ಜನರಿಗೆ ಉಚಿತ ಆಹಾರ ಕಿಟ್
Team Udayavani, May 12, 2020, 5:45 AM IST
ಹಿರೇಕೆರೂರು: ಕೋವಿಡ್ ಲಾಕ್ಡೌನ್ ಕಾರಣ ಸಂಕಷ್ಟದಲ್ಲಿರುವ ತಾಲೂಕಿನ ಎರಡು ಸಾವಿರ ಜನರಿಗೆ ಉಚಿತ ಆಹಾರ ಕಿಟ್ ವಿತರಿಸಲಾಗುವುದು ಎಂದು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿ, ಹಿರೇಕೆರೂರ ಮತ್ತು ರಟ್ಟಿಹಳ್ಳಿ ತಾಲೂಕಿಗೆ ಐದು ಸಾವಿರ ಆಹಾರ ಕಿಟ್ಗಳು ಬಂದಿವೆ. ಹಿರೇಕೆರೂರ ತಾಲೂಕಿಗೆ ಎರಡು ಸಾವಿರ ಕಿಟ್ಗಳ ಅವಶ್ಯಕತೆಯಿದ್ದು, 1,300 ಕಿಟ್ಗಳನ್ನು ಮೊದಲನೆ ಹಂತದಲ್ಲಿ ವಿತರಣೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತರಕಾರಿ ಮತ್ತು ರೇಷ್ಮೆ ಬೆಳೆಗಾರರಿಗೆ ಶೀಘ್ರವೇ ಸರ್ಕಾರದಿಂದ ಹೊಸ ಪ್ಯಾಕೇಜ್ ಘೋಷಣೆ ಮಾಡುವ ಭರವಸೆಯನ್ನು ಸಹ ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ತಹಶೀಲ್ದಾರ್ ಭಾಗವಾನ್ ಇತರರು ಇದ್ದರು.