ವೇತನ ವಿಳಂಬವಾದರೆ ಶಾಲೆ ಬಂದ್ ಮಾಡುವ ಎಚ್ಚರಿಕೆ
Team Udayavani, Aug 18, 2019, 1:32 PM IST
ಹಿರೇಕೆರೂರ: ವೇತನ ಬಟವಡೆಗೆ ಆಗ್ರಹಿಸಿ ತಾಲೂಕು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಹಿರೇಕೆರೂರ: ಜೂನ್ ವೇತನ ಬಟವಡೆಯಾಗಿಲ್ಲ, ಇದರಿಂದ ಶಿಕ್ಷಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಾಲೂಕು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಡಿ ದರ್ಜೆ ನೌಕರರು ಜೂನ್ನಿಂದ ಈ ವರೆಗೆ ವೇತನ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಆ. 20ರೊಳಗೆ ವೇತನ ಪಾವತಿಸಬೇಕು, ಇಲ್ಲವಾದಲ್ಲಿ ಆ. 21ರಿಂದ ತಾಲೂಕಿನ ಎಲ್ಲ ಶಿಕ್ಷಕರು ಶಾಲೆಗಳನ್ನು ಬಂದ್ ಮಾಡಿ ತಮ್ಮ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ತಿಳಿಸಿದರು.
ಸಂಘದ ಕಾರ್ಯದರ್ಶಿ ಮಧು ನಾಯ್ಕ, ಎಂ.ಎಂ.ಕೆರೂರ, ರವಿ ಎಚ್., ವೈ.ಪಿ.ಜಿಗಳೂರ, ಜಗದೀಶ ಗೋಣಗೇರಿ, ಹಿದಾಯತ್ ಉಲ್ಲಾ ಖಾನ್, ಬಿ.ವಿ.ದಳವಾಯಿ, ರಾಜಕುಮಾರ ತಳವಾರ, ಎಂ.ಎ. ಹುಬ್ಬಳ್ಳಿ, ವಿ.ಎಚ್.ಮುದಿಗೌಡ್ರ, ಡಿ.ಬಿ. ಮಳಿಯಪ್ಪನವರ, ಸಿ.ವಿ.ಅಡಿವೇರ, ಎಸ್.ಜಿ.ಬೆಳಕೇರಪ್ಪ, ಹರೀಶ, ಎಸ್.ಎಂ.ಕಟ್ಟಿ, ಎನ್.ಆರ್.ಮಧ್ಯಾಹ್ನದವರ, ಎಸ್.ವಿ.ಪಾಟೀಲ, ಕೆ.ಆರ್.ನಾಯ್ಕರ್, ಎಂ.ಎಚ್.ಚಕ್ರಸಾಲಿ, ಎನ್.ವಿ.ಪುರದ, ಪಿ.ಎಸ್. ದೊಡ್ಡಗೌಡ್ರ, ಎಂ.ಬಿ.ಲಕ್ಕೊಂಡರ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು