ಇಡುವಾಣಿ ಕಾಡಿನಲ್ಲಿ ವೈದ್ಯಕೀಯ ಪ್ಲಾಸ್ಟಿಕ್‌ ತ್ಯಾಜ್ಯ ಪತ್ತೆ

ಅನಧಿಕೃತ ಮೆಡಿಕಲ್‌ ಏಜೆನ್ಸಿಗಳಿಂದ ಅಪಾಯ: ಸ್ಥಳೀಯರ ಆರೋಪ

Team Udayavani, Jul 4, 2019, 11:57 AM IST

04-July-20

ಸಾಗರ: ಕಾಡಿನ ಕಣಿವೆ ಪ್ರದೇಶದಲ್ಲಿ ಪತ್ತೆಯಾದ ಸಿರೆಂಜ್‌, ಡ್ರಿಪ್‌ ಬಾಟಲ್, ಔಷಧ ಬಾಟಲ್ ತ್ಯಾಜ್ಯ.

ಸಾಗರ: ತಾಲೂಕಿನ ತಾಳಗುಪ್ಪ ಕಾರ್ಗಲ್ ಮಾರ್ಗದ ನಡುವಿನ ಬಚ್ಚಗಾರು ಹಾಗೂ ಇಡುವಾಣಿ ನಡುವಿನ ಕಾಡಿನ ಕಣಿವೆ ಪ್ರದೇಶದಲ್ಲಿ ಆಸ್ಪತ್ರೆಯಲ್ಲಿ ಬಳಸುವ ವೈದ್ಯಕೀಯ ಪ್ಲಾಸ್ಟಿಕ್‌ ತ್ಯಾಜ್ಯಗಳ ಮೂಟೆಗಳನ್ನು ಬಿಸಾಕಿರುವುದು ಕಂಡುಬಂದಿದ್ದು, ಇವುಗಳ ವಿಲೇವಾರಿಗೆ ಬಿಗಿಯಾದ ಕ್ರಮಗಳ ಹೊರತಾಗಿಯೂ ಇಂತಹ ಕೃತ್ಯ ನಡೆದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ತಲವಾಟ ಗ್ರಾಪಂ ವ್ಯಾಪ್ತಿಯ ನಾಗರಿಕರು ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಆಸ್ಪತ್ರೆಯಲ್ಲಿ ಬಳಸುವ ಸಿರಿಂಜ್‌, ಡ್ರಿಪ್‌ ಬಾಟಲ್, ಔಷಧ ಬಾಟಲ್ಗಳು ಈ ಪ್ರದೇಶದಲ್ಲಿ ಕಂಡುಬಂದಿದೆ. ದೊಡ್ಡ ಪ್ರಮಾಣದಲ್ಲಿಯೇ ವೈದ್ಯಕೀಯ ತ್ಯಾಜ್ಯ ಇರುವ ಹಿನ್ನೆಲೆಯಲ್ಲಿ ಇದು ದೊಡ್ಡ ಆಸ್ಪತ್ರೆ ನಡೆಸುವವರ ಕೃತ್ಯ ಎಂದು ಭಾವಿಸಲಾಗಿದೆ. ಈ ಭಾಗದಲ್ಲಿ ಜನವಸತಿ ಇಲ್ಲದಿರುವುದರಿಂದ ತ್ಯಾಜ್ಯ ಎಸೆಯುವವರನ್ನು ಗುರುತಿಸುವುದು ಕಷ್ಟವಾಗಿದೆ. ಆದರೆ ಆಸ್ಪತ್ರೆ ತ್ಯಾಜ್ಯ ವಿಲೇವಾರಿಗೆ ಅಧಿಕೃತ ಏಜೆನ್ಸಿಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿಯೂ ಅಂತಹ ಅಧಿಕೃತ ಏಜೆನ್ಸಿ ಇದೆ. ಈ ಸಂಸ್ಥೆಯ ಮೇಲೆ ತನಿಖೆ ನಡೆಸಿದರೆ ವಿಷಯ ಬಯಲಿಗೆ ಬರಬಹುದು ಎಂದು ಸ್ಥಳೀಯರಾದ ಸೀತಾರಾಂ ಬಚ್ಚಗಾರು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಎಲ್ಲ ಆಸ್ಪತ್ರೆ, ಕ್ಲಿನಿಕ್‌, ಮೆಡಿಕಲ್ ಲ್ಯಾಬ್‌ಗಳ ತ್ಯಾಜ್ಯವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಶಿವಮೊಗ್ಗದ ಏಜೆನ್ಸಿಯೊಂದು ನಿರ್ವಹಿಸುತ್ತಿದೆ. ಇವರೆಲ್ಲರ ಪರವಾನಗಿ ನವೀಕರಣಕ್ಕೆ ಸರ್ಕಾರ ತ್ಯಾಜ್ಯ ವಿಲೇವಾರಿಯ ಒಪ್ಪಂದವನ್ನು ಕಡ್ಡಾಯ ಮಾಡಿರುವುದರಿಂದ ಅವರು ಕಾನೂನುಬಾಹಿರ ತ್ಯಾಜ್ಯ ವಿಲೇವಾರಿಗೆ ಮುಂದಾಗುವುದಿಲ್ಲ. ಶಿವಮೊಗ್ಗದ ಏಜೆನ್ಸಿ ತಾಳಗುಪ್ಪ, ಕಾರ್ಗಲ್, ಜೋಗಕ್ಕೂ ತೆರಳಿ ತ್ಯಾಜ್ಯ ವಸ್ತುಗಳನ್ನು ಒಯ್ಯುತ್ತದೆ. ಈ ರೀತಿಯ ವೈದ್ಯಕೀಯ ತ್ಯಾಜ್ಯ ಸೃಷ್ಟಿಯಾಗಲು ಖಾಸಗಿ ವೃತ್ತಿ ನಡೆಸುವ ಸರ್ಕಾರಿ ಆಸ್ಪತ್ರೆಗಳ ವೈದ್ಯರೇ ಕಾರಣ ಎಂಬ ಅನುಮಾನ ಪ್ರಬಲವಾಗಿದೆ. ಖಾಸಗಿಯಾಗಿ ಉದ್ಯೋಗ ಮಾಡುವುದರಿಂದ ಇವರಿಗೆ ಏಜೆನ್ಸಿ ಜೊತೆ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲು ಬರುವುದಿಲ್ಲ. ತಮ್ಮ ಮನೆಯಲ್ಲಿಯೇ ಉದ್ಯೋಗ ನಡೆಸುವ ಈ ಜನರು ರೋಗಿಗಳಿಗೆ ಡೇ ಕೇರ್‌ ತರಹದ ಸೇವೆ ನೀಡುತ್ತಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಹೆಸರು ಬಹಿರಂಗ ಬಯಸದ ವೈದ್ಯಕೀಯ ವಸ್ತುಗಳ ಮಾರಾಟ ಏಜೆನ್ಸಿಯನ್ನು ನಿರ್ವಹಿಸುತ್ತಿರುವ ಪ್ರತಿನಿಧಿಯೋರ್ವರು ಪ್ರತಿಪಾದಿಸಿದರು. ತ್ಯಾಜ್ಯ ಎಸೆಯುವವರು ರಾತ್ರಿಯ ಹೊತ್ತು ಈ ಕೆಲಸ ಮಾಡುವುದರಿಂದ ಪತ್ತೆ ಮಾಡುವುದು ಕಷ್ಟ. ಇವುಗಳು ತುಂಬಾ ಅಪಾಯಕಾರಿಯಾಗಿರುವುದರಿಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ತಲವಾಟ ಗ್ರಾಪಂ ಸದಸ್ಯ ಶ್ರೀಕಾಂತ್‌ ಹೊತ್ಗುಂಡಿ ತಿಳಿಸಿದರು.

ಟೆಲಿಪೋನ್‌ ಕೇಬಲ್ ಪತ್ತೆ: ಇದೇ ಕಣಿವೆ ಪ್ರದೇಶದಲ್ಲಿ ಬಳಕೆಗೆ ಅನರ್ಹವಾದ ಟೆಲಿಫೋನ್‌ ಒಎಫ್‌ಸಿ ಕೇಬಲ್ಗಳನ್ನು ಎಸೆದಿರುವುದು ಕೂಡ ಕಂಡುಬಂದಿದೆ. ನೂರಾರು ವರ್ಷಕ್ಕೂ ಕರಗದ ಟೆಲಿಪೋನ್‌ ಕೇಬಲ್ಗಳನ್ನು ಎಸೆದು ಹೋಗಲಾಗಿದೆ. ಇದು ರಾತ್ರಿ ಸಂಚಾರ ಮಾಡುವ ಪ್ರಾಣಿಗಳ ಕಾಲಿಗೆ ಸುತ್ತಿಕೊಂಡರೆ ಅವುಗಳ ಅಸಹಾಯಕತನ ಯಾರಿಗೂ ಹೇಳಲಾಗದು ಎಂದು ಕಡವಿನಮನೆ ರಾಘವೇಂದ್ರ ಪ್ರತಿಕ್ರಿಯಿಸಿದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.