ಕುಸಿಯುತ್ತಿದೆ ನವಾಬರ ಕೋಟೆ ದ್ವಾರ
Team Udayavani, Aug 11, 2019, 12:48 PM IST
ಸವಣೂರು: ನಿರಂತರ ಸುರಿಯುತ್ತಿರುವ ಮಳೆಗೆ ಕುಸಿದಿರುವ ಪಟ್ಟಣದ ಸಿಂಪಿಗಲ್ಲಿಯ ನವಾಬರ ಕಾಲದ ಕೋಟೆ ದ್ವಾರದ ಗೋಡೆ.
ಸವಣೂರು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನವಾಬರು ನಿರ್ಮಿಸಿದ್ದ ಸಿಂಪಿಗಲ್ಲಿಯ ದಂಡಿನದುರ್ಗಾದೇವಿ ದೇವಸ್ಥಾನದ ಹತ್ತಿರದ, ಮೋತಿ ತಲಾಬ್ ದಂಡೆಯ ಮೇಲಿನ ಹಾಗೂ ಬಂಕಾಪೂರ ರಸ್ತೆಯಲ್ಲಿರುವ ಕೋಟೆಯ ದ್ವಾರಗಳ ಕಲ್ಲುಗಳು ಕುಸಿಯುತ್ತಿವೆ.
ದ್ವಾರಗಳ ಮೂಲಕ ಸಾರ್ವಜನಿಕರ ಓಡಾಟವಿರುವುದರಿಂದ ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಮಾರಕ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ದ್ವಾರಗಳ ಸುತ್ತ ವಾಸವಿರುವ ಕುಟುಂಬಗಳ ರಕ್ಷಣೆಗಾಗಿ ಶೀಘ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯವಾಗಿದೆ.
ಪಟ್ಟಣದ ಅಂಬೇಡ್ಕರ ನಗರ, ಗೌಡ್ರಓಣಿ, ಕೋರಿಪೇಟಿ, ವಡ್ಡರ ಓಣಿ, ದಂಡಿನಪೇಟಿ, ಖಾದರಬಾಗ, ಕಸಬಾ ಪೇಟೆ, ಶುಕ್ರವಾರ ಪೇಟೆ, ಸಮಗಾರ ಓಣಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ 120ಕ್ಕೂ ಮನೆಗಳು ಬಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಸ್ಥಳಗಳಿಗೆ ಕಂದಾಯ ಇಲಾಖೆ ಅಧಿಕಾರಿ ರವಿ ಮಾಚಕ್ಕನವರ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ
ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!