ಖರ್ಗೆ ಕೈ ಹಿಡಿಯುವುದೇ ಮೈತ್ರಿ ?

ಗುರುಮಠಕಲ್ನಲ್ಲಿ ಸೋಲು ಗೆಲುವು ಲೆಕ್ಕಾಚಾರ, ಬಿಜೆಪಿಗೆ ಲಾಭವಾಗುವುದೇ ಮತದಾರರ ನಿರ್ಧಾರ ?

Team Udayavani, Apr 27, 2019, 10:12 AM IST

27-April-2

ಯಾದಗಿರಿ: ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರ ಕಲಬುರಗಿ ಲೋಕಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಕಾಂಗ್ರೆಸ್‌ ಭದ್ರ ಕೋಟೆ ಎಂದೇ ಹೆಸರಾಗಿದ್ದ ಕ್ಷೇತ್ರದಲ್ಲೀಗ ಸೋಲು ಗೆಲುವಿನ ಲೆಕ್ಕಾಚಾರ ಚರ್ಚೆಗೆ ಆಹಾರವಾಗಿದೆ.

ಕಾಂಗ್ರೆಸ್‌ ಕೋಟೆ ಭೇದಿಸಿ ಜೆಡಿಎಸ್‌ನ ನಾಗನಗೌಡ ಕಂದಕೂರ ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಮೈತ್ರಿಯಾಗಿರುವುದರಿಂದ ಕಲಬುರಗಿ ಲೋಕಸಭೆ ಕ್ಷೇತ್ರದ ಗುರುಮಠಲ್ ವಿಧಾನ ಸಭೆಯಲ್ಲಿ ಮೈತ್ರಿ ವರ್ಕೌಟ್ ಆಗಬಹುದೇ ಎನ್ನುವ ಕುರಿತು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮತದಾನ ಕೇವಲ ಒಂದು ದಿನ ಉಳಿದಿರುವಾಗ ಜೆಡಿಎಸ್‌ನವರು ಕಡಿಮೆ ಸಮಯದಲ್ಲಿ ಏನು ಪ್ರಭಾವ ಬೀರಲಾಗಿಲ್ಲ ಎನ್ನುವ ಜನರ ಗುಸು ಗುಸು ಮಾತು ಒಂದೆಡೆ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಕಲಬುರಗಿ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿನಿಂದಲೂ ಗುರುಮಠಕಲ್ನಲ್ಲಿ ಹಿಡಿತ ಹೊಂದಿದ್ದು, ಅವರಿಗೆ ಲಾಭವಾಗಲಿದೆ ಎನ್ನಲಾಗುತ್ತಿದೆ.

ಈ ಹಿಂದಿನ ಚುನಾವಣೆಗಳ ಟ್ರೆಂಡ್‌ ಬೇರೆನೇ ಇತ್ತು. ಈ ಚುನಾವಣೆ ದೇಶದ ಚುನಾವಣೆಯಾಗಿದೆ. ಗುರುಮಠಕಲ್ ನಗರದ ಹಿಂದಿನಿಂದಲೂ ಬಿಜೆಪಿಗೆ ಲೀಡ್‌ ನೀಡುತ್ತ ಬಂದಿದೆ. ಈ ಬಾರಿ ದೇಶದ ವಿಚಾರಗಳು ಮತದಾರರ ತಲೆಹೊಕ್ಕಿರುವುದು ಬಿಜೆಪಿಗೆ ಲಾಭವಾಗಲಿದೆ ಎನ್ನುವ ಮಾತು ಬಿಜೆಪಿಗರದ್ದು. ಪ್ರತಿ ಗ್ರಾಮದಲ್ಲಿಯೂ ದೇಶದ ವಿಚಾರ ಮತದಾರರು ಯೋಚಿಸುವ ಮಟ್ಟಕ್ಕೆ ಅರಿವು ಮೂಡಿರುವುದು ಕಮಲಕ್ಕೆ ಸ್ಫೂರ್ತಿಯಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಇದೆಲ್ಲಕ್ಕೂ ಮಿಗಿಲಾಗಿ 2014ರ ಚುನಾವಣೆಗಿಂತ 2019ರ ಚುನಾವಣೆಯಲ್ಲಿ ಗುರುಮಠಕಲ್ನಲ್ಲಿ ಶೇಕಡವಾರು ಮತದಾನ ಹೆಚ್ಚಾಗಿರುವುದು ಬಿಜೆಪಿಗೆ ಲಾಭವಾಗಬಹುದಾ ಎನ್ನುವ ಅಂಶವೂ ಪ್ರಮುಖವಾಗಿದೆ. 2014ರಲ್ಲಿ ಒಟ್ಟು 213293 ಮತದಾರರಲ್ಲಿ 61069 ಪುರುಷರು 61245 ಮಹಿಳೆಯರು ಮತ ಚಲಾಯಿಸಿದ್ದರಿಂದ ಶೇ.57.35 ಮತದಾನವಾಗಿದ್ದು, ಗುರುಮಠಕಲ್ನಲ್ಲಿ ಕಾಂಗ್ರೆಸ್‌ 2700ಕ್ಕೂ ಲೀಡ ಪಡೆದಿತ್ತು. 2019ರಲ್ಲಿ 245251 ಮತದಾರರಲ್ಲಿ 73714 ಪುರುಷ, 74062 ಮಹಿಳೆಯರು, ಇತರೆ ಇಬ್ಬರು ತಮ್ಮ ಹಕ್ಕು ಚಲಾಯಿಸಿದ್ದು ಶೇ. 60.31ಮತದಾನ ದಾಖಲಾಗಿದೆ.

ಮೈತ್ರಿ ಸರ್ಕಾರ ಇರುವುದರಿಂದ ಕೆಲವು ಕಡೆ ಸಹಾಯವಾಗುತ್ತದೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 2700ಕ್ಕೂ ಹೆಚ್ಚು ಲೀಡ್‌ ದೊರೆತಿತ್ತು. ಈ ಬಾರಿ ಗುರುಮಠಕಲ್ ನಗರದಲ್ಲಿ 1 ಸಾವಿರ ಲೀಡ್‌ ಮತ್ತು ಕ್ಷೇತ್ರದಲ್ಲಿ 15 ಸಾವಿರ ಲೀಡ್‌ ಪಡೆಯುವ ವಿಶ್ವಾಸವಿದೆ.
ಮಹಿಪಾಲರೆಡ್ಡಿ ಹತ್ತಿಕುಣಿ,
  ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಮಾತ್ರವಲ್ಲದೇ ಗುರುಮಠಕಲ್ನಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಮೈತ್ರಿ ಅಭ್ಯರ್ಥಿಪರ ಉತ್ತಮ ವಾತಾವರಣ ಕಂಡು ಬಂದಿದೆ. ಹೆಚ್ಚಿನ ಮತಗಳು ಮೈತ್ರಿ ಅಭ್ಯರ್ಥಿಗೆ ದೊರೆಯುತ್ತವೆ. ಇದರಲ್ಲಿ ಯಾವುದೇ ಸಂಶಯವಿಲ್ಲ.
•ಶರಣು ಆವುಂಟಿ,
ಜೆಡಿಎಸ್‌ ಮತಕ್ಷೇತ್ರ ಅಧ್ಯಕ್ಷ

ಈ ಹಿಂದಿನ ಚುನಾವಣೆಗಳೇ ಬೇರೆ. ಈ ಚುನಾವಣೆಯಲ್ಲಿ ಮತದಾರರು ಸಾಕಷ್ಟು ಅಂಶ ಗಮನದಲ್ಲಿರಿಸಿಕೊಂಡು ಮತ ನೀಡಿದ್ದಾರೆ. ಅತ್ಯಂತ ಉಲ್ಲಾಸದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರಿಂದ ಶೇಕಡಾವಾರು ಮತದಾನವೂ ಹೆಚ್ಚಾಗಿದೆ. ಮೋದಿ ಅಲೆ ಪ್ರಭಾವ ಬೀರಿರುವುದು ಕಂಡು ಬಂದಿದೆ.
•ಚಂದುಲಾಲ್ ಚೌಧರಿ,
ಬಿಜೆಪಿ ನಗರ ಘಟಕ ಅಧ್ಯಕ್ಷ

ಅನೀಲ ಬಸೂದೆ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.