ಸಾರಿಗೆ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ
ಅಧ್ಯಕ್ಷರಾಗಿ ಸಿದ್ದಣ್ಣ ಕೊಳಕೂರ-ಉಪಾಧ್ಯಕ್ಷರಾಗಿ ಅಜಯಕುಮಾರ
Team Udayavani, May 23, 2019, 5:15 PM IST
ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ದಣ್ಣ ಬಸಣ್ಣ ಸಿಕೇದ್ ಕೋಳಕೂರ, ಉಪಾಧ್ಯಕ್ಷರಾಗಿ ಅಜಯಕುಮಾರ ಬಾಬುರಾವ ಆಯ್ಕೆಯಾದರು.
ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘದ 2019-2024ನೇ ಸಾಲಿನ ಅಧ್ಯಕ್ಷರಾಗಿ ಸಿದ್ದಣ್ಣ ಬಸಣ್ಣ ಸಿಕೇದ್ ಕೋಳಕೂರ, ಉಪಾಧ್ಯಕ್ಷರಾಗಿ ಅಜಯಕುಮಾರ ಬಾಬುರಾವ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಕಳೆದ ಮೇ 13ರಂದು ನಡೆದ ಸಂಘದ ನಿರ್ದೇಶಕರ ಚುನಾವಣೆಯಲ್ಲಿ 16 ಜನ ಚುನಾಯಿತರಾಗಿದ್ದರು. ಹೀಗಾಗಿ ಆಯ್ಕೆಯಾದ ನಿರ್ದೇಶಕರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿದ್ಧಣ್ಣ ಸಿಕೇದ್ ಹಾಗೂ ಶಿವಪುತ್ರಪ್ಪ ಬೆಳಮಗಿ ಸ್ಪರ್ಧಿಸಿದ್ದರು. ಸಿಕೇದ್ ಅವರು 11 ಮತ ಪಡೆದು ಅಧ್ಯಕ್ಷರಾಗಿ ಚುನಾಯಿರಾದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಅಜಯಕುಮಾರ ಬಾಬುರಾವ ಹಾಗೂ ರಾಜಕುಮಾರ ಯಕ್ಕಂಚಿ ಸ್ಪರ್ಧಿಸಿದ್ದರು. ಅಜಯಕುಮಾರ 11 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣೆಯಲ್ಲಿ ನಿರ್ದೇಶಕರಾದ ನಾಗೇಶ ಪೂಜಾರಿ, ವೈಜನಾಥ ಪಾಟೀಲ, ಸಿದ್ಧರಾಮ ಕಲಶೆಟ್ಟಿ, ದೇವಿಂದ್ರಪ್ಪ ಗಿರೆಪ್ಪ ಕಪನೂರ ಖಾನಾಪುರ, ರುಕೋದೀನ್, ಮಲ್ಲಪ್ಪ ಜವಳಗಿ, ಸುಮಿತ್ರ ಕಾಂಬಳೆ, ಶರಣಮ್ಮ ಚಂದ್ರಕಾಂತ ಪಾಲ್ಗೊಂಡಿದ್ದರು. ನಂತರ ವಿಜಯೋತ್ಸವ ನಡೆಯಿತು.
ನೌಕರರ ಸಂಘದ ಹಿರಿಯ ಪದಾಧಿಕಾರಿಗಳಾದ ಚಂದ್ರಕಾಂತ ಗದ್ದುಗೆ, ಬಸವರಾಜ ಕಣ್ಣಿ, ಭೀಮರಾವ ಯರಗೋಳ, ಎಸ್.ಎಸ್. ಸಜ್ಜನ, ಇಸ್ಮಾಯಿಲ್ ಪಟೇಲ್, ರಾಮಚಂದ್ರ ಹಯ್ನಾಳಕರ, ಸಂಗಮನಾಥ ರಬಶೆಟ್ಟಿ ಸೇರಿದಂತೆ ಮುಂತಾದವರಿದ್ದರು.
ಸಂಘದ ಪುನಶ್ಚೇತನಕ್ಕೆ ಕ್ರಮ: ನೌಕರರ ಪತ್ತಿನ ಸಹಕಾರ ಸಂಘದ ಆರ್ಥಿಕ ಪುನಶ್ಚೇತನಕ್ಕೆ ದಿಟ್ಟ ಹೆಜ್ಜೆ ಇಡಲಾಗುವುದು ಎಂದು ಅಧ್ಯಕ್ಷರಾದ ಬಳೀಕ ಸಿದ್ಧಣ್ಣ ಸಿಕೇದ್ ಕೊಳಕೂರ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್