ಚುನಾವಣೆ ಕಾವಲ್ಲಿ ನೀರಿನ ಸಮಸ್ಯೆ ಗೌಣ
ಬತ್ತಿರುವ ಬಾವಿ ಬಳಿ ಅಲೆದಾಡುತ್ತಿರುವ ಜನತೆ ಮಹಾನಗರಕ್ಕೆ ಟ್ಯಾಂಕರ್ ನೀರು ಸರಬರಾಜು
Team Udayavani, Apr 13, 2019, 10:29 AM IST
ಕಲಬುರಗಿ: ಮಹಾನಗರದಲ್ಲಿ ಮಧ್ಯಾಹ್ನ ರಣ-ರಣ ಬಿಸಿಲಿನ ನಡುವೆ ಬಂದಿದ್ದ ಟ್ಯಾಂಕರ್ಗೆ ಮುಗಿಬಿದ್ದ ಜನತೆ.
ಕಲಬುರಗಿ: ಪ್ರಸಕ್ತವಾಗಿ ಮುಂಗಾರು-ಹಿಂಗಾರು0 ಎರಡೂ ಕಾಲದ ಮಳೆ ಸಂಪೂರ್ಣ ಕೈ ಕೊಟ್ಟ ಪರಿಣಾಮ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಹಿಂದೆಂದೂ ಕಂಡರಿಯದಷ್ಟು ಉಲ್ಬಣಗೊಂಡಿದ್ದರೂ ಲೋಕಸಭೆ ಚುನಾವಣೆ ಕಾವಿನಲ್ಲಿ ಗೌಣವಾಗಿ ಕಾಣಿಸುತ್ತಿದೆ.
ಕಲಬುರಗಿ ಮಹಾನಗರಕ್ಕೆ ಈ ಹಿಂದೆ ಒಮ್ಮೆಯೂ 12ರಿಂದ 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗಿಲ್ಲ. ಬಹಳ ತಡವೆಂದರೆ ವಾರಕ್ಕೊಮ್ಮೆಯಾದರೂ ನೀರು ಪೂರೈಕೆಯಾಗಿದೆ. ಮಹಾನಗರದಲ್ಲಿ ಈ ಮುಂಚೆ ನಗರದ ಹೊರ ಭಾಗದ ಕೆಲ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. ಆದರೆ ಈಗ ಮಹಾನಗರಾದ್ಯಂತ ಟ್ಯಾಂಕರ್ ಮೂಲಕ ನೀರು ಸರಬರಾಜು ಎನ್ನುವುದಾದರೆ ಕುಡಿಯುವ ನೀರಿನ ಪರಿಸ್ಥಿತಿ ಭೀಕರತೆ ನಿರೂಪಿಸುತ್ತದೆ.
ಹಳ್ಳಿಗಳಲ್ಲಿ ಜನರು, ಅದರಲ್ಲೂ ಮಹಿಳೆಯರು ಹೊಲ ಗದ್ದೆಗಳಲ್ಲಿನ ಬತ್ತಿ ಹೋಗುತ್ತಿರುವ ಬಾವಿಯತ್ತ ಅಲೆದಾಡಿ ನೀರು ತರುತ್ತಿದ್ದಾರೆ. ಆಗೊಮ್ಮೆ-ಈಗೊಮ್ಮೆ ಬರುವ ಟ್ಯಾಂಕರ್ಗಳಿಗೆ ಜನ ಮುಗಿ ಬೀಳುತ್ತಿದ್ದು, ಯಾರ ಕೈ ಜೋರು ಇರುತ್ತದೆಯೋ ಅವರಿಗೆ ನೀರು ಎನ್ನುವಂತಾಗಿದೆ. ತೋಟಗಳ ಬಾವಿಗಳಲ್ಲಿ ಇರುವ ನೀರನ್ನು ಮಾಲೀಕರು ತಮ್ಮ ಬೆಳೆಗಳಿಗೆ ಬೀಡದೇ ಜನರ ಉಪಯೋಗಕ್ಕೆ ಮೀಸಲಿಟ್ಟರೆ, ಕೆಲವು ಕಡೆ ನೀರಿಲ್ಲದಿದ್ದರೆ ತೋಟಗಾರಿಕೆ ಬೆಳೆಗಳೆಲ್ಲ ಒಣಗಿ ಹೋಗಿವೆ. ಕೆಲವು ವಸತಿ ಪ್ರದೇಶಗಳಲ್ಲಂತೂ ಬೆಳಗಿನ ಜಾವ ಮೂರ್ನಾಲ್ಕು ಕಿ.ಮೀ ನಡೆದು ನೀರು ತರಲಾಗುತ್ತಿದೆ.
ಚುನಾವಣೆ ಕಾವು: 43 ಡಿಗ್ರಿ ಸೆಲ್ಸಿಯಸ್ ಬಿಸಿಲಿಗಿಂತ ಲೋಕಸಭೆ ಚುನಾವಣೆ ಕಾವೇ ಜೋರಾಗಿದೆ. ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದರೂ ಅದರ ಕಡೆ ಲಕ್ಷ್ಯ ವಹಿಸದಿರುವ ಮಟ್ಟಿಗೆ ಲೋಕಸಭಾ ಚುನಾವಣೆ ಜೋರಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ಯಾರೇ ಎನ್ನದ ಪರಿಣಾಮ ಚುನಾವಣೆ ವಿಷಯದ್ದೇ ಚರ್ಚೆ ವ್ಯಾಪಕಗೊಂಡು ಕುಡಿಯುವ ನೀರಿನ ಸಮಸ್ಯೆ ಗೌಣವಾಗುತ್ತಿದೆ.
ಚುನಾವಣಾ ಅಭ್ಯರ್ಥಿಗಳಿಗೆ ಹಾಗೂ ಪ್ರಚಾರ ಮಾಡುವ ವಿವಿಧ ಪಕ್ಷಗಳ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಖಾಲಿ ಕೊಡಗಳ ದರ್ಶನವಾಗುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಕೆಲ ಮುಖಂಡರು ಚುನಾವಣೆ ಮುಗಿಯಲಿ ನಂತರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂಬುದಾಗಿ ಹೇಳುತ್ತಿರುವ ಪರಿಣಾಮ, ಮಹಿಳೆಯರು ಹಾಗೂ ಗ್ರಾಮಸ್ಥರು ಸುಮ್ಮನಾಗಿದ್ದಾರೆ ಎನ್ನಲಾಗುತ್ತಿದೆ.
87 ಹಳ್ಳಿಗಳಿಗೆ ಟ್ಯಾಂಕರ್ ನೀರು
ಕಲಬುರಗಿ ಜಿಲ್ಲೆಯಲ್ಲಿ 87 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಫಜಲಪುರ ತಾಲೂಕಿನಲ್ಲಿ 18 ಹಳ್ಳಿಗಳು, ಆಳಂದ ತಾಲೂಕಿನಲ್ಲಿ 31, ಚಿಂಚೋಳಿ ತಾಲೂಕಿನಲ್ಲಿ 10, ಚಿತ್ತಾಪುರ ತಾಲೂಕಿನಲ್ಲಿ
06, ಕಲಬುರಗಿ ತಾಲೂಕಿನಲ್ಲಿ 04, ಜೇವರ್ಗಿ ತಾಲೂಕಿನಲ್ಲಿ 17 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅದೇ ರೀತಿ ಕಲಬುರಗಿ ಮಹಾನಗರದಲ್ಲಿ 25 ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ