ಅಂಗನವಾಡಿ ಅಕ್ರಮದ್ದೇ ಚರ್ಚೆ
Team Udayavani, Jun 16, 2019, 9:45 AM IST
ಕಲಬುರಗಿ: ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ಸುವರ್ಣ ಹಣಮಂತ ಮಲಾಜಿ ಅಧ್ಯಕ್ಷತೆಯಲ್ಲಿ ಶನಿವಾರ ಜಿ.ಪಂ ಸಾಮಾನ್ಯ ಸಭೆ ನಡೆಯಿತು. ಸಿಇಒ ಡಾ| ರಾಜಾ, ಶೋಭಾ ಸಿದ್ಧು ಸಿರಸಗಿ, ಶಿವಾನಂದ ಪಾಟೀಲ ಇದ್ದರು.
ಕಲಬುರಗಿ: ಜಿಲ್ಲಾ ಪಂಚಾಯಿತಿ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅವ್ಯವಹಾರ ನಡೆಯದಂತೆ ನಿಗಾ ವಹಿಸಿದರೆ ಪ್ರತ್ಯೇಕ ಸಮಿತಿ ರಚಿಸುವ ಪ್ರಮೇಯವೇ ಬರುವುದಿಲ್ಲ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಪಿ. ರಾಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ನೂತನ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ಸುವರ್ಣ ಹಣಮಂತ ಮಲಾಜಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಜಿಪಂ 15ನೇ ಸಾಮಾನ್ಯ ಸಭೆಯಲ್ಲಿ ಅಂಗನವಾಡಿಗಳಲ್ಲಿ ಮೊಟ್ಟೆ ವಿತರಣೆಯಲ್ಲಿ ಅವ್ಯವಹಾರ ಮತ್ತು ಮಕ್ಕಳು ಹಾಗೂ ಗರ್ಭೀಣಿಯರಿಗೆ ವಿತರಿಸುವ ಕಳಪೆ ಆಹಾರ ಸಾಮಗ್ರಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಮೊಟ್ಟೆ ವಿತರಿಸುವಲ್ಲಿ ಹಗರಣ ನಡೆಯುತ್ತಿದ್ದು, ಸರಬರಾಜು ಸರಿಯಾಗಿ ಆಗುತ್ತಿಲ್ಲ. ಮೊಟ್ಟೆ ಖರೀದಿಸಿದ ಹಣ ಜಮಾಗೊಳಿಸುವಲ್ಲಿ ಅವ್ಯವಹಾರ ನಡೆಯುತ್ತಿದೆ. ಇದನ್ನು ತಡೆಯಲು ಆಯಾ ತಾಲೂಕಾವಾರು ಟೆಂಡರ್ ಕರೆಯಬೇಕು. ಅಲ್ಲದೇ, ಅಧಿಕಾರಿಗಳು ಮತ್ತು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಬೇಕೆಂದು ಗೌತಮ ಪಾಟೀಲ, ರೇವಣ್ಣ ಸಿದ್ದಪ್ಪ ಸಂಕಾಲೆ ಸೇರಿದಂತೆ ಬಹುತೇಕ ಸದಸ್ಯರು ಒತ್ತಾಯಿಸಿದರು.
ಸಿಇಒ ಡಾ| ರಾಜಾ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಜಿಪಂ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಲೋಪ-ದೋಷ ಕಂಡು ಬಂದಲ್ಲಿ ಗಮನಕ್ಕೆ ತಂದು ವರದಿ ಸಲ್ಲಿಸಿ. ಇಂತಹ ಅಧಿಕಾರ ಎಲ್ಲ ಸದಸ್ಯರಿಗೂ ಇದೆ. ಇದರಿಂದ ಯಾವುದೇ ಸಮಿತಿ ರಚಿಸುವ ಅಗತ್ಯವೂ ಬರುವುದಿಲ್ಲ. ನೀವು ಕೊಟ್ಟ ವರದಿ ಆಧಾರದ ಮೇಲೆಯೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಿತಿ ರಚನೆ ಅಧಿಕಾರ ಜಿಪಂಗೆ ಇಲ್ಲ. ಇದನ್ನು ಸರ್ಕಾರ ಮಟ್ಟದಲ್ಲಿ ಕೈಗೊಳ್ಳಬೇಕಾಗುತ್ತದೆ. ಅಗತ್ಯ ಬಿದ್ದಲ್ಲಿ ಕಾನೂನು ಬದಲಾವಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಪೌಡರ್ ತನ್ನಿ…ಪೌಡರ್: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಬೆಲ್ಲ, ಬೇಳೆಕಾಳು ಮಿಶ್ರಿತ ಪೌಷ್ಟಿಕಾಂಶದ ಪೌಡರ್ ಸಹ ಕಳಪೆ ಗುಣಮಟ್ಟದಿಂದ ಕೂಡಿದೆ. ಇದನ್ನು ದನ-ಕರುಗಳು ತಿನ್ನುವುದಿಲ್ಲ. ಬೇಕಾದರೆ ಸಭೆಗೆ ಪೌಡರ್ ತರಿಸಿ ನೋಡಿ. ಅದರ ಗುಣಮಟ್ಟ ತಿಳಿಯಲು ಯಾವುದೇ ಲ್ಯಾಬ್ಗ ಹೋಗುವುದು ಬೇಡ ಎಂದು ಸದಸ್ಯರಾದ ಸಿದ್ದರಾಮ ಪ್ಯಾಟಿ ಮತ್ತು ಶರಣಗೌಡ ಆಗ್ರಹಿಸಿದರು.
ರಾಜ್ಯದ ಹಲವು ಜಿಲ್ಲೆಯಲ್ಲಿ ಬೇಳೆ ಕಾಳುಗಳನ್ನು ವಿತರಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲೂ ಪೌಡರ್ ಬದಲಿಗೆ ಬೇಳೆ ಕಾಳುಗಳನ್ನೇ ವಿತರಿಸಬೇಕೆಂದು ಪ್ರತಿಪಕ್ಷದ ನಾಯಕ ಶಿವಾನಂದ ಪಾಟೀಲ, ಸಂಜೀವನ್ ಯಾಕಾಪುರ ಇತರರು ಒತ್ತಾಯಿಸಿದರು. ಆಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಅವರು ಬೇರೆ ಜಿಲ್ಲೆಗಳಲ್ಲಿ ಬೇಳೆ ಕಾಳುಗಳನ್ನು ವಿತರಿಸಲಾಗುತ್ತಿದೆ ಎಂದರು.
ಇದಕ್ಕೆ ಸ್ಪಂದಿಸಿದ ಸಿಇಒ ಜಿಲ್ಲೆಯಲ್ಲೂ ಬೇಳೆ ಕಾಳು ಸರಬರಾಜು ಮಾಡುವ ವ್ಯವಸ್ಥೆ ಜಾರಿಗೆ ಕ್ರಮಕೈಗೊಳ್ಳಲಾಗುವುದು ಎಂದರು.ಬೋಗಸ್ ಬಿಲ್?: ರಸ್ತೆ ಮತ್ತಿತರ ಕಾಮಗಾರಿಗಅಳಲ್ಲಿ ಎಚ್ಕೆಆರ್ಡಿ ಹಾಗೂ ಇತರ ಅನುದಾನದಲ್ಲೂ ಬಿಲ್ ತೋರಿಸಲಾಗುತ್ತದೆ. ಅಧಿಕಾರಿಗಳು ಒಂದೇ ಕಾಮಗಾರಿಗೆ ಒಮ್ಮೆ ಎಚ್ಕೆಆರ್ಡಿ ಬಿಲ್, ಮತ್ತೂಮ್ಮೆ ಇನ್ನೊಂದರ ಬಿಲ್ ಹಾಕಿ ಬೋಗಲ್ ಬಿಲ್ ಸೃಷ್ಟಿಸುತ್ತಾರೆ ಎಂದು ಸದಸ್ಯರೊಬ್ಬರು ಆರೋಪಿಸಿದರು. ಆಗ ಸಿಇಒ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ