ಬ್ರಹ್ಮಾನಂದ ರಥೋತ್ಸವಕ್ಕೆ ಕನ್ನಡ ಬಾವುಟ ಮೆರುಗು
ಭೈರನಹಟ್ಟಿ ಗ್ರಾಮದ ಮನೆ ಮನದಲ್ಲೂ ಮಾತೃ ಭಾಷೆ ಪರಿಕಲ್ಪನೆ-ಶಾಂತಲಿಂಗ ಸ್ವಾಮೀಜಿ ಪರಿಶ್ರಮ
Team Udayavani, Jun 14, 2022, 5:09 PM IST
ನರಗುಂದ: ಜಾತ್ರೆಗಳು ಕೇವಲ ಧಾರ್ಮಿಕ ವೈಭವೀಕರಣಕ್ಕೆ ಸೀಮಿತವಾಗದೇ ನಾಡಿನ ನೆಲ, ಜಲ, ಸಂಸ್ಕೃತಿ ಪ್ರತಿಬಿಂಬಿಸಬೇಕು. ಇದಕ್ಕೆ ಪೂರಕವಾಗಿ ಕನ್ನಡಿಗರಲ್ಲಿ ಮಾತೃಭಾಷೆ ಕನ್ನಡತನ ಜಾಗೃತಗೊಳಿಸಿ, ಭಾಷಾ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ ತಾಲೂಕಿನ ಭೈರನಹಟ್ಟಿ ಗ್ರಾಮದ ಜಾತ್ರಾ ಮಹೋತ್ಸವದಲ್ಲೂ ಕನ್ನಡತನ ಜಾಗೃತಗೊಂಡಿದೆ. ಇಲ್ಲಿನ ಬ್ರಹ್ಮಾನಂದರ ರಥೋತ್ಸವದಲ್ಲಿ ಕನ್ನಡ ಬಾವುಟದ ಹಾರಾಟ ದಶಕಗಳ ಇತಿಹಾಸ ಕಂಡಿದೆ.
ಪ್ರತಿವರ್ಷ ಭೈರನಹಟ್ಟಿ ಜಾಗೃತ ಕೇಂದ್ರ ಬ್ರಹ್ಮಾನಂದ ದೇವಸ್ಥಾನದ ಕತೃì ಲಿಂ.ಬ್ರಹ್ಮಾನಂದ ಶಿವಯೋಗಿಗಳ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಸೋಮವಾರ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮದ ಮಧ್ಯೆ ಜರುಗಿದ ಭವ್ಯ ರಥೋತ್ಸವದಲ್ಲಿ ಕನ್ನಡ ಬಾವುಟ ಹಾರಾಡಿದ್ದು ಗಮನ ಸೆಳೆಯಿತು.
ದಶಕಗಳ ಮೆರುಗು: ನಿರಂತರ ಕನ್ನಡ ಸೇವೆಯೊಂದಿಗೆ 2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ “ನಡೆ ಕನ್ನಡ-ನುಡಿ ಕನ್ನಡ’ ಎಂಬ ವೇದ ವಾಕ್ಯದೊಂದಿಗೆ »ಭೈರನಹಟ್ಟಿಯಿಂದ ನರಗುಂದವರೆಗೆ 13 ಕಿಮೀ ಅಂತರದಲ್ಲಿ ಮಠಾಧೀಶರು, ಕನ್ನಡಾ ಭಿಮಾನಿಗಳ ಬೃಹತ್ ಪಾದಯಾತ್ರೆ ನಡೆಸುವ ಮೂಲಕ ಗಮನ ಸೆಳೆದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳ ಕನ್ನಡ ಸೇವೆ ಮಾದರಿಯಾಗಿದೆ.
ಕನ್ನಡ ಭಾಷೆಗೆ ಧಕ್ಕೆ ಬಂದಾಗ ನಿರಂತರ ಹೋರಾಟ, ಪ್ರತಿಭಟನೆ, ಕನ್ನಡ ಜಾಗƒತಿ ಅಭಿಯಾನ ನಡೆಸುವಲ್ಲಿ ಮುಂದಾದ ಶ್ರೀಮಠದ ಕನ್ನಡ ಸೇವೆ ಈ ಗ್ರಾಮದ ಬ್ರಹ್ಮಾನಂದ ದೇವಸ್ಥಾನ ರಥೋತ್ಸವದಲ್ಲೂ ಜಾಗೃತವಾಗಿದೆ. ರಥೋತ್ಸವದಲ್ಲಿ ಕನ್ನಡ ಬಾವುಟ ಹಾರಿಸುವ ಮೂಲಕ ಭಕ್ತ ಸಮೂಹದಲ್ಲಿ ಕನ್ನಡದ ಹೆಮ್ಮೆ ಬಡಿದೆಬ್ಬಿಸುವಲ್ಲಿ ರಥೋತ್ಸವ ಪ್ರಮುಖ ಪಾತ್ರ ವಹಿಸುತ್ತಿದೆ.
ಸೋಮವಾರ ಜರುಗಿದ ರಥೋತ್ಸವದಲ್ಲಿ ರಥದ ಕಳಶದ ಸುತ್ತಲೂ ಕನ್ನಡ ಬಾವುಟ ಹಾರಿಸಲಾಗಿತ್ತು. ಭೈರನಹಟ್ಟಿ ಹಾಗೂ ಸುತ್ತಲಿನ ಮದಗುಣಕಿ, ಬಂಡೆಮ್ಮ ನಗರ, ಉಡಚಮ್ಮ ನಗರ, ಗೋವನಕೊಪ್ಪ, ಕೊಣ್ಣೂರು ಮುಂತಾದ ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು
Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ