ಕಾರಹುಣ್ಣಿಮೆ ಮೇಲೆ ಬರಗಾಲ ಛಾಯೆ

ಒಣ ಕಣಕಿ ತಿಂದು ಬಡಕಲಾಗಿವೆ ದನಕರುಗಳು

Team Udayavani, Jun 16, 2019, 9:55 AM IST

16-June-2

ಮಾದನ ಹಿಪ್ಪರಗಿ: ರವಿವಾರ ಕಾರಹುಣ್ಣಿಮೆ ಹಬ್ಬ ಆಚರಿಸಲು ರೈತರು ದನಕರುಗಳಿಗೆ ಹಗ್ಗ, ಬಣ್ಣ , ಬಾಸಿಂಗ ಖರೀದಿಸಿದರು

ಪರಮೇಶ್ವರ ಭೂಸನೂರ
ಮಾದನ ಹಿಪ್ಪರಗಿ:
ರೈತ ಮಳೆ, ಬೆಳೆ ಚೆನ್ನಾಗಿದ್ರೇನೆ ಸಂತೋಷವಾಗಿರುತ್ತಾನೆ. ಆತನ ಜಾನುವಾರುಗಳು ಚೆನ್ನಾಗಿರುತ್ತವೆ. ವರ್ಷಕ್ಕೊಮ್ಮೆ ಮಾಡುವ ದನಗಳ ಹಬ್ಬ ಕಾರಹುಣ್ಣಿಮೆಯನ್ನು ಹೌಸಿಯಿಂದ (ಖುಷಿಯಿಂದ) ಆಚರಿಸುತ್ತಾನೆ. ಆದರೆ ಪ್ರಸಕ್ತ ವರ್ಷದ ಹಬ್ಬದ ಮೇಲೆ ಬರಗಾಲದ ಕಾರ್ಮೋಡ ಬಿದ್ದಂತಿದೆ.

ಈ ವರ್ಷ ಜೂನ್‌ ತಿಂಗಳ ಅರ್ಧ ಕಳೆದಿದೆ. ಪ್ರತಿವರ್ಷ ರೋಹಿಣಿ ಮಳೆಗೆ ಬಿತ್ತಣಿಕೆ ಆಗಿರುತ್ತಿತ್ತು. ಬೆಳೆಗಳು ನಾಟಿಗೆ ಹಾಯುತ್ತಿದ್ದವು. ರೋಹಿಣಿ ಮಳೆ ಬರಲಿಲ್ಲ. ಕೃತ್ತಿಕಾ ಆರಂಭವಾಗಿ ಮುಗಿಯುತ್ತ ಬಂದರೂ ಮಳೆ ಬರುವ ಲಕ್ಷಣ ಕಾಣುತ್ತಿಲ್ಲ. ಮೊದಲೇ ಈ ವರ್ಷ ಬರಗಾಲ ಬಿದ್ದಿದ್ದರಿಂದ ದನಕರುಗಳು ಹಸಿ ಮೇವು ಕಾಣದೆ ಒಣ ಕಣಕಿ ತಿಂದು ಬಡಕಲಾಗಿವೆ.

ಹೌಸಿಯಿಂದ ಆಚರಿಸಬೇಕಾದ ಕಾರಹುಣ್ಣಿಮೆಯನ್ನು ಕಾಟಾಚಾರಕ್ಕಾಗಿ ಆಚರಿಸುವಂತಾಗಿದೆ. ಹಗ್ಗ, ಮಗಡ, ಮೂಗುದಾರ, ಬಾಸಿಂಗವನ್ನು ಎತ್ತಿನ ಕೋಡುಗಳಿಗೆ ಬಣ್ಣ ಹಚ್ಚಲು ರೈತರು ಖರೀದಿಸುತ್ತಿದ್ದಾರೆ. ಗ್ರಾಮದಲ್ಲಿ ಒಂದು ದಿನ ಮುಂಚಿತವಾಗಿಯೇ ಅಂದರೆ ರವಿವಾರವೇ ಕಾರಹುಣ್ಣಿಮೆ ಆಚರಿಸಲು ರೈತರು ತಯಾರಾಗಿದ್ದಾರೆ. ಸೋಮವಾರ ಊರ ಗೌಡರ ಬಾಗಿಲಿಗೆ ರಾಹುಕಾಲ ಹತ್ತುತದೆಂದು ರವಿವಾರವೇ ಕಾರಹುಣ್ಣಿಮೆ ಆಚರಿಸುವಂತೆ ಡಂಗೂರ ಹೊಡೆಸಲಾಗಿತ್ತು.

ಹೊನ್ನುಗ್ಗಿ ದಿನವಾದ ಶನಿವಾರ ಬಸವಣ್ಣನ (ಹೋರಿ, ಎತ್ತುಗಳಿಗೆ) ಮೈತೊಳೆದು ಹೂಗಾರ ಮನೆಯಿಂದ ಬಾಸಿಂಗ ಕಟ್ಟುತ್ತಾರೆ. ರವಿವಾರ ದಿವಸ ಪೂಜೆ ಮಾಡಿ ಸಂಜೆ ಊರ ಹೊರಗೆ ಕಾಲಗಾಡಿ ಕಟ್ಟಿ ಓಡಿಸುತ್ತಾರೆ. ಎಲ್ಲರೂ ಜಿದ್ದಾ ಜಿದ್ದಿಗೆ ಬಿದ್ದು ಓಡಿಸುವವರೇ. ಆದರೆ ಈ ವರ್ಷ ಎತ್ತುಗಳಿಗೆ ಕಾಲಗಾಡಿ ಕಟ್ಟಿ ಓಡಿಸುವ ಧೈರ್ಯ ಯಾವ ರೈತರಿಗೂ ಸಾಲುತ್ತಿಲ್ಲ. ಹಸಿ ಮೇವು ತಿಂದರಷ್ಟೇ ಅವುಗಳ ಮೈಯಲ್ಲಿ ತಾಕತ್ತು ಇರುತ್ತದೆ. ತಾಕತ್ತು ಇಲ್ಲದ ಎತ್ತುಗಳನ್ನು ಓಡಿಸದೇ ಇರುವುದು ಒಳ್ಳೆಯದು ಎನ್ನುತ್ತಾರೆ ರೈತರು.

ಪ್ರತಿವರ್ಷ ಎತ್ತುಗಳಿಗೆ ಕಾಲಗಾಡಿ ಕಟ್ಟಿ ಓಡಿಸುತ್ತಿದ್ದೆವು. ಆದರೆ ಈ ವರ್ಷ ಮಳೆ ಬಾರದೆ ಜಾನುವಾರುಗಳಿಗೆ ಹಸಿ ಮೇವು ಇಲ್ಲದ ಕಾರಣ ಅವುಗಳಲ್ಲಿ ತಾಕತ್ತಿಲ್ಲ. ಆದ್ದರಿಂದ ನನ್ನ ಹಾಗೆ ಬಹಳಷ್ಟು ರೈತರು ತಮ್ಮ ದನಗಳನ್ನು ಹೊರಗೆ ತರುತ್ತಿಲ್ಲ. ವರ್ಷಕ್ಕೊಮ್ಮೆ ಬಸವಣ್ಣ ಜಾತ್ರೆ ಇರುವುದರಿಂದ ಹಗ್ಗ ಮತ್ತು ಇತರೆ ದನಕರುಗಳಿಗೆ ಬೇಕಾಗುವ ಸಾಮಾನುಗಳನ್ನು ಖರೀದಿ ಮಾಡಿದ್ದೇವೆ.
ಹಣಮಂತ ಈರಣ್ಣ ಆಳಂದ,
   ರೈತ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.