ಮಳೆಗೆ ಕೊಚ್ಚಿಹೋಗಿದ್ದ ಬೈಕ್ ಸವಾರರು: ನಾಲ್ಕು ಗಂಟೆ ಮರದ ಟೊಂಗೆಯಲ್ಲಿ ಕಳೆದರು
Team Udayavani, Oct 21, 2019, 1:21 PM IST
ಹಾವೇರಿ: ಜಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ತಾಲೂಕಿನ ಅಗಡಿ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದ ನೀರು ರಸ್ತೆ ಮೇಲೆ ಹರಿಯುತ್ತಿರುವ ಕಾರಣ ದಾರಿ ಕಾಣದೆ ಕೊಚ್ಚಿಹೋಗಿದ್ದ ಮೂವರು ಬೈಕ್ ಸವಾರರನ್ನು ರಕ್ಷಿಸಲಾಗಿದೆ.
ಆದರೆ ಕೊಚ್ಚಿ ಹೋಗಿದ್ದ ಈ ಸವಾರರು ಅಲ್ಲೆ ಇದ್ದ ಗಿಡದ ಟೊಂಗೆಯನ್ನು ಹಿಡಿದು ಕುಳಿತು ರಕ್ಷಣೆ ಪಡೆದಿದ್ದರು.
ಹಾವೇರಿ ತಾಲ್ಲೂಕಿನ ಬೊಮ್ಮನಕಟ್ಟಿ ಗ್ರಾಮದ ಸಂಗಯ್ಯ ಬಸಯ್ಯ ಹಿರೇಮಠ, ನೇತ್ರಾವತಿ ಹಿರೇಮಠ, ಸೀತಾಬಾಯಿ ನಾಯಕ ಕೊಚ್ಚಿಹೊಗಿದ್ದ ಸವಾರರು
ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್ಆರ್ ಟಿ ಸಿ ಬಸ್ಸು ಚಾಲಕ ಪ್ರಯಾಣಿಕರ ಸಹಾಯದಿಂದ ರಕ್ಷಣೆಗೆ ಸಹಾಯ ಮಾಡಿದರು. ಕೊಚ್ಚಿ ಹೋದ ನಾಲ್ಕು ಗಂಟೆಗಳ ನಂತರ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, ಜನರ ಸಹಾಯದಿಂದ ರಕ್ಷಣೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ