ನೀರು ಹರಿಯುವ ಕಾಲುವೆ ಮುಚ್ಚಿದ ಗುತ್ತಿಗೆದಾರ!

ಲೋಡ್‌ಗಟ್ಟಲೆ ಡಾಂಬರು ತ್ಯಾಜ್ಯದಿಂದ ತೊಂದರೆ • ವಿಲೇವಾರಿ ಮಾಡಲು ಸ್ಥಳೀಯರ ಆಗ್ರಹ

Team Udayavani, Jul 25, 2019, 4:02 PM IST

25-JUly-36

ಹುಳಿಯಾರು ಕೆರೆಗೆ ತಿಮ್ಲಾಪುರ ಕೆರೆಯಿಂದ ನೀರು ಹರಿಸಲು ನಿರ್ಮಿಸಿರುವ ಕಾಲುವೆಗೆ ಹಳೆಯ ಡಾಂಬರ್‌ ರಸ್ತೆ ತ್ಯಾಜ್ಯ ಸುರಿದಿರುವುದು.

ಎಚ್.ಬಿ.ಕಿರಣ್‌ ಕುಮಾರ್‌
ಹುಳಿಯಾರು:
ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 243ರ ಕಾಮಗಾರಿ 1 ವರ್ಷದಿಂದ ನಡೆಯುತ್ತಿದೆ. ನೀಲನಕ್ಷೆ ತಿರುಚಿರುವುದು, ಚರಂಡಿ ಸ್ಲ್ಯಾಬ್‌ ಕಳಪೆ, ಮಂದಗತಿ ಕಾಮಗಾರಿ, ರಸ್ತೆಗೆ ನೀರು ಹಾಕದಿರುವುದು ಹೀಗೇ ಹಲವು ದೂರುಗಳು ಕಾಮಗಾರಿ ಆರಂಭವಾದ ದಿನದಿಂದ ಗುತ್ತಿಗೆದಾರರ ಮೇಲೆ ಒಂದಿಲ್ಲೊಂದು ಕೇಳಿಬರುತ್ತಲೇ ಇತ್ತು. ಈಗ ಹೊಸದಾಗಿ ಕೆರೆಯ ಕಾಲುವೆ ಮುಚ್ಚಿರುವ ಆರೋಪ ಕೇಳಿಬಂದಿದೆ.

ಕಾಮಗಾರಿ ಮಾಡುವಾಗ ಹಳೆಯ ಡಾಂಬರ್‌ ರಸ್ತೆ ಕಿತ್ತು ಅದನ್ನು ಹುಳಿಯಾರು ಕೆರೆಗೆ ನೀರು ಹರಿಯುವ ಕಾಲುವೆಗೆ ಸುರಿದಿದ್ದು, ಇದರಿಂದ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತಮ ಮಳೆಯಾದರೆ ಹುಳಿಯಾರು ಕೆರೆಗೆ ನೀರು ಬಾರದಂತೆ ಮಾಡಿದ್ದಾರೆ. ಡಾಂಬಾರ್‌ ತ್ಯಾಜ್ಯ ನಾಲೆಯಲ್ಲಿ ಉಳಿದರೆ ನೀರು ಕಲುಷಿತಗೊಂಡು ಪ್ರಾಣಿ, ಪಕ್ಷಿಗಳ ಜೀವಕ್ಕೆ ಕಂಟಕವಾಗುವ ಆತಂಕ ಕಾಡುತ್ತಿದೆ.

ಕೆರೆಗೆ ನೀರು ಹರಿಸುವ ಕಾಲುವೆ: ಯಾವುದೇ ಜಲಮೂಲ ಇಲ್ಲದ ಹುಳಿಯಾರು ಕೆರೆಗೆ ನೀರು ಹರಿಸುವ ಸಲುವಾಗಿ ಸ್ಥಳೀಯರ ಬೇಡಿಕೆ ಮೇರೆಗೆ ಮೂರು ದಶಕಗಳ ಹಿಂದೆ ತಿಮ್ಲಾಪುರ ಕೆರೆಯಿಂದ ಹುಳಿಯಾರು ಕೆರೆಗೆ ನೀರು ಹರಿಸಲು ಕಾಲುವೆ ನಿರ್ಮಿಸಲಾಗಿತ್ತು.

ಕಾಲುವೆ ನಿರ್ಮಿಸಿದ ಅನೇಕ ವರ್ಷಗಳು ತಿಮ್ಲಾಪುರ ಕೆರೆ ತುಂಬದ ಕಾರಣ ಹುಳಿಯಾರು ಕೆರೆಗೆ ನೀರು ಬರಲೇ ಇಲ್ಲ. ಹಾಗಾಗಿ ಇದು ಒಣ ಕಾಲುವೆ ಎಂದು ಕುಖ್ಯಾತಿಯಾಯಿತು. ನಂತರದ ದಿನಗಳಲ್ಲಿ ತಿಮ್ಲಾ ಪುರ ಕೆರೆ ತುಂಬಿದಾಗ ನೀರು ಹರಿದು ಹುಳಿಯಾರು ಕೆರೆಯಲ್ಲಿ ನೀರು ನಿಲ್ಲುವ ಮೂಲಕ ಕಾಲುವೆ ನಿರ್ಮಾಣ ಸಾರ್ಥಕ ಎನ್ನಿಸಿತ್ತು.

ಹೇಮೆ ನೀರು ಹರಿಯುವ ಕಾಲುವೆ: ಚಿಕ್ಕನಾಯಕನ ಹಳ್ಳಿ ತಾಲೂಕಿಗೆ ಮಂಜೂರಾಗಿರುವ ಹೇಮೆ ನೀರು ಹರಿಸುವ ಯೋಜನೆಯಲ್ಲಿ ತಿಮ್ಲಾಪುರ ಕೆರೆಯೂ ಸೇರಿದೆ. ಅಲ್ಲದೆ ಪಾವಗಡ ತಾಲೂಕಿಗೆ ಹೋಗುವ ಭದ್ರ ನೀರೂ ತಿಮ್ಲಾಪುರ ಕೆರೆ ಮೂಲಕ ಬೋರನಕಣಿವೆ ಜಲಾಶಯಕ್ಕೆ ಹೋಗುತ್ತದೆ. ಹಾಗಾಗಿ ಹೇಮೆ ಮತ್ತು ಭದ್ರ ಯೋಜನೆಯಿಂದ ತಿಮ್ಲಾಪುರ ಕೆರೆ ತುಂಬು ವುದು ಖಚಿತ ಎನ್ನಲಾಗಿದೆ. ತಿಮ್ಲಾಪುರ ಕೆರೆ ತುಂಬಿದರೆ ಹುಳಿಯಾರು ಕೆರೆಗೆ ನೀರು ಹರಿಯುತ್ತದೆ.

ಸ್ಥಳೀಯರ ಆಕ್ರೋಶ: ಹೇಮಾವತಿ ಕಾಮಗಾರಿ ಸಾಸಲು ಗ್ರಾಮದ ಬಳಿ ಶರವೇಗದಲ್ಲಿ ನಡೆಯುತ್ತಿದ್ದು, ಈ ಕಾಮಗಾರಿ ಮುಗಿದ ತಕ್ಷಣ ಹುಳಿ ಯಾರು ಒಣ ಕಾಲುವೆ ಒತ್ತುವರಿ ತೆರವು ಮಾಡಿ ಕಾಲುವೆ ಸ್ವಚ್ಛ ಮಾಡಿಸುವ ಚಿಂತನೆ ಸ್ಥಳೀಯರಲ್ಲಿತ್ತು. ಅಷ್ಟರಲ್ಲಾಗಲೇ ಗುತ್ತಿಗೆದಾರರು ಕಾಲುವೆ ಮುಚ್ಚಿ ದ್ದಾರೆ. ಕಾಮಗಾರಿ ಆರಂಭದಲ್ಲಿ ಒಣಕಾಲುವೆಗೆ ಗುತ್ತಿಗೆದರರು ಸೇತುವೆ ನಿರ್ಮಿಸಿದ್ದಾರೆ. ಆದರೂ ಸೇತುವೆ ಪಕ್ಕ ತ್ಯಾಜ್ಯ ಸುರಿದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

 

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.