ಕ್ಷೇತ್ರಗಳ ವಿಂಗಡಣೆ; ಚಿಗುರಿದ ಕನಸು

ಹಿರೇಕೆರೂರ ತಾಲೂಕಿನಲ್ಲಿದ್ದ ರಟ್ಟೀಹಳ್ಳಿಗೆ ತಾಲೂಕು ಪಟ್ಟ

Team Udayavani, Mar 29, 2021, 4:50 PM IST

ಕ್ಷೇತ್ರಗಳ ವಿಂಗಡಣೆ; ಚಿಗುರಿದ ಕನಸು

ಹಿರೇಕೆರೂರ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆಯಿಂದ ತಾಲೂಕಿನಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ನೂತನವಾಗಿ ರಟ್ಟಿಹಳ್ಳಿ ತಾಲೂಕು ರಚನೆಯಾಗಿದ್ದರಿಂದ ತಾಲೂಕಿನಲ್ಲಿದ್ದ ಕೆಲವು ಜಿಪಂ ಹಾಗೂ ತಾಪಂ ಕ್ಷೇತ್ರಗಳು ವಿಂಗಡಣೆಯಾಗಿದ್ದು, ರಾಜಕೀಯ ಭವಿಷ್ಯದ ಕನಸು ಕಾಣುತ್ತಿದ್ದವರಲ್ಲಿ ಕುತೂಹಲ ಮೂಡಿಸಿದೆ.

ಕಳೆದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ವೇಳೆ ಹಿರೇಕೆರೂರ-ರಟ್ಟೀಹಳ್ಳಿ ತಾಲೂಕು ಅಖಂಡವಾಗಿತ್ತು. ಆಗ 20 ತಾಲೂಕು ಪಂಚಾಯಿತಿ ಕ್ಷೇತ್ರಗಳು ಹಾಗೂ 6 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನೊಳ ಗೊಂಡಿತ್ತು. ಈಗ ತಾಲೂಕು ವಿಭಜನೆಯಿಂದ ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕುಗಳಿಗೆ ತಲಾ 3 ಜಿಪಂ ಕ್ಷೇತ್ರಗಳು ದೊರಕಿವೆ. ಹಂಸಭಾವಿ, ಚಿಕ್ಕೇರೂರು ಹಾಗೂ ಕೋಡ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಿರೇಕೆರೂರ ತಾಲೂಕಿನಲ್ಲಿ ಉಳಿದಿವೆ. ರಟ್ಟೀಹಳ್ಳಿ ತಾಲೂಕು ವ್ಯಾಪ್ತಿಗೆ ಬರುವ ರಟ್ಟೀಹಳ್ಳಿ ಜಿಪಂ ಕ್ಷೇತ್ರ ರದ್ದಾಗಿದೆ. ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿದ್ದರಿಂದ ಈ ರದ್ದತಿ ಅನಿವಾರ್ಯವಾಗಿತ್ತು. ಜತೆಗೆ ಎರಡೂ ತಾಲೂಕುಗಳ ವ್ಯಾಪ್ತಿಯನ್ನೊಳಗೊಂಡಿದ್ದ ಚನ್ನಳ್ಳಿ ಜಿಪಂ ಕ್ಷೇತ್ರ ಕೂಡ ರದ್ದಾಗಿದೆ. ರಟ್ಟೀಹಳ್ಳಿ ತಾಲೂಕಿನ ಮಾಸೂರು ಜಿಪಂ ಕ್ಷೇತ್ರ ಉಳಿದಿದೆ. ಹೊಸದಾಗಿ ಕಡೂರು ಹಾಗೂ ಚಿಕ್ಕಕಬ್ಟಾರ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿವೆ.

ಕಡೂರು ಜಿಪಂ ಕ್ಷೇತ್ರ: ಕುಂಚೂರು, ಬತ್ತಿಕೊಪ್ಪ, ಲಿಂಗದೇವರ ಕೊಪ್ಪ, ಕ್ಯಾತನಕೇರಿ, ಚಿಕ್ಕಯಡಚಿ, ಹಿರೇಯಡಚಿ, ಹಿರೇಮತ್ತೂರ, ಹುಲ್ಲತ್ತಿ, ಕೋಡಿಹಳ್ಳಿ,ತಿಮ್ಮಲಾಪೂರ, ನೇಶ್ವಿ‌, ಮಾವಿನತೀಪ, ದೊಡ್ಡ ಗೊಬ್ಬಿ,ಮಕರಿ, ಯಡಗೋಡ, ಕುಡಪಲಿ ಸೇರಿದಂತೆ ಸೇರಿದಂತೆ 21 ಗ್ರಾಮಗಳ ಒಟ್ಟ 34,064 ಜನಂಖ್ಯೆ ಹೊಂದಿದೆ.

ಚಿಕ್ಕಕಬ್ಟಾರ ಜಿಪಂ ಕ್ಷೇತ್ರ: ಕಮಲಾಪೂರ, ಕಿರಗೇರಿ, ಚಟ್ನಳ್ಳಿ, ಪುರದಕೇರಿ, ಹಳ್ಳೂರ, ಗಲಗಿನಕ್ಟಟಿ, ಚಿಕ್ಕಕಬ್ಟಾರ, ಹಿರೇಕಬ್ಟಾರ, ಅಣಜಿ, ಗುಡ್ಡದ ಮಾದಾಪೂರ, ಮೈದೂರ, ನಾಗವಚಿದ, ಹೊಸಕಟ್ಟಿ, ಕಣವಿಸಿದ್ದಗೇರಿ, ಚಪ್ಪದಹಳ್ಳಿ ಜೋಕನಾಳ, ಪರ್ವತಸಿದ್ದಗೇರಿ, ಮಳಗಿ, ಯಲಿವಾಳ ಸೇರಿದಂತೆ ಒಟ್ಟು 19 ಗ್ರಾಮಗಳ ಒಟ್ಟು 28,003 ಜನಸಂಖ್ಯೆ ಹೊಂದಿದೆ.

20 ತಾಪಂ ಕ್ಷೇತ್ರಗಳು: ಹಿರೇಕೆರೂರು ತಾಲೂಕು ಅಖಂಡವಾಗಿದ್ದ 20 ತಾಪಂ ಕ್ಷೇತ್ರಗಳು ಇದ್ದವು. ಸದ್ಯರಟ್ಟಿಹಳ್ಳಿ ನೂತನ ತಾಲೂಕು ರಚನೆಯಾಗಿದ್ದರಿಂದ 20 ತಾಪಂ ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳು ಮಾತ್ರ ಹಿರೇಕೆರೂರ ತಾಲೂಕಿನಲ್ಲಿ ಉಳಿದಿವೆ. ರಟ್ಟಿàಹಳ್ಳಿ ತಾಲೂಕಿಗೆ 11 ತಾಪಂ ಕ್ಷೇತ್ರಗಳು ಸೇರಿವೆ. ಹಿರೇಕೆರೂರು ತಾಪಂ ಕ್ಷೇತ್ರಗಳಲ್ಲಿ ತಾಲೂಕಿನ ಆಲದಗೇರಿ, ಚಿನ್ನಮುಳಗುಂದ, ಹಂಸಬಾವಿ, ಕಚವಿ,ಚಿಕ್ಕೇರೂರು, ಬೆಟಕೇರೂರು, ಚನ್ನಳ್ಳಿ, ಅಬಲೂರು, ಕೋಡ ಕ್ಷೇತ್ರಗಳು ಸೇರಿವೆ.

ಇನ್ನು ರಟ್ಟಿಹಳ್ಳಿ ತಾಲೂಕಿನ ತಾಪಂ ಕ್ಷೇತಗಳಲ್ಲಿ ಕುಡುಪಲಿ, ಕುಂಚೂರು, ಹುಲ್ಲತ್ತಿ, ಸಿರಗಂಬಿ, ಮಾಸೂರ, ಹಿರೇಮೊರಬ, ಮೇದೂರ, ನಾಗವಂದ, ಹಳ್ಳೂರ, ಚಿಕ್ಕಕಬ್ಟಾರ, ಕಡೂರ ಕ್ಷೇತ್ರಗಳು ಸೇರಿವೆ. ಒಟ್ಟಿನಲ್ಲಿ ಈ ಬಾರಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುನ್ನ ಕ್ಷೇತ್ರಗಳ ಬದಲಾವಣೆ ಹಾಗೂ ನೂತನ ಕ್ಷೇತ್ರಗಳಸೇರ್ಪಡೆ ಕಾರ್ಯ ನಡೆಸಿದ್ದರಿಂದ ರಾಜಕೀಯ ನಾಯಕರಲ್ಲಿ ಕುತೂಹಲ ಮೂಡಿಸಿದೆ. ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಚುನಾವಣೆ ಆಯೋಗದ ಘೋಷಣೆಗಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ.

ರಟ್ಟಿಹಳ್ಳಿ ನೂತನ ತಾಲೂಕು ರಚನೆಯಾಗಿದ್ದರಿಂದ 11 ತಾಪಂ ಹಾಗೂ3 ಜಿಪಂ ಕ್ಷೇತ್ರಗಳು ದೊರಕಿದ್ದು, ಚುನಾವಣೆಆಯೋಗ ಅಧಿಕೃತವಾಗಿ ಅ ಧಿಸೂಚನೆ ಹೊರಡಿಸಿದೆ. – ಕೆ.ಗುರುಬಸವರಾಜ, ತಹಶೀಲ್ದಾರ್‌ ರಟ್ಟಿಹಳ್ಳಿ

ತಾಲೂಕಿನಲ್ಲಿ 9 ತಾಪಂ ಕ್ಷೇತ್ರಗಳು, ಹಾಗೂ 3 ಜಿಪಂ ಕ್ಷೇತ್ರಗಳಾಗಿ ವಿಂಗಡಣೆಯಾಗಿದ್ದು, ಈ ಬಗ್ಗೆ ಚುನಾವಣೆ ಆಯೋಗ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. – ಕೆ.ಎ.ಉಮಾ, ತಹಶೀಲ್ದಾರ್‌, ಹಿರೇಕೆರೂರು

 

-ಸಿದ್ಧಲಿಂಗಯ್ಯ ಗೌಡರ್‌

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.