂರ್ತಿಯಾಗಿ ನಿಂತುಕೊಂಡಿತು.

ಹಾವೇರಿ ಹುಕ್ಕೇರಿಮಠದ ಮಾಧ್ಯಮಿಕ ಶಾಲೆಯಲ್ಲಿ ಸಮಾಜವಿಜ್ಞಾನದ ಸಹಶಿಕ್ಷಕರಾಗಿದ್ದ ಇವರು ಈಗಲೂ ‘ಯೋಗ ಗುರು’ ಎಂದೇ ಚಿರಪರಿಚಿತರಾಗಿದ್ದಾರೆ. ನಾಲ್ಕು ದಶಕದಿಂದ ಯೋಗದ ಬಗ್ಗೆ ಸಾಮಾಜಿಕ ಜಾಗೃತಿ, ತರಬೇತಿ ನೀಡುತ್ತ ಬಂದಿರುವ ಇವರು, ತಮ್ಮ ಸಹಶಿಕ್ಷಕ ವೃತ್ತಿಯ ನಿವೃತ್ತಿಯ ಬಳಿಕವೂ ಮೊರಾರ್ಜಿ ಶಾಲೆಯಲ್ಲಿ ಯೋಗ ಶಿಕ್ಷಕರಾಗಿ ತಮ್ಮ ಯೋಗ ಸೇವೆ ನಿರಂತರವಾಗಿಟ್ಟುಕೊಂಡಿದ್ದಾರೆ. ತನ್ಮೂಲಕ ಯೋಗದ ಮಹತ್ವವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡುತ್ತಿದ್ದಾರೆ.

ಅಂತಾರಾಷ್ಟ್ರೀಯ 5ನೇ ಯೋಗ ದಿನ ಆಚರಣೆ ಅಂಗವಾಗಿ ಜಿಲ್ಲಾಡಳಿತ ಜೂ. 21ರಂದು ನಗರದ ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಹಾಗೂ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲಾಡಳಿತ, ಜಿಲ್ಲಾ ಆಯುಷ್‌ ಇಲಾಖೆ ಹಾಗೂ ವಿವಿಧ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮದ ಸಿದ್ಧತೆ ನಡೆದಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಅಂದಾಜು 1500 ಜನರು ಏಕಕಾಲಕ್ಕೆ ಯೋಗ ಪ್ರದರ್ಶನ ಮಾಡಲು ಅನುಕೂಲವಾಗುವಂತೆ ಕ್ರೀಡಾಂಗಣ ಸ್ವಚ್ಛಗೊಳಿಸಲಾಗಿದ್ದು ಇದೇ ಸ್ಥಳದಲ್ಲಿ ಸಭಾ ಕಾರ್ಯಕ್ರಮ ನಡೆಸಲು ವೇದಿಕೆ ಸಹ ನಿರ್ಮಿಸಲಾಗಿದೆ.

ಜೂ. 21ರಂದು ಬೆಳಗ್ಗೆ 6:30ಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶಗೊಳ್ಳಬೇಕು. ವಿಶ್ವದಾದ್ಯಂತ ಏಕಕಾಲದಲ್ಲಿ ಬೆಳಗ್ಗೆ 7ಗಂಟೆಯಿಂದ 7:40ರ ವರೆಗೆ ನಡೆಯುವ ಯೋಗಾಭ್ಯಾಸ ಕಾಲಕ್ಕೆ ಇಲ್ಲಿಯೂ ಯೋಗ ಪ್ರದರ್ಶನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನುರಿತ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಯೋಗ ಪ್ರದರ್ಶನ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಲಘು ಉಪಹಾರ ವ್ಯವಸ್ಥೆ, ಕ್ರೀಡಾಂಗಣದ ಸ್ವಚ್ಛತೆ ಸೇರಿದಂತೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಆಯುಷ್‌ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕ್ರೀಡಾ ಇಲಾಖೆ ಸಮನ್ವಯತೆಯಿಂದ ಮಾಡಿಕೊಂಡಿವೆ. ಯೋಗ ಪ್ರದರ್ಶನದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಯೋಗ ಮ್ಯಾಟ್‌ನೊಂದಿಗೆ ಭಾಗವಹಿಸಲು ಸಂಘಟಕರು ಕೋರಿದ್ದಾರೆ.

ಕಾರ್ಯಕ್ರಮ ವಿವರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದಖಾನ್‌ ಉದ್ಘಾಟಿಸುವರು. ಕೇಂದ್ರ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹಾಗೂ ಸಚಿವ ಆರ್‌. ಶಂಕರ್‌ ಭಾಗವಹಿಸುವರು. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಎಸ್‌.ವಿ.ಸಂಕನೂರ, ಪ್ರದೀಪ ಶೆಟ್ಟರ್‌, ಶಾಸಕರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಬಿ.ಸಿ. ಪಾಟೀಲ, ವಿರುಪಾಕ್ಷಪ್ಪ ಬಳ್ಳಾರಿ, ಜಿಪಂ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ ಹಾಗೂ ತಾಪಂ ಅಧ್ಯಕ್ಷ ಕರಿಯಲ್ಲಪ್ಪ ಉಂಡಿ ಭಾಗವಹಿಸುವರು.

 

•ಎಚ್.ಕೆ. ನಟರಾಜ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.